Kannada News: ಅದೊಂದು ಕೆಲಸ ಮಾಡಿದರೆ ಸಾಕು, ತಿಂಗಳಿಗೆ ನಾಟಿಗೆ 25 ಲಕ್ಷ ಕೊಡುತ್ತೇನೆ ಎಂದ ನಿರ್ಮಾಪಕ. ನಟಿ ಏನು ಮಾಡಬೇಕಂತೆ ಗೊತ್ತೇ??

53

Get real time updates directly on you device, subscribe now.

Kannada News: ಚಿತ್ರರಂಗದಲ್ಲಿ ಏನು ಬೇಕಾದರೂ ಆಗಬಹುದು, ಒಂದೇ ರಾತ್ರಿಯಲ್ಲಿ ಸ್ಟಾರ್ ಆಗಬಹುದು, ಅದೇ ರೀತಿ ಅವಕಾಶಗಳೇ ಸಿಗದೆ ಕಲಾವಿದರು ಬೀದಿಗೆ ಬರುವ ಹಾಗೆ ಆಗಬಹುದು. ಸಿನಿಮಾ ನಟಿಯರ ವಿಷಯದಲ್ಲಿ ಇಂಥದ್ದು ನಡೆಯುತ್ತಲೇ ಇರುತ್ತದೆ. ಇದರಿಂದ ನಟಿಯರಿಗೆ ಬೆಲೆ ಇಲ್ಲದ ಹಾಗೆ ಆಗುತ್ತದೆ ಎಂದು ಹೇಳಬಹುದು. ಬಹಳ ಆಸೆ ಇಟ್ಟುಕೊಂಡು ಚಿತ್ರರಂಗಕ್ಕೆ ಬಂದವರಿಗೆ ಆಸೆ ತೋರಿಸಿ ಮೋಸ ಮಾಡುವಂಥ ಸಾಕಷ್ಟು ಜನರಿದ್ದಾರೆ. ನಟಿಯರ ಸೌಂದರ್ಯವನ್ನು ತಮ್ಮ ಲಾಭಕ್ಕೆ ಬಳಸಿಕೊಂಡು, ಅವಕಾಶ ಕೊಡುವುದಾಗಿ ಹೇಳಿ, ಕೊನೆಗೆ ಮೋಸ ಮಾಡುತ್ತಾರೆ.

ಇದಕ್ಕೆಲ್ಲ ಒಪ್ಪಿಕೊಂಡವರಿಗೆ ಒಂದು ರೀತಿಯಾದರೆ, ಒಪ್ಪದವರು ನಾನಾ ಕಷ್ಟಗಳನ್ನು ಎದುರಿಸುವ ಹಾಗೆ ಆಗುತ್ತದೆ. ನಟಿ ನೀತು ಚಂದ್ರ (Neetu Chandra) ಅವರು ಇಂಥದ್ದೇ ವಿಚಾರದ ಬಗ್ಗೆ ಮಾತನಾಡಿದ್ದಾರೆ. ತಾವು ಇಂಥಹ ವಿಷಗಳಿಂದ ಪಟ್ಟ ಕಷ್ಟಗಳ ಬಗ್ಗೆ ಮಾತನಾಡಿದ್ದಾರೆ ನೀತು ಚಂದ್ರ. ಇವರು ವಿಷ್ಣು (Vishnu) ಎನ್ನುವ ತೆಲುಗು ಸಿನಿಮಾ ಮೂಲಕ ನಟನೆಯ ಲೋಕಕ್ಕೆ ಎಂಟ್ರಿ ಕೊಟ್ಟರು. ಈ ಸಿನಿಮಾ ಸೂಪರ್ ಹಿಟ್ ಆದ ಕಾರಣ, ಇವರಿಗೆ ಸಾಲು ಸಾಲು ಅವಕಾಶಗಳು ಬರುತ್ತದೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ತೆಲುಗಿನಲ್ಲಿ ಉತ್ತಮ ಅವಕಾಶಗಳು ಸಿಗದೆ ಇವರು ಬಾಲಿವುಡ್ (Bollywood) ಗೆ ಹೋಗಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದರು, ಸಿಕ್ಕ ಅವಕಾಶಗಳನ್ನು ಒಪ್ಪಿಕೊಂಡರು. ಆದರೆ ಸ್ಟಾರ್ ಸ್ಟೇಟಸ್ ಈ ನಟಿಗೆ ಸಿಗಲೆ ಇಲ್ಲ. ಇದನ್ನು ಓದಿ.. Alia Bhatt: ಆಲಿಯಾ ಭಟ್ ಮಗುವನ್ನು ನೋಡಲು ಹೋಗಬೇಕು ಎಂದರೇ, ಫಾಲೋ ಮಾಡಬೇಕಾದದ ರೂಲ್ಸ್ ಏನು ಗೊತ್ತೇ?? ಯಪ್ಪಾ ಏನೆಲ್ಲಾ ರೂಲ್ಸ್ ಗೊತ್ತೇ??

ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರು ಕೂಡ, ಆರ್ಥಿಕವಾಗಿ ಸಬಲವಾಗಿಲ್ಲ, ತಮ್ಮ ಬಳಿ ಹಣವಿಲ್ಲ ಎಂದು ಹೇಳುತ್ತಾರೆ. ಒಬ್ಬ ಉದ್ಯಮಿ ತಮ್ಮ ಜೊತೆಗೆ ತಪ್ಪಾಗಿ ನಡೆದುಕೊಂಡಿದ್ದು, ತಮ್ಮನ್ನು ಮದುವೆಯಗಾಲು ಕೇಳಿದ್ದರು ಎಂದು ಹೇಳಿದ್ದಾರೆ ನೀತು ಚಂದ್ರ. ಮದುವೆಯಾದರೆ ತಿಂಗಳಿಗೆ ೨೫ ಲಕ್ಷ ರೂಪಾಯಿ ಕೊಡುವುದಾಗಿ ಹೇಳಿದ್ದರಂತೆ ಆ ಉದ್ಯಮಿ. ದೊಡ್ಡ ದೊಡ್ಡ ಸಿನಿಮಾಗಳಲ್ಲಿ ನಟಿಸಿದ್ದರು ಕೂಡ, ಇವರಿಗೆ ಈಗ ಒಳ್ಳೆಯ ಅವಕಾಶಗಳು ಸಿಗುತ್ತಿಲ್ಲ. ಅಸಹಾಯಕ ಸ್ಥಿತಿಯಲ್ಲಿ ತಮಗೆ ಅವಕಾಶ ಸಿಗಬೇಕು ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಒಳ್ಳೆಯ ಸಿನಿಮಾಗಳಲ್ಲಿ ನಟಿಸಿದ್ದರು ಕೂಡ, ಇವರ ಸ್ಥಿತಿ ಹೀಗಿದೆ, ಕಷ್ಟದಲ್ಲಿದ್ದಾರೆ ಎಂದು ನೆಟ್ಟಿಗರು ಕೂಡ ಬೇಸರ ಮಾಡಿಕೊಂಡಿದ್ದಾರೆ. ಇದನ್ನು ಓದಿ.. Radhika Apte: ನನಗೆ ಚಾನ್ಸ್ ಸಿಕ್ಕಿಲ್ಲ, ಸಿಗದೇ ಇದ್ದರೂ ಅದಕ್ಕಾಗಿ ಅಡ್ಡದಾರಿ ಹಿಡಿಯುವುದಿಲ್ಲ ಎಂದು ಎಲ್ಲಾ ಸತ್ಯ ಬಿಚ್ಚಿಟ್ಟ ರಾಧಿಕಾ. ಹೇಳಿದ್ದೇನು ಗೊತ್ತೇ?

Get real time updates directly on you device, subscribe now.