ಅಪ್ಪು ಅಂತಿಮ ಸಂಸ್ಕಾರಕ್ಕೆ ಡಿ ಬಾಸ್ ಬರದಿದ್ದಕ್ಕೆ ಕಾರಣ ಏನು ಗೊತ್ತಾ ಅಳುತ್ತ ಡಿ-ಬಾಸ್ ಹೇಳಿದ್ದೇನು ಗೊತ್ತಾ??

10

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇಡೀ ಭಾರತ ದೇಶದಲ್ಲಿ ಮಹಾತ್ಮ ಗಾಂಧಿ ಅವರನ್ನು ಬಿಟ್ಟರೆ ಅತ್ಯಂತ ಹೆಚ್ಚು ಜನರು ಅಂತಿಮದರ್ಶನಕ್ಕೆ ಹೋಗಿದ್ದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಂತಿಮದರ್ಶನಕ್ಕೆ. ಇದರಲ್ಲಿ ಅರ್ಥಮಾಡಿಕೊಳ್ಳಬಹುದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಜೀವನದಲ್ಲಿ ಬದುಕಿದ್ದಷ್ಟು ದಿನ ಏನನ್ನು ಸಂಪಾದಿಸಿದ್ದರು ಎನ್ನುವುದನ್ನು.

ಹೌದು ಗೆಳೆಯರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರನ್ನು ಕಂಠೀರವ ಸ್ಟೇಡಿಯಂನಲ್ಲಿ ಕೊನೆಯ ಬಾರಿಗೆ ಕಣ್ತುಂಬಿಕೊಳ್ಳಲು ರಾಜ್ಯದ ಹಾಗೂ ದೇಶದ ಹಲವಾರು ಭಾಗಗಳಿಂದ ಗಣ್ಯರು ಅಭಿಮಾನಿಗಳು ನಟರು ರಾಜಕೀಯ ನಾಯಕರು ಹೀಗೆ ಹಲವಾರು ಮಂದಿ ಬಂದಿದ್ದರು. ಅಧಿಕೃತ ಅಧಿಕಾರಿಗಳು ನೀಡಿರುವ ಹೇಳಿಕೆ ಮೇರೆಗೆ ಬರೋಬ್ಬರಿ 20 ಲಕ್ಷಕ್ಕೂ ಅಧಿಕ ಜನರು ಈ ಸಮಯದಲ್ಲಿ ಅಪ್ಪು ಅವರನ್ನು ಕಣ್ತುಂಬಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಪ್ಪು ರವರ ಒಳ್ಳೆಯ ಗುಣ ಹಾಗೂ ಸಾಮಾಜಿಕ ಕಾರ್ಯಗಳು ಅವರನ್ನು ಎಲ್ಲರೂ ಇಷ್ಟೊಂದು ದೊಡ್ಡ ಮಟ್ಟದಲ್ಲಿ ವಿದಾಯ ಹೇಳುವಂತೆ ಆಗಿದೆ ಎಂಬುದು ಅಂದುಕೊಳ್ಳಬಹುದಾದಂತ ಮಾತು.

ಪುನೀತ್ ರಾಜಕುಮಾರ್ ಅವರು ಕಷ್ಟದ ದಿನಗಳನ್ನು ಕಂಡಿರಲಿಲ್ಲ ಆದರೆ ಹಣ ಇದೆ ಎಂದು ಯಾವತ್ತೂ ಕೂಡ ಯಾರೆದರೂ ತೋರಿಸಲಿಲ್ಲ. ಅಣ್ಣಾವ್ರ ಮಗನಾಗಿದ್ದರೂ ಕೂಡ ಎಲ್ಲರಂತೆ ನಾನು ಎಂಬ ಭಾವನೆಯನ್ನು ಹೊಂದಿದ್ದರು. ಇನ್ನು ಈ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ರವರ ಅಂತಿಮ ಸಂಸ್ಕಾರ ನೋಡಲು ಎಲ್ಲರೂ ಬಂದಿದ್ದರು ಕೂಡ ಡಿ ಬಾಸ್ ಬಂದಿರಲಿಲ್ಲ. ಎಲ್ಲರೂ ಕೇಳುತ್ತಿರುವ ಈ ಪ್ರಶ್ನೆಗೆ ಈಗ ಸರಿಯಾದ ಉತ್ತರ ಸಿಕ್ಕಿದೆ. ಹೌದು ಗೆಳೆಯರೇ ಆಪ್ತರಲ್ಲಿ ದರ್ಶನ್ ರವರು ನನಗೆ ಅಪ್ಪುವನ್ನು ಆ ಸ್ಥಿತಿಯಲ್ಲಿ ನೋಡಲು ಸಾಧ್ಯವೇ ಇಲ್ಲ ಎಂಬುದಾಗಿ ಹೇಳಿದ್ದಾರೆ. ಇಷ್ಟು ಮಾತ್ರವಲ್ಲದೆ ನನ್ನ ಮನಸ್ಸಿನಲ್ಲಿ ಅಪ್ಪುವಿನ ನಗು ಭಾವದ ಮುಖ ಇದೆ ಅದನ್ನು ನಾನು ಶಾಶ್ವತವಾಗಿ ಕೊನೆಯವರೆಗೂ ಇಟ್ಟುಕೊಳ್ಳುತ್ತೇನೆ ಎಂಬುದಾಗಿ ಹೇಳಿದ್ದಾರೆ.

Get real time updates directly on you device, subscribe now.