ನಿಮ್ಮ ಜೀವನ ಪೂರ್ತಿ ಲಕ್ಷ್ಮಿ ದೇವಿ ಅನುಗ್ರಹ ಬೇಕು ಎಂದರೆ ಜಸ್ಟ್ ಈ ಚಿಕ್ಕ ಕೆಲಸ ಮಾಡಿ ಸಾಕು. ಕೋಟ್ಯಧಿಪತಿಯಾಗುತ್ತೀರಿ.

23

Get real time updates directly on you device, subscribe now.

ನಮ್ಮ ಜೀವನದಲ್ಲಿ ನಾವು ಕೆಲವು ರೀತಿಯ ಪೂಜೆಯನ್ನು ಸಂತೋಷಕ್ಕಾಗಿ, ಹಣಕಾಸಿನ ಪರಿಸ್ಥಿತಿಗಳಿಂದ ಪರಿಹಾರಕ್ಕಾಗಿ, ಅನೇಕ ರೀತಿಯ ತೊಂದರೆಗಳಿಂದ ವಿಮೋಚನೆಗಾಗಿ ಮಾಡುತ್ತೇವೆ. ಆರ್ಥಿಕ ಪರಿಸ್ಥಿತಿ ಸರಿ ಹೋಗಲು ಲಕ್ಷ್ಮಿ ದೇವಿಯ ಆಶೀರ್ವದ ಬೇಕು ಎಂದು ನಂಬಲಾಗಿದೆ. ಆದರೆ ಲಕ್ಷ್ಮಿ ದೇವಿಯನ್ನು ಪೂಜಿಸುವಾಗ ಕೆಲವು ನಿಯಮಪಾಲಿಸಬೇಕು ಎಂದು ಜ್ಯೋತಿಷಿಗಳು ಹೇಳುತ್ತಾರೆ. ಲಕ್ಷ್ಮಿ ದೇವಿಯ ದರ್ಶನ ಪಡೆಯಲು ಮನುಷ್ಯ ಹಗಲಿರುಳು ಶ್ರಮಿಸುತ್ತಾನೆ. ಮನೆಯಲ್ಲಿ ಶಾಂತಿ ತರಲು ಅನೇಕ ಪ್ರಯತ್ನಗಳನ್ನು ಮಾಡುತ್ತಾರೆ. ಇದರ ಮುಖ್ಯ ಉದ್ದೇಶವೇನೆಂದರೆ ಲಕ್ಷ್ಮಿ ದೇವಿಯ ಕಣ್ಣಿನಿಂದ ಸಕಲ ಸುಖ ಶಾಂತಿಯನ್ನು ಪಡೆಯಲಿ, ಆ ಮೂಲಕ ಲಕ್ಷ್ಮಿಯು ತನ್ನ ಕೃಪೆಯನ್ನು ನಮ್ಮ ಮೇಲೆ ಇರಲಿ ಎಂದು. ಅವುಗಳನ್ನು ಅನುಸರಿಸಿ ಲಕ್ಷ್ಮೀದೇವಿ ಕಟಾಕ್ಷವನ್ನು ಪಡೆಯಬಹುದು.

ಜ್ಯೋತಿಷ್ಯದಲ್ಲಿ ಹೇಳಲಾದ ನಿಯಮಗಳು ಏನೆಂದರೆ, ನೀವು ಪ್ರತಿದಿನ ರಾತ್ರಿ ಮಲಗುವ ಮೊದಲು ಈ ನಿಯಮಗಳನ್ನು ಪಾಲಿಸಿದರೆ, ನಿಮ್ಮ ಜೀವನದಲ್ಲಿ ಉತ್ತಮ ಪ್ರಗತಿ ಪಡೆಯಬಹುದು. ಅಲ್ಲದೆ, ಲಕ್ಷ್ಮೀದೇವಿ ಕೃಪೆಯಿಂದ, ವ್ಯಕ್ತಿಯು ಅಪಾರ ಆರ್ಥಿಕ ಸಂಪತ್ತು ಪಡೆಯುತ್ತಾನೆ. ಈ ನಿಯಮಗಳೇನು ಎಂಬುದನ್ನು ಈಗ ನೋಡೋಣ, ರಾತ್ರಿ ಮಲಗುವ ಮುನ್ನ ಇದನ್ನು ಮಾಡುವುದನ್ನು ಮರೆಯಬೇಡಿ.. ಜ್ಯೋತಿ ಶಾಸ್ತ್ರದ ಪ್ರಕಾರ ನೀವು ಮನೆಯಲ್ಲಿ ಅನೇಕ ವಸ್ತುಗಳನ್ನು ಇಟ್ಟುಕೊಂಡರೆ ನಿಮಗೆ ಲಕ್ಷ್ಮಿ ಕಟಾಕ್ಷವು ಸುಲಭವಾಗಿ ಸಿಗುತ್ತದೆ. ಸ್ನಾನದ ಕೊಠಡಿಗಳಲ್ಲಿ ನೀರು ತುಂಬಿದ ಬಕೆಟ್ ಅನ್ನು ಇಟ್ಟರೆ ಲಕ್ಷ್ಮಿ ದೇವಿಗೆ ಸಂತೋಷವಾಗುತ್ತದೆ. ಪ್ರತಿ ರಾತ್ರಿ ಸ್ನಾನಗೃಹದಲ್ಲಿ ಒಂದು ಬಕೆಟ್ ನೀರನ್ನು ಇರಿಸಿ. ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಹಣದ ಕೊರತೆ ಇರುವುದಿಲ್ಲ. ಅಂತೆಯೇ

ಮಲಗುವ ಮುನ್ನ ಅಡುಗೆಮನೆಯಲ್ಲಿ ಈ ಜ್ಯೋತಿಷ್ಯದ ಸಲಹೆಯನ್ನು ಅನುಸರಿಸಲು ಮರೆಯದಿರಿ. ಅದೇ ರೀತಿ ಅಡುಗೆ ಮನೆಯಲ್ಲಿ ಬಕೆಟ್‌ ಗೆ ನೀರು ತುಂಬಿಸಿ ಇಡಿ. ಹೀಗೆ ಮಾಡುವುದರಿಂದ ಋಣಮುಕ್ತರಾಗುತ್ತೀರಿ, ನಿಮ್ಮ ಮೇಲಿನ ಆರ್ಥಿಕ ಹೊರೆಯನ್ನು ನಿವಾರಿಸುತ್ತದೆ. ಅದೇ ರೀತಿ ಬಾಗಿಲ ಬಳಿ ದೀಪ ಹಚ್ಚಿ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿದಿನ ಸಂಜೆ ಮನೆಯೊಳಗೆ ದೀಪ ಹಚ್ಚುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ಸಿಗುತ್ತದೆ. ರಾತ್ರಿಯಲ್ಲಿ ದೀಪ ಬೆಳಗಿಸಬೇಕು. ಹೀಗೆ ದೀಪ ಹಚ್ಚುವುದರಿಂದ ಲಕ್ಷ್ಮಿ ದೇವಿಯ ಕಟಾಕ್ಷ ಸದಾ ನಿಮ್ಮ ಪಾಲಿಗೆ ಇರುತ್ತದೆ.

Get real time updates directly on you device, subscribe now.