ತಂದೆಯೇ ವಿಷಹಾಕಿ ದಿವ್ಯ ಸುರೆಶ್ ರವರಿಗೆ ಊಟ ಕಲಿಸಿಕೊಟ್ಟ ವಿಷಯದ ಕುರಿತು ಗೊತ್ತೇ??

7

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಮನೆಯಲ್ಲಿ ಇದೀಗ ಪ್ರತಿಯೊಬ್ಬರ ಸ್ಪರ್ಧಿಗಳು ಕೂಡ ತಮ್ಮ ಜೀವನದಲ್ಲಿ ಹಿಂದಿರುವ ನೋವಿನ ಕಥೆಗಳನ್ನು ಹೇಳಿ ಕೊಳ್ಳುವ ಅವಕಾಶ ವನ್ನು ಬಿಗ್ ಬಾಸ್ ನೀಡಿದ್ದಾರೆ, ಇದೀಗ ಪ್ರತಿಯೊಬ್ಬರು ಸ್ಪರ್ಧಿಗಳು ಕೂಡ ತಮ್ಮ ನಗುವಿನ ಹಿಂದೆ ಇರುವ ನೋವಿನ ಕಥೆಗಳನ್ನು ಹೊರ ಹಾಕುತ್ತಿರುವ ಸಂದರ್ಭದಲ್ಲಿ ಕಳೆದ ವಾರ ಕೆಲವು ಸ್ಪರ್ಧಿಗಳು ತಮ್ಮ ಕುರಿತು ಹೇಳಿ ಕೊಂಡಿದ್ದರು.

ಇನ್ನು ಈ ವಾರ ಇದೀಗ ದಿವ್ಯ ಸುರೇಶ್ ಹಾಗೂ ಇನ್ನಿತರ ಸ್ಪರ್ಧಿಗಳು ತಮ್ಮ ನೋವಿನ ಕುರಿತು ಹೇಳಿ ಕೊಳ್ಳುವಾಗ ದಿವ್ಯ ರವರು ಮಾತನಾಡಿ ಹೇಳಿದ ಕಥೆ ಎಲ್ಲರ ಕಣ್ಣಲ್ಲೂ ನೀರು ತರಿಸಿದೆ ಹೌದು ಸ್ನೇಹಿತರೆ ಜೀವನದಲ್ಲಿ ಯಾರಿಗೂ ಹೇಳದ ಕಹಿ ಘಟನೆಗಳನ್ನು ಹೇಳಿ ಕೊಳ್ಳುವ ಅವಕಾಶ ನೀಡಿದಾಗ ದಿವ್ಯ ಸುರೇಶ್ ರವರು ಮಾತನಾಡಿ,

ನನ್ನ ತಂದೆ ನಾವು ಮಾಡುವ ಊಟಕ್ಕೆ ವಿಷ ಹಾಕಿದ್ದರು, ಅವರು ಯಾವತ್ತೂ ನನಗೆ ಊಟ ಬಡಿಸಿ ದವರಲ್ಲ, ಆದರೆ ಅವತ್ತು ಊಟ ಕಲಸಿಕೊಂಡು ಬಂದು ನನಗೂ ಹಾಗೂ ನನ್ನ ಅಣ್ಣನಿಗೂ ನೀಡಿದರು. ತಿಂದ ಕೆಲವೇ ಕೆಲವು ನಿಮಿಷಗಳಲ್ಲಿ ನನ್ನ ತಂದೆ ವಾಂತಿ ಮಾಡಿ ಕೊಳ್ಳಲು ಆರಂಭಿಸಿದರು ತದ ನಂತರ ನಮ್ಮ ಅಣ್ಣ ಹಾಗೂ ನಾನು ಕೂಡ ವಾಂತಿ ಮಾಡಿಕೊಂಡೆ, ಮೂರು ಜನ ಬದುಕಿರಬಾರದು ಎಂದು ನಮ್ಮ ತಂದೆಯೇ ನಿರ್ಧಾರ ತೆಗೆದುಕೊಂಡರು ಎಂದು ಹೇಳಿದ್ದಾರೆ, ಈ ಕಥೆ ಎಲ್ಲರ ಕಣ್ಣಲ್ಲಿ ನೀರು ತರಿಸಿದ್ದು ಇಷ್ಟು ದಿವಸ ನಗಿಸುತ್ತಿದ್ದ ದಿವ್ಯ ರವರು ಇದೀಗ ಎಲ್ಲರನ್ನು ಒಮ್ಮೆಲೇ ಭಾವನಾತ್ಮಕವಾಗಿ ಮಾಡಿದ್ದಾರೆ.

Get real time updates directly on you device, subscribe now.