ದೂಳೆಬ್ಬಿಸಿದ ಸುದೀಪ್ ರವರ ಆರ್ಸಿಬಿ ಕುರಿತಾದ ಹೇಳಿಕೆ ! ಅಷ್ಟಕ್ಕೂ ಸುದೀಪ್ ಹೇಳಿದ್ದೇನು ಗೊತ್ತಾ??
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಆರ್ಸಿಬಿ ತಂಡವು ಇದೀಗ ಐಪಿಎಲ್ ಟೂರ್ನಿ ಯನ್ನು ಯಶಸ್ವಿಯಾಗಿ ಆರಂಭ ಮಾಡಿದೆ. ಮೊದಲ ಪಂದ್ಯದಲ್ಲಿ ಕಳೆದ ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸುವ ಮೂಲಕ ಟೂರ್ನಿಯನ್ನು ಭರ್ಜರಿಯಾಗಿ ಆರಂಭಿಸಿದೆ ಎಂದರೆ ತಪ್ಪಾಗಲಾರದು ಈ ಮೂಲಕ ಆರ್ಸಿಬಿ ಅಭಿಮಾನಿಗಳಿಗೆ ತಂಡದ ಮೇಲೆ ಇದ್ದ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚು ಮಾಡುವಲ್ಲಿ ಆರ್ಸಿಬಿ ತಂಡ ಯಶಸ್ವಿಯಾಗಿದೆ.
![](http://routineofnews.com/wp-content/uploads/2021/04/rcb-2-1024x515.jpg)
ಈ ಬಾರಿ ಹೆಚ್ಚಿನ ಸಮತೋಲನದಿಂದ ತಂಡ ಕೂಡಿರುವ ಕಾರಣ ಹಾಗೂ ವಿವಿಧ ಆಟಗಾರರು ಇಲ್ಲದೆ ಇದ್ದರೂ ಪರ್ಯಾಯವಾಗಿ ಸಾಕಷ್ಟು ಆಟಗಾರರನ್ನು ಹೊಂದಿರುವ ಕಾರಣ ಆರ್ಸಿಬಿ ತಂಡ ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ನಿರೀಕ್ಷೆಯನ್ನು ಮೂಡಿಸಿದೆ, ಈ ಕ್ರೇಜ್ ಕೇವಲ ಅಭಿಮಾನಿಗಳಿಗಷ್ಟೇ ಇಲ್ಲ ಯಾಕೆಂದರೆ ಸೆಲೆಬ್ರಿಟಿಗಳು ಕೂಡ ಆರ್ಸಿಬಿ ತಂಡಕ್ಕೆ ಸಪೋರ್ಟ್ ಮಾಡುತ್ತಿದ್ದಾರೆ.
ಇದೀಗ ಈ ಸರದಿ ಕಿಚ್ಚ ಸುದೀಪ್ ರವರದ್ದಾಗಿದ್ದು ಕಿಚ್ಚ ಸುದೀಪ್ ರವರು ಆರ್ಸಿಬಿ ಕುರಿತು ಆರ್ಸಿಬಿ ತಂಡದ ಅಧಿಕೃತ ಟ್ವಿಟರ್ ಖಾತೆಯನ್ನು ಟ್ಯಾಗ್ ಮಾಡಿ, ಅತ್ಯುತ್ತಮ ಆರಂಭ, ಒಳ್ಳೆಯ ಆರಂಭವಾಗಿದೆ, ಒಂದು ಮ್ಯಾಚಿನ ಗೆಲುವಿನ ಕುರಿತು ಒಮ್ಮೆ ಆಲೋಚನೆ ಮಾಡೋಣ ಎಂಬರ್ಥದಲ್ಲಿ ಒಂದು ಪಂದ್ಯದ ಕುರಿತು ಒಮ್ಮೆ ಎಂದು ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ. ಹಾಗೂ ಮುಂದಿನ ಪಂದ್ಯಗಳಿಗೆ ಶುಭಾಶಯ ಕೋರಿದ್ದಾರೆ. ಈ ಟ್ವೀಟ್ ಇದೀಗ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಸದ್ದು ಮಾಡುತ್ತಿದೆ.