ಕೋಟಿ ರಾಮುರವರ ಕನಸನ್ನು ತೀರಿಸಲು ಮುಂದಾದ ಅವರ ಮಕ್ಕಳು ಆ ಕನಸು ಏನು ಗೊತ್ತಾ??

3

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಈ ಮಹಾಮಾರಿ ಇಂದಾಗಿ ಚಿತ್ರರಂಗದಲ್ಲಿರುವ ಗಣ್ಯರು ಸಾಲುಸಾಲಾಗಿ ನಮ್ಮನ್ನು ಬಿಟ್ಟು ಹೋಗುತ್ತಿದ್ದಾರೆ. ಚಿತ್ರರಂಗದ ಪಾಲಿಗೆ ಶುಭಶಕುನ ವಲ್ಲ. ನಮ್ಮನ್ನು ಬಿಟ್ಟು ಹೋದವರಲ್ಲಿ ನಟರು ನಿರ್ಮಾಪಕರು ಸಂಗೀತ ನಿರ್ದೇಶಕರು ನಿರ್ದೇಶಕರು ಹೀಗೆ ಹಲವಾರು ಭಾಗದ ಗಣ್ಯರು ನಮ್ಮನ್ನು ಬಿಟ್ಟು ಮಹಾಮಾರಿಯ ಕಾರಣದಿಂದಾಗಿ ಅಗಲಿದ್ದಾರೆ. ಅದರಲ್ಲಿ ನಾವಿಂದು ಹೇಳಲು ಹೊರಟಿರುವ ವ್ಯಕ್ತಿ ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕರಲ್ಲಿ ಒಬ್ಬರು.

ಹೌದು ನಾನು ಹೇಳಲು ಹೊರಟಿರುವುದು ಕನ್ನಡ ಚಿತ್ರರಂಗದ ಕೋಟಿ ನಿರ್ಮಾಪಕರೆಂದು ಖ್ಯಾತರಾಗಿರುವ ಕೋಟಿ ರಾಮು ರವರ ಬಗ್ಗೆ. ಹೌದು ಕನ್ನಡ ಚಿತ್ರರಂಗದಲ್ಲಿ ಕೋಟಿ ಕೋಟಿ ಬಜೆಟ್ನ ಸಿನಿಮಾಗಳನ್ನು ಕನ್ನಡ ಚಿತ್ರರಂಗದಲ್ಲಿ ಚಿತ್ರೀಕರಿಸಲು ಪ್ರಾರಂಭಮಾಡಿದ ನಮ್ಮ ರಾಮು ಫಿಲಂ ರಾಮು ರವರು. ಚಿತ್ರ ನಿರ್ಮಾಣದ ಕುರಿತಂತೆ ಅವರಿಗಿದ್ದ ಒಲವು ಹಾಗೂ ಶ್ರದ್ಧೆ ಅವರನ್ನು ಅಂದಿನ ದಿನಗಳಲ್ಲಿ ಚಿತ್ರರಂಗದ ನಂಬರ್1 ನಿರ್ಮಾಪಕ ರನ್ನಾಗಿ ಮಾಡಿತ್ತು.

ಆದರೆ ಇತ್ತೀಚೆಗಷ್ಟೇ ಅವರಿಗೆ ಈ ಮಹಾಮಾರಿ ತಗುಲಿ ಇಹಲೋಕ ವನ್ನು ತ್ಯಜಿಸಿರೋದು ಎಲ್ಲರಿಗೂ ದುಃಖಕರ ಸಂಗತಿ. ಕನ್ನಡ ಚಿತ್ರರಂಗ ಇವರ ಅಗಲಿಕೆಯನ್ನು ಇಂದಿಗೂ ಸಹ ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಕೋಟಿ ರಾಮು ರವರು ಅಂದಿನ ಕಾಲದ ಜಾತ ನಟಿಯಾದ ಕನಸಿನ ರಾಣಿ ಎಂದೇ ಖ್ಯಾತರಾಗಿದ್ದ ಮಾಲಾಶ್ರೀ ಅವರನ್ನು ಮದುವೆಯಾಗಿದ್ದರು. ಮಾಲಾಶ್ರೀ ಅವರು ಕರ್ನಾಟಕ ಚಿತ್ರರಂಗದಲ್ಲಿ ತಮ್ಮ ಸ್ವಂತ ಪರಿಶ್ರಮದ ಮೂಲಕ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ಆ ಕಾಲದಲ್ಲಿ ವರ್ಷಕ್ಕೆ 12 ರಿಂದ 15 ಚಿತ್ರಗಳನ್ನು ಮಾಡುತ್ತಿದ್ದ ಅಂತಹ ಬಹುಬೇಡಿಕೆಯ ನಟಿ ಮಾಲಾಶ್ರೀ. ನಂತರದ ದಿನಗಳಲ್ಲಿ ರಾಮು ರವರನ್ನು ಮದುವೆಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈಗ ರಾಮುರವರ ಅಗಲಿಕೆ ಅವರನ್ನು ದುಃಖದ ಮಡುವಿಗೆ ತಳ್ಳಿದೆ. ಈಗ ಕುಟುಂಬದ ಜವಾಬ್ದಾರಿ ಮಾಲಾಶ್ರೀ ಅವರ ಹೆಗಲ ಮೇಲೆ ಬಿದ್ದಿದೆ. ಮಾಲಾಶ್ರೀ ಅವರಿಗೆ ಎರಡು ಮಕ್ಕಳಿದ್ದು ಅವರ ಜವಾಬ್ದಾರಿ ಈಗ ತಾಯಿಯಾದ ಮಾಲಾಶ್ರಿಯವರ ಮೇಲೆ ಇದೆ.

ಕೋಟಿ ರಾಮು ರವರಿಗೆ ತಮ್ಮ ಮಕ್ಕಳನ್ನು ವಿದೇಶದಲ್ಲಿ ಓದಿಸಬೇಕೆಂದು ತುಂಬಾ ಆಸೆ ಇತ್ತು. ಹಾಗೂ ತಮ್ಮ ಮಗನನ್ನು ಚಿತ್ರರಂಗಕ್ಕೆ ಕರೆತರಬೇಕೆಂಬ ಮಹದಾಸೆಯನ್ನು ಹೊತ್ತಿದ್ದರು ನಿರ್ಮಾಪಕ ರಾಮು ಅವರು. ಮಕ್ಕಳ ಕುರಿತಂತೆ ಸಾಕಷ್ಟು ಭವಿಷ್ಯದ ಕನಸಿನ ಕೊಂಡಿದ್ದ ರಾಮು ರವರು ಅದನ್ನು ಪೂರೈಸುವ ಮೊದಲೇ ಇಹಲೋಕ ತ್ಯಜಿಸಿದ್ದರು. ಈಗ ಮೊನ್ನೆಯಷ್ಟೇ ಸಮಾಧಿಯ ಬಳಿ ಪೂಜೆ ಸಲ್ಲಿಸಲು ಹೋದಾಗ ಮಕ್ಕಳು ತಂದೆಯ ಮಾತನ್ನು ನೆರವೇರಿಸುವುದಾಗಿ ಹೇಳಿಕೊಂಡಿದ್ದಾರೆ.

ಹೌದು ಪೂಜೆ ಮಾಡುವಾಗ ತಂದೆಯನ್ನು ನೆನೆಸಿಕೊಂಡು ನೀವು ಹೇಳಿದಂತೆ ನಾವು ಉನ್ನತ ಶಿಕ್ಷಣವನ್ನು ಪಡೆದು ತಾಯಿ ಹೇಳಿದಂತೆ ಕೇಳುತ್ತೇವೆ ಎಂದು ಹೇಳಿದ್ದಾರೆ. ರಾಮುರವರ ಸ್ಥಾನವನ್ನು ಅವರ ಅನುಪಸ್ಥಿತಿಯ ಸಂದರ್ಭದಲ್ಲಿ ಮಾಲಾಶ್ರೀ ಅವರು ತುಂಬಿ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ನೀಡಲಿ ಎಂಬುದೇ ನಮ್ಮೆಲ್ಲರ ಆಶಯ. ಈ ವಿಷಯದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಮಿಸ್ ಮಾಡಿದ ಹಂಚಿಕೊಳ್ಳಿ

Get real time updates directly on you device, subscribe now.