ತೆಲುಗಿನ ಬಾಲಯ್ಯ ರವರ ಮೇಲೆ ಗಂಭೀರ ಆರೋಪ ಮಾಡಿದ ನಟ ಕಲ್ಯಾಣ್ ರಾಮ್: ಆತನಿಂದಲೇ ನನ್ನ ಓದು ಹಾಳಾಗಿದ್ದು ಅಂದಿದ್ದು ಯಾಕೆ ಗೊತ್ತೇ??

36

Get real time updates directly on you device, subscribe now.

ಸಿನಿಮಾ ಇಂಡಸ್ಟ್ರಿಯಲ್ಲಿ ನಂದಮೂರಿ ಫ್ಯಾಮಿಲಿ ಕ್ರೇಜ್ ಬೇರೆ ಲೆವೆಲ್ ನಲ್ಲಿದೆ. ಹಿರಿಯ ನಟ ಎನ್.ಟಿ.ಆರ್ ಅವರಿಂದ ಹಿಡಿದು ಜೂನಿಯರ್ ಎನ್.ಟಿ.ಆರ್ ವರೆಗೆ ಮೂರು ತಲೆಮಾರಿನ ಹೀರೋಗಳು ಇಂಡಸ್ಟ್ರಿಯನ್ನು ಆಳುತ್ತಿದ್ದಾರೆ. ಆದರೆ ಜೂನಿಯರ್ ಎನ್.ಟಿ.ಆರ್ ಅಣ್ಣ ಕಲ್ಯಾಣ್ ರಾಮ್ ಇನ್ನು ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಪಡೆದಿಲ್ಲ. ಅಪ್ಪ, ಅಣ್ಣಂದಿರು ಸ್ಟಾರ್ ಹೀರೋಗಳಾಗಿ ಇಂಡಸ್ಟ್ರಿ ಆಳುತ್ತಿರುವಾಗ, ಸ್ಟಾರ್ ಪಟ್ಟಕ್ಕಾಗಿ ಹರಸಾಹಸ ಪಡುತ್ತಿದ್ದಾರೆ. ಇತ್ತೀಚೆಗೆ ಕಲ್ಯಾಣ್ ರಾಮ್ ಅವರು ಬಿಂಬಿಸಾರ ಚಿತ್ರದ ಮೂಲಕ ಬ್ಲಾಕ್ಬಸ್ಟರ್ ಹಿಟ್ ಪಡೆದಿದ್ದಾರೆ. ಬಹಳ ದಿನಗಳ ನಂತರ ಅವರ ವೃತ್ತಿ ಜೀವನದಲ್ಲಿ ಸಖತ್ ಹಿಟ್ ಸಿಕ್ಕಿತು.

ಬಿಂಬಿಸಾರ ಸಿನಿಮಾ ಅವರ ವೃತ್ತಿ ಜೀವನದಲ್ಲಿ ಇದೊಂದು ಮೈಲಿಗಲ್ಲು ಎಂದೇ ಹೇಳಬೇಕು. ಇಷ್ಟು ದೊಡ್ಡ ಹಿಟ್ ನಂತರ ಅವರು ಫುಲ್ ಸ್ವಿಂಗ್ ನಲ್ಲಿದ್ದಾರೆ. ಈ ಇಡೀ ಕಥೆಯು ಶ್ರೀದೇವಿ ಶಾಂಭವಿ ಮಗುವಿನ ಸುತ್ತ ಸುತ್ತುತ್ತದೆ. ಕಲ್ಯಾಣ್ ರಾಮ್ ಈ ಪಾತ್ರದಲ್ಲಿ ನಟಿಸಿದ ಮಗು ಜೊತೆಗೆ ಮಾತನಾಡಿ ತಮ್ಮ ಬಾಲ್ಯವನ್ನು ನೆನಪಿಸಿಕೊಂಡರು. ಚಿಕ್ಕಪ್ಪ ಬಾಲಯ್ಯ ಕಲ್ಯಾಣ್ ರಾಮ್ ಅವರನ್ನು ಚಿಕ್ಕವಯಸ್ಸಿನಲ್ಲಿ ಬಾಲನಟ ಎಂದು ಪರಿಚಯಿಸಿದಾಗಿ ತಿಳಿಸಿದರು. ಅವರಿಂದಲೇ ಸಿನಿಮಾ ರಂಗಕ್ಕೆ ಬಂದೆ ಎಂದು ನೆನಪಿಸಿಕೊಂಡು, ಬಾಲ್ಯದಲ್ಲಿ ಸಿನಿಮಾಗಳನ್ನು ತುಂಬಾ ಎಂಜಾಯ್ ಮಾಡುತ್ತಿದ್ದರು ಎಂದು ವಿವರಿಸಿದರು

ಕೋಕ್ , ಚಾಕಲೇಟ್ , ಕೇಕ್ ಗಳನ್ನು ಕೊಂಡುಕೊಳ್ಳುತ್ತಿದ್ದರು ಹಾಗಾಗಿ ಶಾಲೆಗೆ ಹೋಗದೆ ಸಿನಿಮಾದಲ್ಲಿಯೇ ಕಾಲ ಕಳೆಯುತ್ತಿದ್ದರು ಎಂದು ಹೇಳಿದರು ಕಲ್ಯಾಣ್ ರಾಮ್. ಸಿನಿಮಾ ಮುಗಿಸಿ ನೇರವಾಗಿ ಮನೆಗೆ ಹೋಗುತ್ತಿದ್ದ ಅವರು ಪುಸ್ತಕಗಳನ್ನು ಮುಟ್ಟುತ್ತಲೇ ಇರಲಿಲ್ಲವಂತೆ. ಇದರಿಂದ ಅಧ್ಯಯನದಲ್ಲಿ ಆಸಕ್ತಿ ಕಳೆದುಕೊಂಡಿದ್ದಾಗಿ ಹೇಳಿದರು. ಉತ್ತೀರ್ಣರಾಗಲು 45 ಅಂಕಗಳು, ಕಲ್ಯಾಣ್ ರಾಮ್ ಅವರು ಕೇವಲ 46 ಮತ್ತು 47 ಅಂಕ ಪಡೆದಿರುವುದಾಗಿ ಮಾತಿನಲ್ಲಿ ತಿಳಿಸಿದ್ದಾರೆ. ಅವರ ಶಿಕ್ಷಣ ಹಾಳಾಗಲು ತಂದೆಯೇ ಕಾರಣ ಎಂದು ನಗುತ್ತಲೇ ಹೇಳಿದ್ದಾರೆ.

Get real time updates directly on you device, subscribe now.