ನೈಜ ಭವಿಷ್ಯ ಹೇಳುವ ಮೂಲಕ ತಲ್ಲಣ ಸೃಷ್ಟಿಸುತ್ತಿರುವ ವೇಣು ಸ್ವಾಮಿ, ಬಾಲಯ್ಯ ವ್ಯಕ್ತಿತ್ವದ ಬಗ್ಗೆ ತಿಳಿಸಿದ ಷಾಕಿಂಗ್ ಸತ್ಯ ಏನು ಗೊತ್ತೇ??

17

Get real time updates directly on you device, subscribe now.

ಖ್ಯಾತ ಜ್ಯೋತಿಷಿ ವೇಣುಸ್ವಾಮಿ ಬಹುತೇಕ ಎಲ್ಲರಿಗೂ ಚಿರಪರಿಚಿತ.  ಹೆಚ್ಚಾಗಿ ಸಿನಿಮಾ ಸೆಲೆಬ್ರಿಟಿಗಳಿಗೆ ಸಂಬಂಧಿಸಿದವರ ಜಾತಕದ ಬಗ್ಗೆ ಮಾತನಾಡಿ, ಜನಪ್ರಿಯರಾದರು. ಅನೇಕ ಸ್ಟಾರ್ ಹೀರೋಯಿನ್‌ ಗಳು ವೇಣು ಸ್ವಾಮಿ ಅವರಿಗಾಗಿ ಕ್ಯೂ ನಿಲ್ಲುತ್ತಾರೆ. ನಟಿಯರು ತಮ್ಮ ಭವಿಷ್ಯಕ್ಕಾಗಿ ವೇಣು ಸ್ವಾಮಿ ಅವರಿಂದ ಸಲಹೆ ತೆಗೆದುಕೊಳ್ಳುತ್ತಾರೆ ಹಾಗೂ ಪ್ರಾರ್ಥನೆಗಳನ್ನು ಸಹ ಮಾಡುತ್ತಾರೆ. ಅಂದು ನಟಿ ರಶ್ಮಿಕಾ ಕೂಡ ಹೀಗೆ ಪೂಜೆ ಮಾಡಿ ನಂತರ ಫೇಮಸ್ ಹೀರೋಯಿನ್ ಆದರು ಎನ್ನಲಾಗಿದೆ.

ಸಮಂತಾ ಮತ್ತು ನಾಗಚೈತನ್ಯ ವಿಚ್ಛೇದನದ ಬಗ್ಗೆ ಸಹ ವೇಣು ಸ್ವಾಮಿ ಭವಿಷ್ಯ ನುಡಿದಿದ್ದರು. ಇತ್ತೀಚೆಗಷ್ಟೇ ನಟಿ ನಯನತಾರ ಮತ್ತು ಅವರ ಪತಿ ನಿರ್ದೇಶಕ ವಿಘ್ನೇಶ್ ಶಿವನ್ ಅವರಿಗೆ ಸಂಬಂಧಿಸಿದ ವಿಷಯಗಳನ್ನು ಹಂಚಿಕೊಂಡಿದ್ದರು. ಆದರೆ ಇದೀಗ ಬಾಲಯ್ಯ ಬಾಬು ಬಗ್ಗೆ ವೇಣು ಸ್ವಾಮಿ ಮಾಡಿರುವ ಇತ್ತೀಚಿನ ಕಾಮೆಂಟ್‌ಗಳು ವೈರಲ್ ಆಗುತ್ತಿವೆ. ವೇಣುಸ್ವಾಮಿ ಅವರು ಬಾಲಯ್ಯ ಅವರನ್ನು ಹಲವು ಬಾರಿ ಭೇಟಿಯಾಗಿದ್ದು, ಅವರು ತುಂಬಾ ಸಮಚಿತ್ತ ವ್ಯಕ್ತಿಯಾಗಿದ್ದರು ಎಂದು ವಿವರಿಸಿದ್ದಾರೆ. ಬಾಲಯ್ಯ ಅವರನ್ನು ಬಹಳ ಹತ್ತಿರದಿಂದ ನೋಡಿದ್ದಾರೆ ಮತ್ತು ಅವರನ್ನು ತುಂಬಾ ಕರುಣಾಳು ಹೃದಯದ ವ್ಯಕ್ತಿ ಎಂದು ಹೊಗಳಿದ್ದಾರೆ. 

ಬಾಲಯ್ಯ ಅವರ ಬಗ್ಗೆ ಏನಾದರೂ ಚರ್ಚೆ ನಡೆದರೆ ನಾನೇ ಕರೆ ಮಾಡಿ ಏನಾಗಿದೆ ಎಂದು ತಿಳಿದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ ವೇಣು ಸ್ವಾಮಿ. ಬಾಲಯ್ಯ ಅವರ ಬಗ್ಗೆ ಹಲವರು ನೆಗಟಿವ್ ಆಗಿ ಅಪಪ್ರಚಾರ ಮಾಡುತ್ತಾರೆ ಆದರೆ ಬಾಲಯ್ಯ ಅಂತಹವರಲ್ಲ ಎಂದು ಹೇಳಿದ್ದಾರೆ ವೇಣು ಸ್ವಾಮಿ. ಅವರು ಅನೇಕ ಜನರನ್ನು ಹೊಂದಿರುವ ವ್ಯಕ್ತಿಯಾಗಿದ್ದು, ಅವರ ಬಗ್ಗೆ ಮಾಧ್ಯಮಗಳಲ್ಲಿ ಬರುವುದೆಲ್ಲವೂ ಸುಳ್ಳು ಎಂದು ಹೇಳಿದ್ದಾರೆ.  ಸದ್ಯ ಬಾಲಕೃಷ್ಣ ಕುರಿತು ಅವರು ಮಾಡಿರುವ ಕಾಮೆಂಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Get real time updates directly on you device, subscribe now.