ಮತ್ತೆ ಬಂದ ಅನುಪಮಾ ಗೌಡ: ಕಾದು ಕುಳಿತಿದ್ದ ಅಭಿಮಾನಿಗಳು ಫುಲ್ ಕುಶ್. ಯಾವ ರೀತಿ ಮತ್ತೆ ಬಂದಿದ್ದಾರೆ ಗೊತ್ತೇ??

11

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಕಿರುತೆರೆಯ ವಿಶೇಷ ಕಾರ್ಯಕ್ರಮಗಳಲ್ಲಿ ಸ್ಪರ್ಧಿಗಳು ಹಾಗೂ ತೀರ್ಪುಗಾರರಷ್ಟೇ ನಿರೂಪಕ ಹಾಗೂ ನಿರೂಪಕಿಯರು ಕೂಡ ಪ್ರಮುಖ ರಾಗಿರುತ್ತಾರೆ ಪ್ರೇಕ್ಷಕರು ಕೂಡ ಅವರನ್ನು ಇಷ್ಟಪಡುತ್ತಾರೆ. ಕನ್ನಡದ ಕೇಳಿದ ಪ್ರೇಕ್ಷಕರು ಅತ್ಯಂತ ಇಷ್ಟಪಡುವ ನಿರೂಪಕರಲ್ಲಿ ನಟಿ ಅನುಪಮ ಗೌಡ ಕೂಡ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಅವರು ಈ ಹಿಂದೆಯಷ್ಟೇ ಅವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವನ್ನು ಕಂಡಿದ್ದ ರಾಜಾರಾಣಿ ಕಾರ್ಯಕ್ರಮದ ಮೊದಲನೇ ಸೀಸನ್ನಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡಿದ್ದು ಕಾರ್ಯಕ್ರಮವನ್ನು ಅತ್ಯಂತ ಸೊಗಸಾಗಿ ನಿರ್ವಹಿಸಿ ಕೊಟ್ಟಿದ್ದರು.

ಪ್ರೇಕ್ಷಕರು ಕೂಡ ಅವರ ನಿರೂಪಣೆಯನ್ನು ಇಷ್ಟಪಟ್ಟು ಅವರ ನಿರೂಪಣೆಗೆ ಮರುಳಾಗಿದ್ದರು. ಆದರೆ ಈಗಾಗಲೆ ನಿಮಗೆಲ್ಲ ತಿಳಿದಿರುವಂತೆ ರಾಜರಾಣಿ ಕಾರ್ಯಕ್ರಮದ ಎರಡನೇ ಸೀಸನ್ ಪ್ರಾರಂಭವಾಗಿದ್ದು ಈ ಕಾರ್ಯಕ್ರಮದಲ್ಲಿ ಅನುಪಮ ಗೌಡ ಅವರನ್ನು ನಿರೂಪಣೆಯಿಂದ ಕೈಬಿಡಲಾಗಿತ್ತು. ಅಭಿಮಾನಿಗಳು ಕೂಡ ಮತ್ತೊಮ್ಮೆ ಅನುಪಮ ಗೌಡ ಅವರನ್ನೇ ಕರಿತನ್ನಿ ಎಂಬುದಾಗಿ ಕೋರಿದ್ದರು. ಈ ಕುರಿತಂತೆ ಅನುಪಮಾಗೌಡ ಅವರು ಕೂಡ ಕಲರ್ಸ್ ಕನ್ನಡ ವಾಹಿನಿಯಿಂದ ನನಗೆ ಯಾವುದೇ ಕರೆಗಳು ಬಂದಿಲ್ಲ ನಾನು ಈ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಕಾಣಿಸಿಕೊಳ್ಳುತ್ತಿಲ್ಲ ಎಂಬುದನ್ನು ಅಧಿಕೃತವಾಗಿ ಹೇಳಿಕೊಂಡಿದ್ದರು.

ಈಗ ಸದ್ಯಕ್ಕೆ ಕೇಳಿಬರುತ್ತಿರುವ ಸುದ್ದಿಯ ಪ್ರಕಾರ ಅನುಪಮ ಗೌಡ ಅವರ ಅಭಿಮಾನಿಗಳಿಗೆ ಸಂತೋಷದ ಸುದ್ದಿ ಕೇಳಿಬರುತ್ತಿದೆ ಎಂಬುದಾಗಿ ಹೇಳಬಹುದಾಗಿದೆ. ಹೌದು ಗೆಳೆಯರೇ ಅನುಪಮ ಗೌಡ ಅವರು ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ ಕಾಮಿಡಿ ಗ್ಯಾಂಗ್ಸ್ ಕಾರ್ಯಕ್ರಮದ ಗ್ರಾಂಡ್ ಫಿನಾಲೆ ಕಾರ್ಯಕ್ರಮದಲ್ಲಿ ಇದೇ ಭಾನುವಾರ ವಿಶೇಷ ಡ್ಯಾನ್ಸ್ ಪರ್ಫಾರ್ಮೆನ್ಸ್ ಅನು ನೀಡಲಿದ್ದಾರೆ. ಕಿರುತೆರೆಯಲ್ಲಿ ಮತ್ತೊಮ್ಮೆ ಅನುಪಮ ಗೌಡ ಅವರನ್ನು ಕಾಣಬೇಕು ಎಂದು ಅಂದುಕೊಂಡಿದ್ದ ಅಭಿಮಾನಿಗಳಿಗೆ ಇದು ಖಂಡಿತವಾಗಿ ಸಂತೋಷದ ಸುದ್ದಿ ಇಲ್ಲದೆ ಬೇರೇನಲ್ಲ ಎಂದು ಹೇಳಬಹುದಾಗಿದೆ.

Get real time updates directly on you device, subscribe now.