ಕೊನೆಗೂ ಹುಚ್ಚ ವೆಂಕಟ್ ರವರಿಗೆ ಕುಲಾಯಿಸಿದ ಅದೃಷ್ಟ, ಈಗಲಾದರೂ ಸರಿ ದಾರಿಗೆ ಬನ್ನಿ ಎಂದ ಫ್ಯಾನ್ಸ್. ಏನು ಗೊತ್ತಾ??

5

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ, ಕನ್ನಡ ಬಿಗ್ ಬಾಸ್ ಸೀಸನ್ 3 ಎಂದ ತಕ್ಷಣ ನೆನಪಿಗೆ ಬರುವುದು ಅದರಲ್ಲಿ ಸ್ಪರ್ಧಿಯಾಗಿದ್ದ ಹುಚ್ಚವೆಂಕಟ್. ಏಕೆಂದರೆ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಂಡ ಕೆಲವೇ ಕೆಲವು ವಾರಗಳಲ್ಲಿ ಅತಿ ಹೆಚ್ಚು ಜನಪ್ರಿಯತೆಯನ್ನು ಪಡೆದವರು. ಆ ನಂತರ ಇವರು ಕೆಲವು ವೈಯಕ್ತಿಕ ಕಾರಣಗಳಿಂದ ಬೆಳ್ಳಿತೆರೆ ಹಾಗೂ ಕಿರುತೆರೆಯಿಂದ ದೂರವಾಗಿದ್ದರು.

ಹುಚ್ಚ ವೆಂಕಟ್ ರವರು ನಟ,ನಿರ್ಮಾಪಕ, ಗಾಯಕ, ನಿರ್ದೇಶಕರಾಗಿಯೂ ಸಹ ಬೆಳ್ಳಿತೆರೆಯಲ್ಲಿ ಕೆಲಸ ಮಾಡಿದ್ದಾರೆ. ಆದರೆ ಅತಿ ಹೆಚ್ಚು ಜನಪ್ರಿಯತೆ ಗಳಿಸಿದ್ದು ಮಾತ್ರ ಬಿಗ್ ಬಾಸ್ ಶೋ ನಲ್ಲಿ. ಇವರು ತಾವೇ ನಿರ್ದೇಶನ ಮಾಡಿದ ಸ್ವತಂತ್ರಪಾಳ್ಯ ಸಿನಿಮಾದಲ್ಲಿ ನಾಯಕರಾಗಿ ನಟಿಸಿದ್ದಾರೆ. ನಂತರ ಇವರು ಪರಪಂಚ, ಮಾಯಾಬಜಾರ್, ಓ ಪ್ರೇಮವೇ ಸಿನಿಮಾಗಳಲ್ಲಿ ನಟಿಸಿ ತಕ್ಕ ಮಟ್ಟಿಗೆ ಜನಪ್ರಿಯರಾದರು.

ಈಗ ಹುಚ್ಚ ವೆಂಕಟ್ ರವರು ಖಾಸಗಿ ಕನ್ನಡ ಚಾನಲ್ ನಲ್ಲಿ ಪ್ರಾರಂಭವಾಗುತ್ತಿರುವ ಹೊಸ ಶೋ ‘ಲೈಫ್ ಓಕೆ’ ಕಾರ್ಯಕ್ರಮದಲ್ಲಿ ನಿರೂಪಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಅವರ ಬಳಿ ಈ ಶೋ ನ ಬಗ್ಗೆ ಕೇಳಿದರೆ “ಜನರಿಗೆ ತಾವು ನಡೆದು ಹೋಗುತ್ತಿರುವ ದಾರಿ ಸರಿ ಅಥವಾ ತಪ್ಪು ಎಂಬುದು ತಿಳಿದಿಲ್ಲ. ನಾನು ಅವರಿಗೆ ಈ ಶೋನ ಮೂಲಕ ಸರಿಯಾದ ದಾರಿ ಯಾವುದು ಎಂಬುದನ್ನು ತಿಳಿಸಲಿದ್ದೇನೆ” ಎಂದು ಹುಚ್ಚ ವೆಂಕಟ್ ಅವರು ಹೇಳುತ್ತಾರೆ.

ಕಾರಣಾಂತರಗಳಿಂದ ಸಿನಿಮಾ ಇಂಡಸ್ಟ್ರಿಯಿಂದ ದೂರ ಉಳಿದಿದ್ದ ಹುಚ್ಚ ವೆಂಕಟ್ ಅವರಿಗೆ ಇದೊಂದು ಸುವರ್ಣ ಅವಕಾಶ ಎನ್ನುತ್ತಿದ್ದಾರೆ ಜನಸಾಮಾನ್ಯರು. ಈ ಶೋ ನ ಮೂಲಕ ಕಿರುತೆರೆಗೆ ನಿರೂಪಕರಾಗಿ ಬರುತ್ತಿರುವ ವಿಷಯವನ್ನು ತಿಳಿದ ಹುಚ್ಚವೆಂಕಟ್ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನನ್ನು ಪರದೆಯ ಮೇಲೆ ನೋಡಬಹುದು ಎಂಬ ಸಂತಸವನ್ನು ವ್ಯಕ್ತಪಡಿಸುತ್ತಿದ್ದಾರೆ.

Get real time updates directly on you device, subscribe now.