ನಮಸ್ಕಾರ ಸ್ನೇಹಿತರೇ ರಾಕಿಂಗ್ ಸ್ಟಾರ್ ಯಶ್ ಅವರ ಸಿನಿ ಜೀವನದ ಹಾದಿ ನೋಡಿದರೆ ಖಂಡಿತವಾಗಿ ಇಂದಿನ ಯುವಜನತೆಗೆ ಸ್ಪೂರ್ತಿ ಎಂದು ಹೇಳಬಹುದು. ಅವರು ಇಂದು ನ್ಯಾಷನಲ್ ಸ್ಟಾರ್ ಆಗಿ ಮಿಂಚುತ್ತಿರಬಹುದು ಆದರೆ ಒಂದು ಕಾಲದಲ್ಲಿ ಅವರು ಕೂಡ ಒಂದು ಕಾಲದಲ್ಲಿ ಹಸಿವು ನಿರಾಸೆ ಅವಮಾನ ತಿರಸ್ಕಾರ ಗಳನ್ನು ಮೆಟ್ಟಿನಿಂತು ಈ ಮಟ್ಟಕ್ಕೆ ಬೆಳೆದು ಬಂದವರು.
ಕೇವಲ ಕನ್ನಡ ಚಿತ್ರರಂಗ ಕರ್ನಾಟಕಕ್ಕಷ್ಟೇ ಸೀಮಿತವಾಗಿದ್ದ ಕಾಲದಲ್ಲಿ ಕೆಜಿಎಫ್ ಚಾಪ್ಟರ್ 1 ಚಿತ್ರದ ಮೂಲಕ ಕನ್ನಡ ಚಿತ್ರರಂಗದ ಮಾರುಕಟ್ಟೆಯನ್ನು ಪರಭಾಷೆಗಳಿಗೆ ಕೂಡ ವಿಸ್ತರಿಸಿ ದಂತಹ ನಟ. ಇಂದು ಕನ್ನಡ ಚಿತ್ರ ಎಂದಾಕ್ಷಣ ಪರಭಾಷಿಗರಿಗೆ ಮೊದಲು ನೆನಪಾಗುವುದು ರಾಕಿಂಗ್ ಸ್ಟಾರ್ ಯಶ್ ರವರು. ಈಗಾಗಲೇ ಕೆಜಿಎಫ್ ಚಾಪ್ಟರ್ 1 ಭಾರತದಾದ್ಯಂತ ತನ್ನ ಜನಪ್ರಿಯತೆಯನ್ನು ಪಸರಿಸಿದ್ದು ಭಾರತದಾದ್ಯಂತ ಜನರು ಈಗ ಕೆಜಿಎಫ್ ಚಾಪ್ಟರ್ 2 ಬಿಡುಗಡೆಗೆ ಕಾಯುತ್ತಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಇದ್ದಾರೆ ಎಂದರೆ ಅವರ ಚಿತ್ರಗಳು ಏನನ್ನಾದರೂ ಸಮಾಜಕ್ಕೆ ಸಂದೇಶವನ್ನು ಬಿತ್ತುವಲ್ಲಿ ಯಾವುದೇ ಅವಕಾಶವನ್ನು ಬಿಟ್ಟು ಕೊಡುವುದಿಲ್ಲ. ಇನ್ನು ಇತ್ತೀಚಿಗಷ್ಟೇ ರಾಕಿಂಗ್ ಸ್ಟಾರ್ ಯಶ್ ರವರು ಬೆಂಗಳೂರಿನಲ್ಲಿ ಮನೆಯೊಂದನ್ನು ಖರೀದಿಸಿದ್ದರು. ಈಗ ಮತ್ತೆ ತಮ್ಮ ಪೋಷಕರಿಗೂ ಕೂಡ ಹಾಸನದಲ್ಲಿ ಮನೆಯೊಂದನ್ನು ಕಟ್ಟಿಸಿ ಕೊಟ್ಟಿದ್ದಾರೆ ಸ್ನೇಹಿತರೆ. ಹೌದು ಸ್ನೇಹಿತರೆ ಲಾಕ್ ಡೌನ್ ಸಂದರ್ಭದಲ್ಲಿ ಹಾಸನದ ವಿದ್ಯಾನಗರ ಎಂಬಲ್ಲಿ ಪೋಷಕರಿಗೆ ಅದ್ಭುತವಾದ ಮನೆಯೊಂದನ್ನು ಕಟ್ಟಿಸಿದ್ದು ಇಲ್ಲಿ ಕೃಷಿಗಾಗಿ ಜಮೀನನ್ನು ಕೂಡ ಖರೀದಿಸಿದ್ದಾರೆ. ಪೋಷಕರಿಗಾಗಿ ರಾಕಿಂಗ್ ಸ್ಟಾರ್ ಯಶ್ ರವರು ಕಟ್ಟಿಸಿ ಕೊಟ್ಟಿರುವ ಮನೆ ಹೇಗಿದೆ ಎಂಬುದನ್ನು ನೀವು ಈ ಕೆಳಗೆ ಕೊಟ್ಟಿರುವ ಯೌಟ್ಯೂಬ್ ವಿಡಿಯೋ ಅನ್ನು ನೋಡುವ ಮೂಲಕ ನೋಡಬಹುದಾಗಿದೆ.