ಕೆ ಎಲ್ ರಾಹುಲ್ ಅವರು ಇಂದು ಈ ಮಟ್ಟಕ್ಕೆ ಯಶಸ್ಸು ಪಡೆಯಲು ಭಾರತದ ಆ ಆಟಗಾರನೇ ಕಾರಣ ಎಂದ ಶೋಯಬ್ ಅಖ್ತರ್. ಯಾರಂತೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಈ ಕನ್ನಡಿಗನ ಆರ್ಭಟ ಸಾಕಷ್ಟು ದೊಡ್ಡ ಮಟ್ಟದಲ್ಲಿ ಹೆಚ್ಚಾಗಿದೆ ಎಂದು ಹೇಳಬಹುದಾಗಿದೆ. ಹೌದು ನಾವು ಮಾತನಾಡುತ್ತಿರುವುದು ತಂಡದ ಉಪನಾಯಕನಾಗಿ ಮಿಂಚು ಹರಿಸುತ್ತಿರುವ ಕೆಎಲ್ ರಾಹುಲ್ ಅವರ ಕುರಿತಂತೆ. ಹೌದು ಗೆಳೆಯರೇ ಕರ್ನಾಟಕ ರಣಜಿ ತಂಡದ ಪ್ರಾರಂಭಿಸಿ ಐಪಿಎಲ್ ನಲ್ಲಿ ಕೂಡ ಉತ್ತಮ ಪ್ರದರ್ಶನವನ್ನು ನೀಡುವ ಮೂಲಕ ಕೆಎಲ್ ರಾಹುಲ್ ರವರು ಸದ್ಯದ ಮಟ್ಟಿಗೆ ಭಾರತೀಯ ಕ್ರಿಕೆಟ್ ತಂಡದ ಅತ್ಯಂತ ಪ್ರಮುಖ ಬ್ಯಾಟ್ಸ್ಮನ್ ಗಳಲ್ಲಿ ಒಬ್ಬರಾಗಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಐಪಿಎಲ್ನಲ್ಲಿ ಸತತವಾಗಿ 500ಕ್ಕಿಂತಲೂ ಅಧಿಕ ರನ್ನುಗಳನ್ನು ಬಾರಿಸಿರುವ ಏಕೈಕ ಆಟಗಾರ ಎಂದರೆ ಅದು ಕೆಎಲ್ ರಾಹುಲ್ ಎಂಬುದಾಗಿ ಅನುಮಾನವಿಲ್ಲದೆ ಹೇಳಬಹುದಾಗಿದೆ. ಇನ್ನು ಈ ಬಾರಿಯ ಐಪಿಎಲ್ ನಲ್ಲಿ ನಾಯಕನಾಗಿ ಕೂಡ ಲಕ್ನೋ ಎನ್ನುವ ಹೊಸ ತಂಡದೊಂದಿಗೆ ಈಗಾಗಲೇ ರಾಹುಲ್ ರವರು ಐಪಿಎಲ್ ನಲ್ಲಿ ಮಿಂಚು ಹರಿಸುತ್ತಿರುವುದನ್ನು ಕೂಡ ನೀವು ನೋಡಬಹುದಾಗಿದೆ. ಹೌದು ಗೆಳೆಯರೇ ಕೆಎಲ್ ರಾಹುಲ್ ರವರ ಒಂದು ಯಶಸ್ವಿ ಕ್ರಿಕೆಟ್ ಜೀವನದ ಕುರಿತಂತೆ ಈಗ ಒಬ್ಬ ಮಾಜಿ ಕ್ರಿಕೆಟಿಗ ಮಾತನಾಡಿದ್ದಾರೆ. ಹೌದು ಗೆಳೆಯರೆ ಕೆಎಲ್ ರಾಹುಲ್ ಅವರ ಯಶಸ್ಸಿಗೆ ಯಾರು ಕಾರಣ ಎನ್ನುವುದನ್ನು ಪಾಕಿಸ್ತಾನ ಮೂಲದ ಕ್ರಿಕೆಟಿಗ ಆಗಿರುವ ಶೋಯಬ್ ಅಖ್ತರ್ ಅವರು ಮಾತನಾಡಿದ್ದಾರೆ.

ಹೌದು ಗೆಳೆಯರೇ ಈ ಕುರಿತಂತೆ ಮಾತನಾಡಿರುವ ಶೋಯಬ್ ಅಖ್ತರ್ ರವರು ಕೆ ಎಲ್ ರಾಹುಲ್ ರವರ ಯಶಸ್ಸಿಗೆ ಮೂಲ ಕಾರಣ ವಿರಾಟ್ ಕೊಹ್ಲಿ ಎಂಬುದಾಗಿ ನುಡಿದಿದ್ದಾರೆ. ಆರಂಭಿಕ ದಿನಗಳಿಂದಲೂ ಕೂಡ ಕೆ ಎಲ್ ರಾಹುಲ್ ರವರಿಗೆ ಆರಂಭಿಕ ಆಟಗಾರನಾಗಿ ಆಡುವಂತೆ ನಾಯಕನಾಗಿ ಹಲವಾರು ಅವಕಾಶಗಳನ್ನು ನೀಡಿರುವ ಕಾರಣದಿಂದಾಗಿಯೇ ಅದನ್ನು ಸದುಪಯೋಗಪಡಿಸಿಕೊಂಡು ಕೆ ಎಲ್ ರಾಹುಲ್ ಅವರು ಕ್ರಿಕೆಟ್ ಜಗತ್ತಿನಲ್ಲಿ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು ಎಂಬುದಾಗಿ ಶೋಯಬ್ ಅಖ್ತರ್ ಅವರು ಅಭಿಪ್ರಾಯಪಟ್ಟಿದ್ದಾರೆ. ಶೋಯಬ್ ರವರ ಈ ಹೇಳಿಕೆಯ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ಕಾಮೆಂಟ್ ಮೂಲಕ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.