ವಿನ್ನರ್ ಆಗುವ ಎಲ್ಲಾ ಸಾಧ್ಯತೆ ಇದ್ದರೂ ದಿವ್ಯ ಸೋಲಲು ಕಾರಣವೇನು ಗೊತ್ತೇ?? ಇದೊಂದೇ ಕಾರಣದಿಂದ ದಿವ್ಯ ಸೋತದ್ದು.

8

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕೊನೆಗೂ ಬಿಗ್ ಬಾಸ್ ಸೀಸನ್ – 8 ಮುಗಿದಿದೆ. ವಿನ್ನರ್ ಆಗಿ ಮಂಜು ಪಾವಗಡ ಹೊರಹೊಮ್ಮಿದರೇ, ರನ್ನರ್ ಅಪ್ ಆಗಿ ಅರವಿಂದ್ ಕೆ.ಪಿ, ಮೂರನೇ ಸ್ಥಾನ ದಿವ್ಯಾ ಉರುಡುಗ, ನಾಲ್ಕನೇ ಸ್ಥಾನ ವೈಷ್ಣವಿ ಗೌಡ ಹಾಗೂ ಐದನೇ ಸ್ಥಾನವನ್ನು ಪ್ರಶಾಂತ್ ಸಂಬರ್ಗಿ ತುಂಬಿದ್ದಾರೆ. ಸೀಸನ್ ಆರಂಭವಾದಾಗಿನಿಂದ ದಿವ್ಯಾ ಸುರೇಶ್ ರವರಿಗೆ ಹೋಲಿಸಿದರೇ ದಿವ್ಯಾ ಉರುಡುಗ ಟಾಸ್ಕ್ ಗಳಲ್ಲಿ ಅಷ್ಟೇನೂ ಪರಿಣಾಮಕಾರಿಯಾಗಿ ಆಡುತ್ತಿರಲಿಲ್ಲ.

ಅವರು ಹಾಗೂ ಮನೆಯ ಸದಸ್ಯ ರನ್ನರ್ ಅಪ್ ಅರವಿಂದ್ ಕೆ.ಪಿ ಯವರ ಸ್ನೇಹ ಹಾಗೂ ಅದರ ಸುತ್ತ ಕೇಳಿ ಬರುತ್ತಿದ್ದ ಗಾಸಿಪ್ ಗಳಿಂದಾಗಿ ದಿವ್ಯಾ ಉರುಡುಗ ಹೆಸರು ಮನೆಯಲ್ಲಿ ಹಾಗೂ ಮನೆಯ ಹೊರಗಡೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಓಡುತ್ತಿತ್ತು. ಆ ಕಾರಣಕ್ಕೆ ದಿವ್ಯಾ ಉರುಡುಗ ಹಲವಾರು ವಾರಗಳ ಕಾಲ ಮನೆಯಲ್ಲಿ ಉಳಿದರು. ಈ ಮಧ್ಯೆ ಅನಾರೋಗ್ಯದ ಕಾರಣ ದಿವ್ಯಾ ಉರುಡುಗ ಎರಡು ವಾರಗಳ ಕಾಲ ಮನೆಯಿಂದ ಹೊರಗಿದ್ದರು. ಈ ಸಮಯದಲ್ಲಿ ದಿವ್ಯಾ ಮತ್ತೇ ವಾಪಸ್ ಮನೆಗೆ ಬರುವುದಿಲ್ಲವೆಂದೇ ಹೇಳಲಾಗಿತ್ತು.

ಆದರೇ ರಾಜೀವ್ ನಿರ್ಗಮನದ ನಂತರ ದಿವ್ಯಾ ಉರುಡುಗರವರನ್ನ ವಾಪಸ್ ಕರೆಸಿ ಕೊಳ್ಳಲಾಯಿತು.ಆದರೇ ಮತ್ತೆ ಮನೆಗೆ ವಾಪಸ್ ಆದ ದಿವ್ಯಾ ಉರುಡುಗ ಮನೆಯ ಏಲಿಮಿನೇಷನ್ ನಿಂದ ಬಚಾವಾಗಲು, ಕಳಪೆ ಬೋರ್ಡಿನಿಂದ ತಪ್ಪಿಸಿಕೊಳ್ಳಲು, ಅರವಿಂದ್ ಜೊತೆಗಿನ ಸಲುಗೆಯನ್ನೇ ಬಳಸಿಕೊಳ್ಳುತ್ತಿದ್ದರೇ ಹೊರತು, ಟಾಸ್ಕ್ ಗಳಲ್ಲಿನ ಭಾಗವಹಿಸುವಿಕೆಯಾಗಲಿ ಸ್ವಲ್ಪ ಕಡಿಮೆ ಮಾಡಿಕೊಂಡಿದ್ದರು. ಹಲವಾರು ಟಾಸ್ಕ್ ಗಳನ್ನ ಅವರು ಗೆದ್ದಿದ್ದು ಅರವಿಂದ್ ರವರ ಸಹಾಯದಿಂದಲೇ ಎಂಬುದು ಗಮನಾರ್ಹ. ಅತಿಯಾದ ಅರವಿಂದ್ ರವರ ಸ್ನೇಹದಿಂದ ಬಿಗ್ ಬಾಸ್ ಸೀಸನ್ -8 ರಲ್ಲಿ ದಿವ್ಯಾ ಉರುಡುಗ ಅವರಿಗೆ ಗೆಲ್ಲುವ ಆವಕಾಶ ಕೈ ತಪ್ಪಿತು ಎಂದು ವಿಶ್ಲೇಷಿಸಲಾಗುತ್ತಿದೆ. ಒಂದು ವೇಳೆ ಅರವಿಂದ್ ಜೊತೆಗಿನ ಸ್ನೇಹ ಒಂದು ಲಿಮಿಟ್ ನಲ್ಲಿದ್ದರೇ, ಖಂಡಿತವಾಗಿಯೂ ದಿವ್ಯಾ ಉರುಡುಗ ಪ್ರಶಸ್ತಿ ಗೆಲ್ಲಬಹುದಿತ್ತು ಎಂದು ಹೇಳುತ್ತಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.