ಕೊನೆಗೂ ರಾಬರ್ಟ್ ಚಿತ್ರದ ಕುರಿತು ಪ್ರತಿಕ್ರಿಯೆ ನೀಡಿದ ಸುದೀಪ್ ! ಹೇಳಿದ್ದೇನು ಗೊತ್ತಾ??
ನಮಸ್ಕಾರ ಸ್ನೇಹಿತರೆ ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಚಿತ್ರ ರಾಬರ್ಟ್ ಸಿನಿಮಾ ಇದೀಗ ಕರ್ನಾಟಕ ಹಾಗೂ ತೆಲುಗು ರಾಜ್ಯಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಇನ್ನು ಈ ಸಿನಿಮಾ ಕುರಿತು ವಿವಿಧ ಚಿತ್ರರಂಗದ ದಿಗ್ಗಜರು ಪ್ರತಿಕ್ರಿಯೆ ನೀಡುತ್ತಿದ್ದಾರೆ, ಕಳೆದ ಕೆಲವು ಕೆಲವು ಗಂಟೆಗಳ ಹಿಂದಷ್ಟೇ ಅಲ್ಲು ಅರ್ಜುನ್ ರವರು ಕೂಡ ಪ್ರತಿಕ್ರಿಯೆ ನೀಡಿ ಸಿನಿಮಾ ಅದ್ಭುತವಾಗಿ ಮೂಡಿಬಂದಿದೆ ಖಂಡಿತವಾಗಲೂ ಇದೊಂದು ಮತ್ತೊಂದು ಲೆವೆಲ್ ಸಿನಿಮಾ ಈ ಚಿತ್ರ ಕನ್ನಡ ಹಾಗೂ ತೆಲುಗು ಎರಡನ್ನೂ ಕೂಡ ಯಶಸ್ವಿಯಾಗಲಿ ಎಂದು ಹಾರೈಸಿದರು.
ಅಷ್ಟೇ ಅಷ್ಟೇ ಅಲ್ಲದೆ ಕನ್ನಡ ಚಿತ್ರರಂಗದಲ್ಲಿ ಗಳಿಸಿರುವ ಅಭಿಮಾನಿಗಳ ರೀತಿ ಈ ಚಿತ್ರದ ಮೂಲಕ ದರ್ಶನ್ ರವರು ತೆಲುಗು ಚಿತ್ರರಂಗದಲ್ಲೂ ಕೂಡ ಗಳಿಸುತ್ತಾರೆ ಎಂದು ಅಲ್ಲು ಅರ್ಜುನ್ ರವರು ಹೇಳಿಕೆ ನೀಡಿದ್ದರು ಇನ್ನು ಚಿತ್ರದ ಕುರಿತು ಸುದೀಪ್ ರವರು ಪ್ರತಿಕ್ರಿಯೆ ನೀಡಿದ್ದು ಏನು ಹೇಳಿದ್ದಾರೆ ಎಂಬುದನ್ನು ಕೇಳೋಣ ಬನ್ನಿ.
![](http://routineofnews.com/wp-content/uploads/2021/03/sudeep-darshan-1024x513.jpg)
ಸ್ನೇಹಿತರೇ ಇದೀಗ ಭರ್ಜರಿ ಪ್ರದರ್ಶನ ಕಾಣುತ್ತಿರುವ ರಾಬರ್ಟ್ ಸಿನಿಮಾ ಕುರಿತು ಮಾತನಾಡಿರುವ ಸುದೀಪ್ ರವರು ನಿರ್ಮಾಪಕ ಉಮಾಪತಿ ರವರು ಚಿತ್ರವನ್ನು ಬಹಳ ಕಷ್ಟಪಟ್ಟು ನಿರ್ಮಾಣ ಮಾಡಿದ್ದಾರೆ ಚಿತ್ರದ ಕುರಿತು ಒಳ್ಳೆಯ ವಿಮರ್ಶೆಗಳು ಕೇಳಿಬರುತ್ತಿವೆ, ಖಂಡಿತ ಜನರು ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ ಎಂಬುದು ಈಗಾಗಲೇ ತಿಳಿದಿದೆ, ಚಿತ್ರ ಮತ್ತಷ್ಟು ಯಶಸ್ಸು ಕೊಡಲಿ ಎಂದು ಹಾರೈಸುತ್ತೇನೆ ಹಾಗೂ ದಯವಿಟ್ಟು ಎಲ್ಲರೂ ಥಿಯೇಟರ್ ಗಳಿಗೆ ಹೋಗಿ ಸಿನಿಮಾ ನೋಡಿ ಯಾರು ದಯವಿಟ್ಟು ಪೈರಸಿ ಮಾಡಬೇಡಿ ಎಂದು ತಮ್ಮ ಫೇಸ್ಬುಕ್ ಫ್ಯಾನ್ಸ್ ಪೇಜ್ ಮೂಲಕ ಮನವಿ ಮಾಡಿಕೊಂಡಿದ್ದಾರೆ.