ಪೈರಸಿ ಆದಮೇಲೆ ರಾಬರ್ಟ್ ಸಿನಿಮಾ ಕುರಿತು ಶಾಕಿಂಗ್ ಹೇಳಿಕೆ ನೀಡಿದ ಜಗಪತಿ ಬಾಬು ! ಹೇಳಿದ್ದೇನು ಗೊತ್ತಾ?

3

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಬಹುಶಹ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವಂತೆ ಕನ್ನಡ ಚಿತ್ರರಂಗದ ಸಿನಿಮಾಗಳಿಗೆ ಅಷ್ಟೇ ಅಲ್ಲದೆ ಇತರ ಭಾಷೆಗಳ ಸಿನಿಮಾರಂಗಕ್ಕೆ ಕಾಡುತ್ತಿದ್ದ ಪೈರಸಿ ಭೂತ ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ನಟಿಸಿರುವ ರಾಬರ್ಟ್ ಚಿತ್ರಕ್ಕೆ ಕೂಡ ಅಂಟಿಕೊಂಡಿದೆ. ಇದೇ ಮೊಟ್ಟ ಮೊದಲ ಬಾರಿಗೆ ತೆಲುಗು ಭಾಷೆಯಲ್ಲಿ ಸಿನಿಮಾ ಬಿಡುಗಡೆಯಾಗಿರುವ ಕಾರಣ ಪೈರಸಿ ಭೂತ ಮತ್ತಷ್ಟು ಹೆಚ್ಚಾಗಿದೆ.

ತಮಿಳು ರಾಕರ್ಸ್ ವೆಬ್ಸೈಟ್ ನವರಂತೂ ಗಂಟೆಗೊಂದು ಕ್ಲಾರಿಟಿ ಸಿನಿಮಾಗಳನ್ನು ಬಿಡುಗಡೆ ಮಾಡುತ್ತಿದ್ದಾರೆ, ಹೀಗಿರುವಾಗ ಎಲ್ಲವನ್ನು ತೆಗೆದು ಹಾಕುವ ಕೆಲಸ ಕೂಡ ಮಾಡಲಾಗುತ್ತಿದೆ. ಬಿಡುಗಡೆಯಾದ ಕೆಲವೇ ಕೆಲವು ಗಂಟೆಗಳಲ್ಲಿ ಪೈರಸಿ ಬಿಡುಗಡೆಯಾದ ಕಾರಣ ರಾಬರ್ಟ್ ಚಿತ್ರದ ಬಾಕ್ಸ್ ಆಫೀಸ್ ಮೇಲೆ ಗಣನೀಯ ಪರಿಣಾಮ ಬೀರಲಾಗುತ್ತದೆ ಎಂದು ಜಗಪತಿ ಬಾಬು ರವರು ಅಂದುಕೊಂಡಿದ್ದರಂತೆ.

ಈ ಕುರಿತು ಇದೀಗ ಮಾತನಾಡಿರುವ ಜಗಪತಿಬಾಬು ರವರು ನಿಜಕ್ಕೂ ದರ್ಶನ್ ರವರು ತೆಲುಗಿಗೆ ಬಂದಿರುವ ಸಮಯವನ್ನು ಸಂಭ್ರಮ ಪಡುವಾಗ ಪೈರಸಿ ಭೂತ ಅಡ್ಡ ಬಂದದ್ದು ನೋಡಿ ಒಂದು ಕ್ಷಣ ನಿಜಕ್ಕೂ ಶಾಕ್ ಆಯಿತು, ಮೊದಲನೇ ಚಿತ್ರದಲ್ಲಿ ಈ ರೀತಿಯ ಸವಾಲುಗಳನ್ನು ಎದುರಿಸಲು ಸಾಧ್ಯವಿಲ್ಲ ಕಷ್ಟ ಎಂದುಕೊಂಡಿದ್ದೆ. ಆದರೆ ಪೈರಸಿಯನ್ನು ದರ್ಶನ್ ರವರ ಸಿನಿಮಾ ಸೋಲಿಸಿ ಬಿಟ್ಟಿದೆ, ಈಗಲೂ ಕೂಡ ಥಿಯೇಟರ್ಗಳ ಕಡೆಗೆ ಕುಟುಂಬ ಸಮೇತರಾಗಿ ಜನರು ಬರುತ್ತಿದ್ದಾರೆ, ಇದನ್ನು ನೋಡಿ ನನಗೆ ಬಹಳ ಖುಷಿಯಾಗುತ್ತಿದೆ ಎಂದು ಜಗಪತಿ ಬಾಬು ರವರು ಹೇಳಿದ್ದಾರೆ. ನೀವು ಏನೇ ಹೇಳಿ ಇತರ ಭಾಷೆಗಳ ನಟರು ಕೂಡ ಈ ಚಿತ್ರವನ್ನು ಹೊಗಳುತ್ತಿರುವುದು ಒಂದು ಕ್ಷಣ ಸಂತೋಷ ನೀಡಿದರೇ ಅದೇ ಕ್ಷಣ ಶಾಕ್ ಕೂಡ ಆಗುತ್ತಿದೆ.

Get real time updates directly on you device, subscribe now.