Kannada News: ವೈದ್ಯರನ್ನು ದೇವರು ಎಂದು ಕೊಳ್ಳುವ ಜನರು, ಆಪರೇಷನ್ ಮಾಡಿಸಿಕೊಳ್ಳಲು ಹೋದಾದ ಆ ಡಾಕ್ಟರ್ ಏನು ಮಾಡಿದ ಗೊತ್ತೇ? ಮಹಿಳೆ ಶಾಕ್.
Kannada News: ಪ್ರಪಂಚದಲ್ಲಿ ಏನೆಲ್ಲಾ ನಡೆಯುತ್ತದೆ ಎಂದು ಊಹೆ ಮಾಡಿಕೊಳ್ಳೋದಕ್ಕೂ ಆಗೋದಿಲ್ಲ. ವೈದ್ಯೋನಾರಾಯಣೋ ಹರಿ ಎಂದು ಹೇಳುತ್ತಾರೆ. ಆದರೆ ಆ ವೈದ್ಯರೇ ತಪ್ಪು ಮಾಡಿದರೆ ಏನು ಮಾಡಬೇಕಾಗುತ್ತದೆ? ಇಂಥದ್ದೇ ಒಂದು ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ. ಫೂಲ್ಬಗಾನ್ ನಲ್ಲಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವೈದ್ಯರೊಬ್ಬರು ಅರಿವಳಿಕೆ ನೀಡಿದ್ದ ಮಹಿಳಾ ರೋಗಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಳಕಿಹೆ ಬಂದಿದೆ. ಆಕೆ ಪಿತ್ತಕೋಶದ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಆಸ್ಪತ್ರೆಗೆ ದಾಖಲಾಗಿದ್ದರು.
ಗುರುವಾರ ಬೆಳಗ್ಗೆ 9ಗಂಟೆಗೆ ಆಪರೇಷನ್ ಥಿಯೇಟರ್ ಗೆ ಕರೆದುಕೊಂಡು ಹೋಗಿ, ಅರಿವಳಿಕೆ ನೀಡಿ ಶಸ್ತ್ರಚಿಕಿತ್ಸೆ ನೀಡಲಾಗಿದೆ, 11 ಗಂಟೆ ವೇಳೆಗೆ ಆಪರೇಷನ್ ಮುಗಿದಿದೆ. ನಂತರ ರೋಗಿಗೆ ಪ್ರಜ್ಞೆ ಸ್ವಲ್ಪವಾಗಿ ಬರಲು ಶುರುವಾದಾಗ, ತನ್ನ ಮೇಲೆ ಯಾರೋ ಕಿರುಕುಳ ನೀಡುತ್ತಿದ್ದಾರೆ ಎನ್ನುವುದು ಅರಿವಾಗಿದೆ. ಆಕೆ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ವಲ್ಪವೇ ಪ್ರಜ್ಞೆ ಬಂದು ಸ್ವಲ್ಪ ಕಣ್ಣು ತೆಗೆದು ನೋಡಿದಾಗ, ಆತ ತನ್ನನ್ನು ಅಪ್ಪಿಕೊಳ್ಳುತ್ತಿರುವುದು ಅರಿವಾಯಿತು, ಆ ಸಮಯದಲ್ಲಿ ತುಂಬಾ ನೋವಾಗುತ್ತಿತ್ತು.. ಇದನ್ನು ಓದಿ.. Kannada News: ದಿಡೀರ್ ಎಂದು ಪಾತ್ರ ಮುಗಿಸಿ ಕಣ್ಮರೆಯಾಗಿದ್ದ ಕನ್ನಡತಿ ರತ್ನಮಾಲಾ ರವರು ಕಾಣಿಸಿಕೊಂಡದ್ದು ಎಲ್ಲಿ ಗೊತ್ತೇ??
![](http://routineofnews.com/wp-content/uploads/2023/01/kannada-news-kolkata-hospitak-1024x536.jpg)
ಅದರ ಜೊತೆಗೆ ಅರಿವಳಿಕೆ ನೀಡಿದ್ದ ಕಾರಣ ಆತನನ್ನು ತಡೆಯಲು ಸಾಧ್ಯವಾಗಲಿಲ್ಲ. ಅಲ್ಲಿ ನನಗೆ ಆಗಿದ್ದೇನು ಎಂದು ಪೂರ್ತಿಯಾಗಿ ನೆನಪಿಲ್ಲ. ಆ ಸಮಯದಲ್ಲಿ ಯಾವ ಮಹಿಳಾ ಸಿಬ್ಬಂದಿ ಕೂಡ ಅಲ್ಲಿರಲಿಲ್ಲ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾರೆ. ತನಗೆ ಪ್ರಜ್ಞೆ ಬಂದಾಗ, ಎದೆಯ ಭಾಗದಲ್ಲಿ ಆಗಿದ್ದ ಗುರುತುಗಳನ್ನು ನೋಡಿದಾಗ ಏನು ನಡೆದಿರಬಹುದು ಎಂದು ಅರ್ಥವಾಗಿದೆ ಎಂದು ಹೇಳಿ ವೈದ್ಯರ ಮೇಲೆ ದೂರು ನೀಡಿದ್ದಾರೆ. ಫೂಲ್ಬಗಾನ್ ಪೊಲೀಸ್ ಠಾಣೆಯ ಅಧಿಕಾರಿಗಳು ಆರೋಪಿಯ ವಿರುದ್ಧ 354ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನು ಓದಿ..Kannada News: ಒಂದೇ ಊರಿನವರು ಪ್ರೀತಿ ಮಾಡಿ ಮದುವೆಯಾದರು, ಇಬ್ಬರನ್ನು ಸುಮ್ಮನೆ ಬಿಟ್ಟ ಹೆಣ್ಣಿನ ಕಡೆಯವರು ಕೊನೆಯಲ್ಲಿ ಮಾಡಿದ್ದೇನು ಗೊತ್ತೆ? ಶಾಕ್ ಆದ ಗ್ರಾಮ.