ಮುಗಿದೇ ಹೋಯಿತು ನಿಮ್ಮ ಕಷ್ಟಗಳು: ನಿಮ್ಮನ್ನು ಮುಟ್ಟಲು ಕೂಡ ಸಾಧ್ಯವಿಲ್ಲ. ಶನಿ ದೇವನೇ ನಿಮ್ಮಗೆ ಕಷ್ಟ ನಿಲ್ಲಿಸುತ್ತಿದ್ದಾನೆ. ಯಾವ ರಾಶಿಗಳಿಗೆ ಗೊತ್ತೇ??

80

Get real time updates directly on you device, subscribe now.

ಕರ್ಮದ ದೇವರಾಗಿರುವ ಶನಿದೇವರು ಇಷ್ಟು ಸಮಯ ಹಿಮ್ಮುಖ ಚಲನೆಯಲ್ಲಿದ್ದರು, ಆದರೆ ದೀಪಾವಳಿ ಹಬ್ಬದ ದಿನ ಆಕ್ಟೊಬರ್ 23ರಿಂದ ಶನಿದೇವರು ಮಕರ ರಾಶಿಯಲ್ಲಿ ನೇರಚಲನೆ ಶುರು ಮಾಡಲಿದ್ದಾನೆ, ಮಕರ ರಾಶಿಯಲ್ಲಿ ನೇರ ಚಲನೆ ಶುರು ಆಗುವುದು, ಮಂಗಳ ಗ್ರಹದ ಧನಿಷ್ಠ ನಕ್ಷತ್ರದಲ್ಲಿ ಇರಲಿದ್ದಾನೆ ಶನಿದೇವರು. ಈ ಎರಡು ಗ್ರಹಗಳು ವೈರಿಗಳಾಗಿರುವ ಕಾರಣ, ಇದರಿಂದಾಗಿ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ, ಆದರೆ ಶನಿಯ ಪಥ ಬದಲಾವಣೆ ಇಂದಾಗಿ ಐದು ರಾಶಿಗಳಿಗೆ ಶುಭಫಲ ಸಿಗುತ್ತದೆ. ಆ ಐದು ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮಕರ ರಾಶಿ :- ಈ ರಾಶಿಯವರಿಗೆ ಈಗ ಸಾಡೇಸಾತಿ ನಡೆಯುತ್ತಿದೆ, ಹಾಗಿದ್ದರೂ ಸಹ ಶನಿದೇವರ ಪಥದ ಬದಲಾವಣೆ ಇಂದ ಒಳ್ಳೆಯ ಫಲ ಪಡೆಯುತ್ತಾರೆ. ಇವರ ತೊಂದರೆಗಳಿಗೆ ಪರಿಹಾರ ಸಿಗುತ್ತದೆ. ಅರ್ಧಕ್ಕೆ ನಿಂತಿದ್ದ ಕೆಲಸಗಳು ಮತ್ತೆ ಶುರುವಾಗುತ್ತದೆ. ಹಣಕಾಸಿನ ಸಮಸ್ಯೆಗಳು ದೂರವಾಗುತ್ತದೆ.

ಕುಂಭ ರಾಶಿ :- ಶನಿದೇವರ ಸಾಡೆಸಾತಿ ಪರಿಣಾಮ ಈ ರಾಶಿಯವರ ಮೇಲು ಬೀರುತ್ತದೆ, ಕುಂಭ ರಾಶಿಯವರ ಆರ್ಥಿಕ ಸಮಸ್ಯೆಗಳು ಪರಿಹಾರ ಆಗುತ್ತದೆ. ಇವರು ಕೈಗೊಳ್ಳುವ ಎಲ್ಲಾ ಕೆಲಸಗಳಲ್ಲಿ ಶುಭಫಲ ಸಿಗುತ್ತದೆ. ವೃತ್ತಿ ಮತ್ತು ವ್ಯಾಪಾರ ವಹಿವಾಟು ಎರಡರಲ್ಲೂ ಹೆಚ್ಚಿನ ಲಾಭದ ಜೊತೆಗೆ ಏಳಿಗೆ ಕಾಣುತ್ತೀರಿ, ನಿಮ್ಮ ಆದಾಯ ಹೆಚ್ಚಾಗುತ್ತದೆ.

ಧನು ರಾಶಿ :- ಶನಿದೇವರ ಸಾಡೇಸಾತಿ ಈ ರಾಶಿಯವರಿಗು ನಡೆಯುತ್ತಿದೆ, ಆದರೆ ಶನಿದೇವರ ಪಥ ಬದಲಾವಣೆ ಧನು ರಾಶಿಯವರಿಗೆ ಅನೇಕ ವಿಚಾರಗಳಿಗೆ ಪರಿಹಾರ ತಂದುಕೊಡುತ್ತದೆ. ಉದ್ಯೋಗದಲ್ಲಿ ನಿರೀಕ್ಷೆ ಮಾಡಿದ ಹಾಗೆ ಬಡ್ತಿ ಸಿಗುತ್ತದೆ, ಜೊತೆಗೆ ಯಶಸ್ಸು ಹಿಂಬಾಲಿಸುತ್ತದೆ. ಕುಟುಂಬದಲ್ಲಿ ಸಂತೋಷವಿರುತ್ತದೆ.

ಮಿಥುನ ರಾಶಿ :- ಈ ರಾಶಿಯುವರಿಗೆ ಶನಿದೇವರ ಧೈಯಾ ಪ್ರಭಾವ ನಡೆಯುತ್ತಿದೆ. ಹಾಗಾಗಿ ಶನಿದೇವರ ಪಥದ ಬದಲಾವಣೆ ಇಂದ ಈ ರಾಶಿಯವರಿಗೆ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಉದ್ಯೋಗದಲ್ಲಿ ಹೆಚ್ಚು ಅವಕಾಶಗಳು ಸಿಗುತ್ತವೆ. ಅರ್ಧಕ್ಕೆ ನಿಂತಿದ್ದ ಕೆಲಸಗಳು ಪೂರ್ತಿಯಾಗುತ್ತದೆ. ಹಣದ ವಿಚಾರದಲ್ಲಿ ಲಾಭವಾಗುತ್ತದೆ.

ತುಲಾ ರಾಶಿ :- ಈ ರಾಶಿಯ ಮೇಲು ಶನಿದೇವರ ಧೈಯಾ ಸಮಯ ನಡೆಯುತ್ತಿದ್ದು, ಶನಿದೇವರು ನೇರ ಚಲನೆ ಶುರು ಮಾಡಿರುವುದರಿಂದ ತುಲಾ ರಾಶಿಯವರಿಗೆ ಹೆಚ್ಚಿನ ಲಾಭವಾಗುತ್ತದೆ. ಇವರ ಆದಾಯ ಜಾಸ್ತಿಯಾಗಿ, ಆರ್ಥಿಕ ಪರಿಸ್ಥಿತಿ ಉತ್ತಮವಾಗುತ್ತದೆ. ಮನೆಯವರ ಸಹಾಯ ಪಡೆದು ದೊಡ್ಡ ಕೆಲಸಗಳನ್ನು ಪೂರ್ತಿ ಮಾಡುತ್ತೀರಿ. ದಿಢೀರ್ ಧನಲಾಭ ಸಿಗುತ್ತದೆ.

Get real time updates directly on you device, subscribe now.