Cricket News: ಸೆಮಿಫೈನಲ್ ಹೀನಾಯವಾಗಿ ಸೋತ ಭಾರತಕ್ಕೆ ಹೊಸ ಹಣೆಪಟ್ಟಿ ಕಟ್ಟಿದ ಮಾಜಿ ನಾಯಕ ಕಪಿಲ್ ದೇವ್. ಹೇಳಿದ್ದೇನು ಗೊತ್ತೇ?

62

Get real time updates directly on you device, subscribe now.

Cricket News: ಗುರುವಾರ ನಡೆದ ಟಿ20 ವಿಶ್ವಕಪ್ (T20 World Cup) ನ್ ಎರಡನೇ ಸೆಮಿ ಫೈನಲ್ಸ್ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ (India vs England) ಎದುರು ಸೋತಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ, 20 ಓವರ್ ಗಳಲ್ಲಿ 6 ವಿಕೆಟ್ಸ್ ನಷ್ಟಕ್ಕೆ 168 ರನ್ಸ್ ಗಳಿಸಿತು. ಆದರೆ ಎರಡನೇ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ತಂಡದ ಅಲೆಕ್ಸ್ ಹೇಲ್ಸ್ ಮತ್ತು ಜೋಸ್ ಬಟ್ಲರ್ (Jos Buttler), ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. 10 ವಿಕೆಟ್ ಗಳನ್ನು ಉಳಿಸಿಕೊಂಡಿದ್ದ ಇಂಗ್ಲೆಂಡ್ ತಂಡ, 16 ಓವರ್ ಗಳಲ್ಲಿ 170 ರನ್ಸ್ ಸಿಡಿಸಿ, ಪಂದ್ಯವನ್ನು ಗೆದ್ದಿತು.

ಹೀಗೆ ಭಾರತ ತಂಡ ಸೆಮಿ ಫೈನಲ್ಸ್ ಹಂತದವರೆಗೂ ಬಂದು ಸೋತು ಮನೆಗೆ ಹೋಗಿದೆ. ಇದರಿಂದ ಅನೇಕರು ನಮ್ಮ ತಂಡವನ್ನು ಟೀಕೆ ಮಾಡುತ್ತಿದ್ದಾರೆ. ನೆಟ್ಟಿಗರು, ಕ್ರಿಕೆಟ್ ತಜ್ಞರು ಮತ್ತು ಮಾಜಿ ಕ್ರಿಕೆಟಿಗರು ಭಾರತ ತಂಡ ಮಾಡಿದ ತಪ್ಪನ್ನು ಎತ್ತಿ ಹಿಡಿಯುಟ್ಟಿದ್ದಾರೆ. ಹಲವರು ಹೇಳುತ್ತಿರುವುದು, ಆರಂಭಿಕ ಆಟಗಾರರಾದ ಕೆ.ಎಲ್.ರಾಹುಲ್ (K L Rahul) ಮತ್ತು ರೋಹಿತ್ ಶರ್ಮಾ (Rohit Sharma) ಅವರ ಬದಲಾಯಿಸಬೇಕು ಎಂದು. ಇನ್ನು ಕೆಲವರು ಹೆಡ್ ಕೋಚ್ ರಾಹುಲ್ ದ್ರಾವಿಡ್ (Rahul Dravid) ಮತ್ತು ಕ್ಯಾಪ್ಟನ್ ರೋಹಿತ್ ಶರ್ಮ ಅವರನ್ನು ಬದಲಾಯಿಸಿ ಎನ್ನುತ್ತಿದ್ದಾರೆ. ಇದೇ ವಿಷಯಕ್ಕೆ ಈಗ ಟೀಮ್ ಇಂಡಿಯಾದ ಕ್ರಿಕೆಟ್ ಲೆಜೆಂಡ್ ಕಪಿಲ್ ದೇವ್ (Kapil Dev) ಅವರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನು ಓದಿ.. Kannada News: ಅತ್ತ ರೂಪೇಶ್ ಶೆಟ್ಟಿಗಾಗಿ ಅಳುತ್ತಿರುವ ಸಾನ್ಯ.! ತನ್ನ ಹೆತ್ತ ತಾಯಿಯ ಬಗ್ಗೆ ಆಡಿದ ಮಾತು ನೋಡಿ. ಏನು ಹೇಳಿದ್ದಾರೆ ಗೊತ್ತೇ??

ಆದರೆ ಕಪಿಲ್ ದೇವ್ ಅವರು ನೀಡಿರುವ ಪ್ರತಿಕ್ರಿಯೆ ನೋಡಿ ಎಲ್ಲರೂ ಶಾಕ್ ಆಗಿರುವುದಂತೂ ಖಂಡಿತ, “ಈ ಸಮಯದಲ್ಲಿ ನಾವು ಭಾರತ ತಂಡವನ್ನು ಚೋಕರ್ಸ್ ಎಂದು ಕರೆಯಬಹುದು. ಅದು ಪರವಾಗಿಲ್ಲ. ವಿಶ್ವಕಪ್ ಸನಿಹವಾಗುತ್ತಿದ್ದ ಹಾಗೆ, ತಂಡದ ಉಸಿರುಕಟ್ಟಿತ್ತು. ತಂಡವನ್ನು ಹೆಚ್ಚಾಗಿ ಟೀಕೆ ಮಾಡಬೇಡಿ. ಭಾರತ ತಂಡದ ಪ್ರದರ್ಶನ ಕೆಟ್ಟದಾಗಿತ್ತು ಎಂದು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಒಂದು ಆಟದಿಂದ ಅವರ ಸಾಮರ್ಥ್ಯದ ಬಗ್ಗೆ ಪ್ರಶ್ನೆ ಮಾಡಲು ಆಗುವುದಿಲ್ಲ..”ಎಂದಿದ್ದಾರೆ ಕಪಿಲ್ ದೇವ್ ಅವರು. ಈ ಹೇಳಿಕೆ ಈಗ ಭಾರಿ ವೈರಲ್ ಆಗುತ್ತಿದೆ. ಇದನ್ನು ಓದಿ.. Kannada News: ಎರಡನೇ ಪತ್ನಿಯಾದರೂ ರಾಧಿಕಾರವರನ್ನು ಪ್ರೀತಿ ಮಾಡಿ ಮದುವೆಯಾಗಿದ್ದ ಕುಮಾರಣ್ಣನ, ಪ್ರೀತಿ ಇಂದ ಆಕೆಯನ್ನು ಏನು ಕರೆಯುತ್ತಿದ್ದರು ಗೊತ್ತೇ??

Get real time updates directly on you device, subscribe now.