Kannada News: ಡಿ ಬಾಸ್ ಗೆ ಚಪ್ಪಲಿ ಎಸೆತ ಪ್ರಕರಣಕ್ಕೆ ಟ್ವಿಸ್ಟ್ , ಇರುವುದು ಕೇವಲ ಒಂದು ವಾರ ಸಮಯ ಅಷ್ಟೇ. ಏನಾಗಿದೆ ಗೊತ್ತೇ?

31

Get real time updates directly on you device, subscribe now.

Kannada News: ನಿನ್ನೆಯಿಂದ ಎಲ್ಲೆಡೆ ಭಾರಿ ಚರ್ಚೆ ಆಗುತ್ತಿರುವ ವಿಷಯ ಹೊಸಪೇಟೆಯಲ್ಲಿ ನಟ ದರ್ಶನ್ ಅವರ ಮೇಲೆ ಚಪ್ಪಲಿ ಎಸೆದಿರುವುದು. ಇಂಥಹ ಒಂದು ದುರ್ಘಟನೆ, ಭಾನುವಾರ ಸಂಜೆ ಹೊಸಪೇಟೆಯಲ್ಲಿ ನಡೆದಿದೆ. ಕ್ರಾಂತಿ ಸಿನಿಮಾದ ಹಾಡು ಬಿಡುಗಡೆಗಾಗಿ ದರ್ಶನ್ ಅವರು ಕ್ರಾಂತಿ ಚಿತ್ರತಂಡದ ಜೊತೆಗೆ ಹೊಸಪೇಟೆಗೆ ಬಂದಿದ್ದರು. ಸಂಜೆ ನಡೆದ ಕಾರ್ಯಕ್ರಮದಲ್ಲಿ, ಜನ, ಕ್ರೌಡ್ ನಡುವೆ ದರ್ಶನ್ ಅವರ ಮೇಲೆ ಯಾರೋ ಕಿಡಿಗೇಡಿಗಳು ಚಪ್ಪಲಿ ಎಸೆದಿದ್ದಾರೆ. ಈ ಘಟನೆಯ ವಿಡಿಯೋ ಎಲ್ಲೆಡೆ ಭಾರಿ ವೈರಲ್ ಆಗಿದೆ.

ಇದನ್ನು ಮಾಡಿರುವುದು ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿ ಎಂದು ವಿಚಾರ ಒಂದು ಚರ್ಚೆಯಾಗುತ್ತಿದೆ. ಆದರೆ ಇದಕ್ಕೆಲ್ಲ ಈಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಕರುನಾಡ ವಿಜಯ ಸೇನೆಯವರು, ರಸ್ತೆಯಲ್ಲಿ ಬ್ಯಾನರ್ ಹಿಡಿದು ಈ ಘಟನೆ ಬಗ್ಗೆ ಮಾತನಾಡಿದ್ದಾರೆ. ಆ ರೀತಿ ಮಾಡಿದರು ಕೂಡ, ಪರ್ವಾಗಿಲ್ಲ ಬಿಡು ಚಿನ್ನ ಎಂದು ಹೇಳಿದ್ದು ದರ್ಶನ್ ಅವರ ದೊಡ್ಡ ಗುಣ. ಒಬ್ಬ ನಟನಿಗೆ ಈ ರೀತಿ ಅವಮಾನ ಮಾಡಬಾರದು. ದರ್ಶನ್ ಅವರು ಇದಕ್ಕೆ ಪ್ರಚೋದನೆ ನೀದಿದ್ದರೆ, ಅವರ ಅಭಿಮಾನಿಗಳು ಬೀದಿಗೆ ಇಳಿದು ಪ್ರತಿಭಟನೆ ಮಾಡುತ್ತಿದ್ದರು, ಆದರೆ ಅದನ್ನು ಅಲ್ಲಿಗೆ ಬಿಟ್ಟಿದ್ದು ಅವರ ವ್ಯಕ್ತಿತ್ವವನ್ನ ತೋರಿಸುತ್ತದೆ. ಇದನ್ನು ಓದಿ.. Kannada News: ಸೋದರಳಿಯ ಎಂದು ಮನೆಗೆ ಬಿಟ್ಟುಕೊಂಡರೆ, ಸ್ವಂತ ಅತ್ತೆಗೆ 17 ವರ್ಷದ ಹುಡುಗ ಮಾಡಿದ್ದೇನು ಗೊತ್ತೆ??

ಆದರೆ ಇದನ್ನು ಇಲ್ಲಿಗೆ ಬಿಡಬಾರದು, ಅಂತಹ ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು. ಇನ್ನು ಒಂದು ವಾರ ಟೈಮ್ ಕೊಡ್ತೀವಿ. ಅಷ್ಟರ ಒಳಗೆ, ಇಂಥ ಕೃತ್ಯ ಮಾಡಿದ ವ್ಯಕ್ತಿಯನ್ನು ಹಿಡಿದು, ಅವನಿಂದ ನಿಜ ವಿಷಯವನ್ನು ಹೊರ ತರಿಸಬೇಕು. ಇಲ್ಲದೆ ಹೋದರೆ, ಚಿತ್ರದುರ್ಗದಲ್ಲಿ ಇರುವ ಯಾವುದೇ ಚಿತ್ರಮಂದಿರದಲ್ಲಿ ಸಿನಿಮಾಗಳು ಓಡುವುದಿಲ್ಲ. ಆ ರೀತಿ ಮಾಡುತ್ತೇವೆ, ಇದು ಕರುನಾಡ ವಿಜಯ ಸೇನೆ ಕೊಡುತ್ತಿರುವ ಎಚ್ಚರಿಕೆ..ಎಂದು ವಾರ್ನಿಂಗ್ ನೀಡಲಾಗಿದೆ. ಪೊಲೀಸರು ಇದನ್ನು ಹೇಗೆ ತೆಗೆದುಕೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Kannada News: ಹುಡುಗ ಇದ್ದಾನೆ ಎಂದು ಕೂಡ ನೋಡದೆ, ಮಂಟಪದಲ್ಲಿಯೇ ಎಲ್ಲರೂ ಬಾಯ್ಬಿಟ್ಟು ನೋಡುವಂತೆ ಡಾನ್ಸ್ ಮಾಡಿದ ಹೆಣ್ಣು. ಹೇಗಿದೆ ಗೊತ್ತೇ ವಿಡಿಯೋ?

Get real time updates directly on you device, subscribe now.