Kannada Astrology: ಈ ರಾಶಿಗಳಿಗೆ ಮೊದಲು ಯಶಸ್ಸು ಅಷ್ಟು ಇರಲ್ಲ, ಆದರೆ 36 ವರ್ಷ ದಾಟಿದ ನಂತರ ಇವರೇ ರಾಜ: ಯಾವ ರಾಶಿಗಳಿಗೆ ಗೊತ್ತೇ??

16

Get real time updates directly on you device, subscribe now.

Kannada Astrology: ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿರುವ ಹಾಗೆ, ಮೇಷ ರಾಶಿಯವರಲ್ಲಿ ವಿಶೇಷ ವ್ಯಕ್ತಿತ್ವ ಇರುತ್ತದೆ, ಅದರಿಂದಲೇ ಅವರಿಗೆ ಅದೃಷ್ಟವೂ ಬರುತ್ತದೆ. ಈ ರಾಶಿಯ ಅಧಿಪತಿ ಮಂಗಳ ಗ್ರಹ ಆಗಿರುವುದರಿಂದ, ಈ ರಾಶಿಯವರಿಗೆ ಧೈರ್ಯ ಮತ್ತು ಶಕ್ತಿ ಹೆಚ್ಚಾಗಿರುತ್ತದೆ. ಇವರಲ್ಲಿ ಮಗುವಿನಂತ ವ್ಯಕ್ತಿತ್ವ ಇರುವುದರಿಂದ ಎಲ್ಲರನ್ನು ಬೇಗ ಆಕರ್ಷಿಸುತ್ತಾರೆ. ಇವರು ಯೋಚನೆ ಮಾಡುವ ಶೈಲಿ ಸ್ವತಂತ್ರ್ಯವಾಗಿರುತ್ತದೆ. ಕೆಲಸದಲ್ಲಿ ಅಪಾಯ ಬರಬಹುದು ಎನ್ನುವ ಭಯದಿಂದ ಇವರು ಹಿಂದಕ್ಕೆ ಸರಿಯುವುದಿಲ್ಲ..

ಪರಿಸ್ಥಿತಿಗಳನ್ನು ಧೈರ್ಯವಾಗಿ ಎದುರಿಸುವ ಇವರು, ಹಾಗೆಯೇ ಇವರಿಗೆ ಬಹಳ ಬೇಗ ಬೇಸರವೂ ಆಗುತ್ತದೆ. ಸಂಗಾತಿಗೆ ಅತ್ಯುತ್ತಮವಾದ ಜೊತೆಗಾತಿ ಆಗುತ್ತಾರೆ, ತಮ್ಮ ಸಂಗಾತಿಯ ಮೇಲೆ ಬಹಳ ಕಾಳಜಿ, ಪ್ರೀತಿ, ವಿಶ್ವಾಸ ಮತ್ತು ನಂಬಿಕೆ ಇಟ್ಟುಕೊಂಡಿರುತ್ತಾರೆ. ಇವರು ತಮ್ಮ ಜೀವನಕ್ಕೆ ತಮ್ಮದೇ ನಿಯಮಗಳನ್ನು ಹಾಕಿಕೊಂಡಿರುತ್ತಾರೆ, ಅದನ್ನೇ ಅನುಸರಿಸಿಕೊಂಡು ಬರುತ್ತಾರೆ. ಈ ರಾಶಿವರಿಗೆ 36 ವಯಸ್ಸಿನಲ್ಲಿ ಹೆಚ್ಚು ಯಶಸ್ಸು ಸಿಗುತ್ತದೆ. ಇವರ ಜೀವನದಲ್ಲಿ, 16, 22, 28 ಮತ್ತು 32ನೇ ವಯಸ್ಸು ಕೂಡ ಬಹಳ ಮುಖ್ಯವಾದ ವರ್ಷಗಳಾಗುತ್ತದೆ.

ಈ ವಯಸ್ಸುಗಳಲ್ಲಿ ಇವರು ಮಾಡುವ ಕೆಲಸಗಳಿಂದ ಯಶಸ್ಸು ಪಡೆಯುತ್ತಾರೆ. ಈ ರಾಶಿಯವರ ಜೀವನದಲ್ಲಿ ಹಣದ ವಿಚಾರದಲ್ಲಿ ಎಂದಿಗೂ ಸಮಸ್ಯೆ ಆಗುವುದಿಲ್ಲ. ಓಂ ಗ್ರನ್ ಗ್ರೀನ್ ಗ್ರೌನ್ ಸ: ಗುರ್ವೇ ನಮಃ’ ಅಥವಾ ‘ಓಂ ಬೃಹಸ್ಪತಯೇ ನಮಃ.. ಈ ಮಂತ್ರ ಪಠಣೆ ಮಾಡುವುದರಿಂದ ಈ ರಾಶಿಯವರಿಗೆ ಒಳ್ಳೆಯದಾಗುತ್ತದೆ. ಇದರ ಜೊತೆಗೆ ಗುರುವಾರದ ದಿನ ಬೇಳೆ ಕಾಳು, ಹಳದಿ ಬಟ್ಟೆ, ಹಳದಿ ಬಣ್ಣದ ಸಿಹಿ ತಿಂಡಿಗಳನ್ನು ಮಾಡುವುದರಿಂದ ಒಳ್ಳೆಯ ಫಲ ಸಿಗುತ್ತದೆ.

Get real time updates directly on you device, subscribe now.