ನಟಿ ದಿವ್ಯ ರವರ ಎರಡನೇ ಮದುವೆಯಾಗುವುದಷ್ಟೇ ಅಲ್ಲ, ಮಂಗಳಮುಖಿ ಜೊತೆ ನಟ ಅರ್ನವ್ ಅದೆಂತ ಕೆಲಸ ಮಾಡಿದ್ದಾನೆ ಗೊತ್ತೇ?? ಯಪ್ಪಾ ಇಂಗು ಇರ್ತಾರ.

38

Get real time updates directly on you device, subscribe now.

ಕನ್ನಡ ಮತ್ತು ತಮಿಳು ಕಿರುತೆರೆಯಲ್ಲಿ ಖ್ಯಾತಿ ಹೊಂದಿರುವ ನಟ ದಿವ್ಯ ಶ್ರೀಧರ್ ಅವರು ವೈಯಕ್ತಿಕ ಜೀವನದ ವಿಚಾರದಿಂದ ಭಾರಿ ಸುದ್ದಿಯಲ್ಲಿದ್ದಾರೆ. ತಮಿಳು ಧಾರವಾಹಿಯಲ್ಲಿ ನಟಿಸುವಾಗ ಸಹನಟ ಅರ್ನವ್ ಅವರನ್ನು ಪ್ರೀತಿಸಿ ದಿವ್ಯ ಅವರೊಡನೇ ಲಿವಿನ್ ರಿಲೇಶನ್ಷಿಪ್ ನಲ್ಲಿದ್ದರು, ಬಳಿಕ ಇಬ್ಬರು ಮದುವೆ ಸಹ ಆದರು, ದಿವ್ಯ ಅವರು ಗರ್ಭಿಣಿಯಾದ ಬಳಿಕ, ಗಂಡ ಅರ್ನವ್ ಕಿರುಕುಳ ಕೊಡುತ್ತಿದ್ದಾರೆ ಎಂದು ನಟಿ ದಿವ್ಯ ಆಸ್ಪತ್ರೆಗೆ ದಾಖಲಾಗಿದ್ದರು. ಗಂಡನ ವಿರುದ್ಧ ಪೊಲೀಸರಲ್ಲಿ ದೂರು ನೀಡಿದ್ದರಿಂದ, ಪೊಲೀಸರು ಇವರ ಪತಿ ಅರ್ನವ್ ರನ್ನು ಬಂಧಿಸಿದ್ದಾರೆ. ಇದಾದ ಬಳಿಕ ಇವರಿಬ್ಬರ ಬಗ್ಗೆ ಒಂದಲ್ಲ ಒಂದು ಸುದ್ದಿಗಳು ಬೆಳಕಿಗೆ ಬರುತ್ತಲೇ ಇದೆ.

ದಿವ್ಯ ಅವರನ್ನು ಮದುವೆಯಾಗಿ, ಗುಟ್ಟಾಗಿಟ್ಟಿದ್ದ ಅರ್ನವ್, ಮದುವೆ ವಿಷಯ ಹೊರಬಂದ ಬಳಿಕ ಆಕೆಗೆ ನೀಡಲು ಶುರು ಮಾಡಿದ್ದರು. ಇದೀಗ ಸಿಕ್ಕಿರುವ ಮಾಹಿತಿ ಏನೆಂದರೆ, ದಿವ್ಯ ಅವರಿಗಿಂತ ಮೊದಲು ಮತ್ತೊಬ್ಬರಿಗು ಅರ್ನವ್ ಮೋಸ ಮಾಡಿದ್ದಾರೆ, ಅರ್ನವ್ ಇಂದ ಮೊದ ಹೋಗಿರುವ ಆ ಹುಡುಗಿ ಮಂಗಳಮುಖಿ ಎಂದು ತಿಳಿದುಬಂದಿದೆ. ಆ ಮಂಗಳಮುಖಿಯ ಹೆಸರು ಪ್ರಿಯದರ್ಶನಿ. ಸ್ವತಃ ಪ್ರಿಯದರ್ಶಿನಿ ಅವರೇ ಮಾತನಾಡಿರುವ ಆಡಿಯೋ ಒಂದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮೊದಲಿಗೆ ಗೊತ್ತಿರಲಿಲ್ಲ, ನಂತರ ಆತ ಒಬ್ಬ ಹಣ್ಣುಬಾಕ ಎಂದು ಗೊತ್ತಾಯಿತು ಎಂದು ಹೇಳಿದ್ದಾರೆ ಪ್ರಿಯದರ್ಶಿನಿ.

ಅರ್ನವ್ ತನ್ನ ಜೊತೆಗೆ ಮದುವೆಯಾಗಿ, ತನಗೆ ಮೋಸ ಮಾಡಿದ್ದಾನೆ ಎಂದು ಪ್ರಿಯದರ್ಶಿನಿ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಪ್ರಸ್ತುತ ಪ್ರಿಯದರ್ಶಿನಿ ಮಲೇಷಿಯಾದಲ್ಲಿದ್ದಾರೆ, ಅಲ್ಲಿಂದಲೇ ಇವರು ಫೋನ್ ನಲ್ಲಿ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಈಕೆಯ ಜೊತೆ ಕೂಸ ಅರ್ನವ್ ಸಂಬಂಧ ಹೊಂದಿದ್ದು, ಚೆನ್ನೈನಲ್ಲಿ ಇಬ್ಬರು ಲಿವಿಂಗ್ ಟುಗೆದರ್ ನಲ್ಲಿದ್ದು, ಬಳಿಕ ಮದುವೆ ಸಹ ಆಗಿದ್ದರಂತೆ, ಎರಡು ವರ್ಷಗಳ ಸಂಸಾರ ನಡೆಸಿದ ನಂತರ ಆಕೆಯನ್ನು ದೂರ ಮಾಡಿದ್ದಾನೆ ಅರ್ನವ್, ಆ ನೋವಿನಿಂದ ಹೊರಬರಲು ಸಾಧ್ಯವಾಗದೆ ಪ್ರಿಯದರ್ಶಿನಿ ಅವರು ಮಲೇಷಿಯಾಗೆ ಹೋಗಿರುವುದಾಗಿ ಅಡಿಯೋದಲ್ಲಿ ತಿಳಿಸಿದ್ದು, ಈ ಆಡಿಯೋ ಈಗ ವೈರಲ್ ಆಗುತ್ತಿದೆ.

Get real time updates directly on you device, subscribe now.