ಪುನೀತ್ ರವರ ರೂಮಿನಲ್ಲಿ ಅಶ್ವಿಮಿ ಮೇಡಂ ಮಲಗಿದ್ದಾಗ ಕಿಟಕಿ ಬಳಿ ನಡೆದದ್ದು ಏನು ಗೊತ್ತೇ??ವಿಚಾರ ತಿಳಿಸಿ ಕಣ್ಣೀರಿಟ್ಟ ಅಶ್ವಿನಿ. ಏನಾಗಿದೆ ಗೊತ್ತೇ??

103

Get real time updates directly on you device, subscribe now.

ಪುನೀತ್ ರಾಜ್ ಕುಮಾರ್ ಈ ಪ್ರಪಂಚವನ್ನು ದೈಹಿಕವಾಗಿ ಬಿಟ್ಟು ಹೋಗಿ 1 ವರ್ಷ ಕಳೆಯಿತು. ಆಕ್ಟೊಬರ್ 29ರ ಆ ದಿನ ಯಾಕಾದರೂ ಬಂದಿತು ಎಂದು ಅಭಿಮಾನಿಗಳು ಕಣ್ಣೀರು ಹಾಕಿದರು. ಇನ್ನು ದೊಡ್ಮನೆ ಮಂದಿಯ ನೋವಿನ ಬಗ್ಗೆ ಹೇಳಲು ಪದಗಳು ಸಾಕಾಗುವುದಿಲ್ಲ. ಅಪ್ಪು ಅವರು ಆ ಇಡೀ ಕುಟುಂಬದಲ್ಲಿ ಎಲ್ಲರು ತುಂಬಾ ಪ್ರೀತಿಸುವ, ಎಲ್ಲರಿಂದ ಅತಿಹೆಚ್ಚು ಪ್ರೀತಿ ಪಡೆದ ಕುಟುಂಬ ಕಿರಿಯ ಮಗ ಆಗಿದ್ದರು ಅಪ್ಪು. ಅಂತಹ ಅಪ್ಪು ಅವರಿಗೆ ಇಷ್ಟು ಬೇಗ ಈ ರೀತಿ ಆಗುತ್ತದೆ ಎಂದು ಯಾರು ಕೂಡ ಭಾವಿಸಿರಲಿಲ್ಲ. ಆ ದುರ್ಘಟನೆ ನಡೆದೇ ಹೋಯಿತು..

ಅಪ್ಪು ಅವರು ಅಗಲಿ ಒಂದು ವರ್ಷದ ಸಮಯಕ್ಕೆ ಗಂಧದಗುಡಿ ಸಿನಿಮಾವನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಆಕ್ಟೊಬರ್ 28ರಂದು ಬಿಡುಗಡೆ ಮಾಡಿದರು. ಅಪ್ಪು ಅವರನ್ನು ಕೊನೆಯ ಸಾರಿ ತೆರೆಯ ಮೇಲೆ ನೋಡಿ ಭಾವುಕರಾಗಿದ್ದಾರೆ. ಇನ್ನು ಅಶ್ವಿನಿ ಮೇಡಂ ಅವರು ಸಹ ಅಪ್ಪು ಅವರ ನೆನಪಲ್ಲಿ ಭಾವುಕರಾಗಿದ್ದರು, ಅಪ್ಪು ಮನೆಯಲ್ಲಿ ಸಹ ಇಂಥದ್ದೇ ಒಂದು ಭಾವುಕರಾಗುವ ಘಟನೆ ನಡೆದಿದೆ. ಅಪ್ಪು ಅವರ ರೂಮ್ ನಲ್ಲಿ ಅಶ್ವಿನಿ ಅವರು ಮಲಗಿದ್ದರು, ಬೆಳಗ್ಗೆ ಅಶ್ವಿನಿ ಅವರು ನೋಡಿದಾಗ, ಅಪ್ಪು ಅವರ ಫೋಟೋ ಮೇಲೆ ಪಾರಿವಾಳ ಬಂದು ಕುಳಿತಿತ್ತು.

ಅದನ್ನು ನೋಡಿ ಅಶ್ವಿನಿ ಅವರು ಪಾರಿವಾಳಕ್ಕೆ ಆಹಾರ ಕೊಡಲು ಹೋದಾಗ, ಆ ಪಾರಿವಾಳ ಆಹಾರವನ್ನು ತಿನ್ನದೆ, ಅಶ್ವಿನಿ ಅವರನ್ನು ಸ್ವಲ್ಪ ಹೊತ್ತು ನೋಡಿ, ಹೊರಗೆ ಹಾರಿ ಹೋಗಿದೆ. ಇದರಿಂದ ಅಶ್ವಿನಿ ಅವರು ಕೂಡ ಭಾವುಕರಾಗಿದ್ದಾರೆ. ಇತ್ತ ಈ ವಿಷಯ ತಿಳಿದ ಅಭಿಮಾನಿಗಳು, ಅಪ್ಪು ಅವರೇ ಅಶ್ವಿನಿ ಅವರನ್ನು ನೋಡಲು ಬಂದಿರಬಹುದು ಎಂದು ಹೇಳುತ್ತಿದ್ದಾರೆ. ಇಂಥದ್ದೊಂದು ಘಟನೆ ನಡೆದಿದ್ದು, ಅಪ್ಪು ಅವರ ನೆನಪುಗಳು, ಅವರ ಬಗೆಗಿನ ಇಂತಹ ಸುದ್ದಿಗಳು, ಅಪ್ಪು ಅವರು ಈಗಲೂ ನಮ್ಮೊಡನೆ ಇರುವ ಹಾಗೆ ಅನ್ನಿಸುತ್ತಿದೆ ಎನ್ನುತ್ತಿದ್ದಾರೆ ಅಭಿಮಾನಿಗಳು.

Get real time updates directly on you device, subscribe now.