60 ಲಕ್ಷ ಗೆದ್ದ ಮಂಜುನ ಮದುವೆಯಾಗಲು ನಾನು ಸಿದ್ದ ಎಂದ ದಿವ್ಯ ಸುರೇಶ್, ಕೂಡಲೇ ಖಡಕ್ ಆಗಿ ಉತ್ತರ ನೀಡಿದ ಮಂಜು, ಏನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಅಂತು ಇಂತು ಕೋಟ್ಯಂತರ ಕನ್ನಡಿಗರು ಕಾಯುತ್ತಿದ್ದಂತಹ ಬಿಗ್ ಬಾಸ್ ರಿಯಾಲಿಟಿ ಶೋನ ವಿನ್ನರ್ ಯಾರು ಎಂಬುದು ಈಗಾಗಲೇ ತಿಳಿದು ಬಂದಿದೆ. ಈ ಬಾರಿಯ ಬಿಗ್ ಬಾಸ್ ಫೈನಲ್ ಬಹಳಷ್ಟು ಪೈಪೋಟಿಯಿಂದ ಕೂಡಿತ್ತು. ಹೌದು ಸ್ನೇಹಿತರೆ ಈ ಬಾರಿಯ ಬಿಗ್ ಬಾಸ್ ಯಾರು ಗೆಲ್ಲುತ್ತಾರೆ ಎಂಬ ಕುತೂಹಲ ಕೊನೆಯ ಎರಡು ಸ್ಪರ್ಧಿಗಳು ಇದ್ದರೂ ಕೂಡ ಸಾಕಷ್ಟು ಕುತೂಹಲ ಮೂಡಿತ್ತು. ಕೊನೆಯ ಮೂರು ಸ್ಪರ್ಧಿಗಳಾಗಿ ದಿವ್ಯ ಅರವಿಂದ್ ಹಾಗೂ ಮಂಜು ಪಾವಗಡ ರವರು ಇದ್ದರು.
ನಂತರ ದಿವ್ಯ ರವರು ಮನೆಯಿಂದ ಮೂರನೇ ಸ್ಥಾನದಲ್ಲಿ ಎಲಿಮಿನೇಟ್ ಆಗಿ ಮನೆಯಿಂದ ಹೊರಬಂದರು. ಆಗ ಮನೆಯ ಒಳಗೆ ಇದ್ದ ಮಂಜು ಪಾವಗಡ ಹಾಗೂ ಅರವಿಂದ ಕೆಪಿ ರವರಿಗೂ ಹಾಗೂ ಹೊರಗಿದ್ದವರಿಗೂ ಯಸ್ ಹಾಗೂ ನೋ ಬೋರ್ಡ್ ಗಳನ್ನು ನೀಡಿ ಕಿಚ್ಚ ಸುದೀಪ್ ರವರು ಆಟವನ್ನು ಆಡಿಸಿದರು. ಆಗ ಕಿಚ್ಚ ಸುದೀಪ್ ರವರು ಒಂದು ಪ್ರಶ್ನೆಯನ್ನು ಕೇಳುತ್ತಾರೆ. ಅರವಿಂದ್ ಹಾಗೂ ಮಂಜು ಪಾವಗಡ ರವರ ನಡುವೆ ಮೊದಲು ಯಾರು ಮೊದಲು ಮದುವೆಯಾಗುತ್ತಾರೆ ಎಂಬುದಾಗಿ. ಅದಕ್ಕೆ ಬಹುತೇಕ ಮಂದಿ ಮಂಜು ಪಾವಗಡ ರವರು ಮೊದಲು ಮದುವೆಯಾಗುತ್ತಾರೆ ಎಂಬುದಾಗಿ ಉತ್ತರ ನೀಡಿದ್ದರು. ಸ್ವತಹ ಅರವಿಂದ್ ಕೂಡ ಮಂಜಣ್ಣನೇ ಮೊದಲೇ ಮದುವೆ ಆಗುತ್ತಾರೆ ಎಂಬುದಾಗಿ ಹೇಳಿದರು.
ಇತ್ತ ಈ ಕುರಿತಂತೆ ಕಿಚ್ಚ ಸುದೀಪ್ ರವರು ದಿವ್ಯ ಸುರೇಶ್ ಅವರ ಬಳಿ ಕೇಳಿದಾಗ ದಿವ್ಯ ಸುರೇಶ್ ರವರು, ಹೌದು ನಾನು ಮಂಜನ ತಂದೆ ಹಾಗೂ ತಾಯಿಯ ಬಳಿ ಮಾತಾಡಿದ್ದೇನೆ ಅವರು ಕೂಡ ಮಗ ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಮದುವೆ ಮಾಡಿಸಬೇಕು ಎಂದು ಹೇಳುತ್ತಿದ್ದಾರೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಮಂಜ ಹೌದು ಸರ್ ವಯಸ್ಸಾಗುತ್ತ ಬಂದಿದೆ ಬಿಗ್ ಬಾಸ್ ಮನೆಯಿಂದ ಹೊರ ಹೋಗುತ್ತಿದ್ದಂತೆ ಮದುವೆಗೆ ತಯಾರಿ ಮಾಡಿಕೊಳ್ಳಬೇಕು ಎಂದು ತಮಾಷೆಯಿಂದ ಮಾತಾಡಿದರು. ಆದರೆ ಅಶ್ವತ್ ರವರು ಮಂಜ ತನ್ನ ಗುರಿಯನ್ನು ತಲುಪಿದ ಮೇಲಷ್ಟೇ ಮದುವೆಯಾಗುತ್ತಾನೆ ಎಂಬುದಾಗಿ ವಿಭಿನ್ನವಾಗಿ ಉತ್ತರ ನೀಡಿದರು.