ಕನ್ನಡ ಕಿರುತೆರೆಗೆ ಮತ್ತೊಬ್ಬರು ಕ್ಯಾತ ನಟ ಎಂಟ್ರಿ ! ಯಾವ ದಾರವಾಹಿ ಮತ್ತು ಯಾವ ಪಾತ್ರ ಗೊತ್ತಾ??

15

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ಕನ್ನಡ ಕಿರುತೆರೆಯಲ್ಲಿ ಇದೀಗ ಧಾರವಾಹಿಗಳು ಬಹಳ ಅದ್ಭುತವಾಗಿ ಮೂಡಿ ಬರುತ್ತಿವೆ. ಅದೇ ಕಾರಣಕ್ಕಾಗಿ ಪ್ರೇಕ್ಷಕರು ಕೂಡ ಧಾರವಾಹಿಗಳನ್ನು ಬಹಳ ಇಷ್ಟಪಟ್ಟು ನೋಡುತ್ತಿದ್ದಾರೆ, ಧಾರವಾಹಿಗಳು ಹಲವಾರು ವರ್ಷಗಳಾದರೂ ಕೂಡ ಪ್ರೇಕ್ಷಕರು ಮಾತ್ರ ಧಾರವಾಹಿಗಳನ್ನು ನೋಡುವುದನ್ನು ಮಾತ್ರ ಬಿಡುತ್ತಿಲ್ಲ ಯಾಕೆಂದರೆ ಕಾಲ ಕಾಲಕ್ಕೆ ತಕ್ಕಂತೆ ಟ್ವಿಸ್ಟ್ ಗಳನ್ನು ನೀಡುತ್ತ ದಾರವಾಹಿಗಳ ಕಥೆಯನ್ನು ಮುಂದಕ್ಕೆ ಸಾಗಿಸಲಾಗುತ್ತಿದೆ.

ಅದೇ ಕಾರಣಕ್ಕಾಗಿ ಪ್ರೇಕ್ಷಕರು ಕೂಡ ಧಾರವಾಹಿಗಳ ಜೊತೆ ಬಹಳ ಭಾವನಾತ್ಮಕವಾಗಿ ಬೆರೆತು ಕೊಂಡು ತಪ್ಪದೆ ಪ್ರತಿ ದಿನವೂ ಧಾರವಾಹಿಗಳನ್ನು ನೋಡುತ್ತಿದ್ದಾರೆ, ಹೀಗೆ ನೋಡುತ್ತಿರುವ ಧಾರವಾಹಿಗಳಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಮಲಿ ಧಾರವಾಹಿ ಕೂಡ ಒಂದು, ಕಮಲಿ ದಾರವಾಹಿ ಕನ್ನಡದ ಟಾಪ್ 15 ಧಾರವಾಹಿಗಳಲ್ಲಿ ಸದಾ ಸ್ಥಾನ ಪಡೆದು ಕೊಂಡಿರುತ್ತದೆ.

ಇನ್ನು ಈ ಕಮಲಿ ಧಾರಾವಾಹಿಯಲ್ಲಿ ನಾಯಕ ನಟನ ತಂದೆಯ ಪಾತ್ರದಲ್ಲಿ ಇಷ್ಟು ದಿವಸ ಮಿಥುನ್ ತೇಜಸ್ವಿ ರವರು ನಟನೆ ಮಾಡುತ್ತಿದ್ದರು, ಬಹಳ ಅದ್ಭುತವಾಗಿ ನಟನೆ ಮಾಡಿ ತಮಗೆ ನೀಡಿದ್ದ ಪಾತ್ರವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ್ದ ಮಿಥುನ್ ತೇಜಸ್ವಿ ಅವರು ಕಾರಣಾಂತರಗಳಿಂದ ಇದೀಗ ಧಾರವಾಹಿಯಿಂದ ದೂರ ಸರಿದಿದ್ದಾರೆ.

ಇವರ ಸ್ಥಾನಕ್ಕೆ ಕನ್ನಡದ ಖ್ಯಾತ ನಟ ಹಾಗೂ ಅತ್ಯದ್ಭುತ ಡ್ಯಾನ್ಸರ್ ಆಗಿರುವ ಮಾಸ್ಟರ್ ಸಂಜಯ್ ರವರು ಇದೀಗ ಧಾರವಾಹಿಯ ತಂಡ ಸೇರಿಕೊಂಡಿದ್ದಾರೆ. ಮಾಸ್ಟರ್ ಸಂಜಯ್ ರವರು ಹಲವಾರು ವರ್ಷಗಳಿಂದ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದಾರೆ, ಅದರಲ್ಲಿಯೂ ಅಯ್ಯಪ್ಪ ಸ್ವಾಮಿ ಯಾಗಿ ಶಬರಿಮಲೆ ಸ್ವಾಮಿ ಅಯ್ಯಪ್ಪ ಸಿನಿಮಾದಲ್ಲಿ ಇವರು ನಟಿಸಿರುವ ರೀತಿ ಇಂದಿಗೂ ಕೂಡ ಕಣ್ಣಮುಂದೆ ಇದ್ದಂತೆ ಇದೆ.

Get real time updates directly on you device, subscribe now.