ಕೊನೆಗೂ ರಾಹುಲ್ ಸೇಫ್, ಆದರೆ ಮತ್ತೊಬ್ಬ ಆಟಗಾರ ಮುಂದಿನ ಪಂದ್ಯದಿಂದ ಹೊರಹೋಗುವುದು ಖಚಿತ. ಯಾರು ಗೊತ್ತೇ??

34

Get real time updates directly on you device, subscribe now.

ಟಿ20 ವಿಶ್ವಕಪ್ ನ ಸೂಪರ್ 12 ಹಂತದ ಪಂದ್ಯಗಳು ಶುರುವಾದ ಬಳಿಕ, ಭಾರತ ತಂಡವು ಆಡಿದ ಎರಡು ಪಂದ್ಯಗಳಲ್ಲೂ ಯಶಸ್ಸು ಪಡೆದು ಮುನ್ನುಗ್ಗಿತ್ತಿದೆ. ಉತ್ತಮವಾದ ಆರಂಭ ಪಡೆದುಕೊಂಡಿರುವ ಭಾರತ ತಂಡದ ಮೇಲೆ ಬಹಳಷ್ಟು ನಿರೀಕ್ಷೆ ಇದೆ. ಮೊದಲ ಪಂದ್ಯವನ್ನು ಕಳೆದ ಭಾನುವಾರ ಪಾಕಿಸ್ತಾನ್ ವಿರುದ್ಧ ಆಡಿ ಭರ್ಜರಿಯಾದ ಪ್ರದರ್ಶನ ನೀಡಿತು, ಇನ್ನು ಎರಡನೇ ಪಂದ್ಯವನ್ನು ನೆದರ್ ಲ್ಯಾನ್ಡ್ ತಂಡದ ವಿರುದ್ಧ ಆಡಿ, ಬಹಳ ಸುಲಭವಾಗಿ ಗೆಲುವು ಸಾಧಿಸಿತು ಭಾರತ ತಂಡ. ಈ ಎರಡು ಪಂದ್ಯಗಳಲ್ಲಿ ತಂಡದ ಆರಂಭಿಕ ಆಟಗಾರ ಕೆ.ಎಲ್.ರಾಹುಲ್ ಅವರು ವೈಫಲ್ಯ ಅನುಭವಿಸಿದರು.

ಮೊದಲ ಪಂದ್ಯದಲ್ಲಿ 4 ರನ್ ಗಳಿಸಿ ಔಟ್ ಆದರು, ಎರಡನೇ ಪಂದ್ಯದಲ್ಲಿ 9 ರನ್ ಗಳಿಸಿ ಔಟ್ ಆದರು. ಇದರಿಂದ ಕೆ.ಎಲ್.ರಾಹುಲ್ ಅವರು ಟೀಕೆಗೆ ಒಳಗಾಗಿದ್ದಾರೆ. ನಾಳಿದ್ದು ಭಾನುವಾರ ಸೌತ್ ಆಫ್ರಿಕಾ ವಿರುದ್ಧ ಭಾರತದ ಮೂರನೇ ಪಂದ್ಯ ನಡೆಯಲಿದ್ದು, ಇದರಲ್ಲಿ ಕೆ.ಎಲ್.ರಾಹುಲ್ ಅವರು ಉತ್ತಮ ಪ್ರದರ್ಶನ ನೀಡಬೇಲೇಬೇಕು ಎನ್ನುವ ಒತ್ತಡ ಇದೆ. ಒಂದು ವೇಳೆ ರಾಹುಲ್ ಅವರು ಫಾರ್ಮ್ ಕಂಡುಕೊಳ್ಳದೆ ಹೋದರೆ, ಮುಂದಿನ ಪಂದ್ಯಗಳಲ್ಲಿ ಅವರು ಪ್ಲೇಯಿಂಗ್ 11 ಗೆ ಹೋಗದೆ ಇರಬಹುದು, ರಾಹುಲ್ ಅವರು ಮುಂದಿನ ಪಂದ್ಯದಲ್ಲಿ ಚೆನ್ನಾಗಿ ಆಡುತ್ತಾರೆ ಎನ್ನುವ ವಿಶ್ವಾಸ ಇದೆ. ರಾಹುಲ್ ಅವರು ಮಾತ್ರವಲ್ಲದೆ ಮತ್ತೊಬಿನ ಆಟಗಾರನ ಭವಿಷ್ಯ ಕೂಡ ಈಗ ಪ್ಲೇಯಿಂಗ್ 11 ಇಂದ ಹೊರಹೋಗುವ ಅಂಚಿನಲ್ಲಿದೆ.

ಆ ಆಟಗಾರ ಆರ್.ಅಶ್ವಿನ್ ಅವರು, ಆಲ್ ರೌಂಡರ್ ಆಗಿ ಅಶ್ವಿನ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ವಿಶ್ವಕಪ್ ನ ಮೊದಲ ಎರಡು ಪಂದ್ಯಗಳಲ್ಲಿ ಇವರಿಗೆ ಉತ್ತಮ ಅವಕಾಶ ಸಿಕ್ಕರು, ಅದರ ಸದುಪಯೋಗ ಪಡಿಸಿಕೊಳ್ಳಲಿಲ್ಲ ಅಶ್ವಿನ್ ಅವರು. ಮೊದಲ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದರು, ಎರಡನೇ ಪಂದ್ಯದಲ್ಲೂ ಉತ್ತಮ ಪ್ರದರ್ಶನ ನನೀಡಿಲ್ಲ, ಹಾಗಾಗಿ ಅಶ್ವಿನ್ ಅವರ ಬದಲಾಗಿ ಚಾಹಲ್ ಅವರನ್ನು ಆಯ್ಕೆ ಮಾಡುವ ಎಲ್ಲಾ ಲಕ್ಷಣ ಕಾಣುತ್ತಿದೆ. ಎರಡು ಪಂದ್ಯಗಳಲ್ಲಿ ಚಾಹಲ್ ಅವರಿಗೆ ಅವಕಾಶ ಸಿಕ್ಕಿದೆ, ಚಾಹಲ್ ಅವರಿಗೆ ಪ್ಲೇಯಿಂಗ್ 11 ನಲ್ಲಿ ಸಿಗುತ್ತಾ ಎಂದು ಕಾದು ನೋಡಬೇಕಿದೆ.

Get real time updates directly on you device, subscribe now.