ಹೂ ಮಳೆ ಮುಗಿಯುತ್ತಿದ್ದಂತೆ ತನ್ನ ತಂದೆ-ತಾಯಿ ಕನಸನ್ನು ಈಡೇರಿಸಲು ಮುಂದಾಗಿ ಮಹತ್ವದ ನಿರ್ಧಾರ ಕೈಗೊಂಡ ಚಂದನ, ಏನಂತೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕನ್ನಡ ಕಿರುತೆರೆಯ ದಾರವಾಹಿಗಳು ಹಾಗೂ ಧಾರಾವಾಹಿಯ ನಟ-ನಟಿಯರ ಸಾಕಷ್ಟು ಜನಪ್ರಿಯತೆ ಪಡೆದುಕೊಳ್ಳುತ್ತಿದ್ದಾರೆ. ಅವರಲ್ಲಿ ಇಂದು ನಾವು ಹೇಳಲು ಹೊರಟಿರುವ ಯುವನಟಿ ಕೂಡ ಒಬ್ಬರು ಎಂದು ಹೇಳಬಹುದಾಗಿದೆ. ನೀವು ಕರೆಕ್ಟಾಗಿ ಗೆಸ್ಟ್ ಮಾಡಿದ್ದೀರಾ ಖಂಡಿತವಾಗಿಯೂ ನಾವು ಮಾತನಾಡಲು ಹೊರಟಿರುವುದು ನಟಿ ಚಂದನ ರವರ ಕುರಿತಂತೆ. ಗೆಳೆಯರೇ ಚಂದನಾ ರವರು ಮೊದಲ ಬಾರಿಗೆ ಕಿರುತೆರೆಗೆ ಎಂಟ್ರಿ ನೀಡಿದ್ದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ನಡೆಸಿಕೊಡುವ ಕನ್ನಡ ಕಿರುತೆರೆಯ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ರಿಯಾಲಿಟಿ ಶೋ ಎಂದೇ ಖ್ಯಾತವಾಗಿರುವ ಬಿಗ್ ಬಾಸ್ ಕನ್ನಡ ನಲ್ಲಿ.
ಬಿಗ್ ಬಾಸ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಚಂದನಾ ರವರು ಕಿರುತೆರೆಯ ಪ್ರೇಕ್ಷಕರಿಗೆ ಚಿರಪರಿಚಿತರಾಗಿದ್ದರು. ಇನ್ನು ಇದಾದ ನಂತರ ಇವರ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಫಾಲೋವರ್ಸ್ ಹೆಚ್ಚಾಗತೊಡಗಿದ್ದಾರೆ. ಈಗಾಗಲೇ ಚಂದನ ರವರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ ಹಾಗೂ ಇವರ ಹೆಸರಿನಲ್ಲಿ ಹಲವಾರು ಫ್ಯಾನ್ಸ್ ಪೇಜ್ ಗಳು ಕೂಡಾ ಪ್ರಾರಂಭವಾಗಿದೆ. ಇನ್ನು ಈಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೂಮಳೆ ಧಾರವಾಹಿಯಲ್ಲಿ ಲಹರಿ ಪಾತ್ರದಲ್ಲಿ ಕಾಣಿಸಿಕೊಂಡು ದಾರವಾಹಿ ಪ್ರಿಯರಿಗೆ ಕೂಡ ನೆಚ್ಚಿನ ನಟಿಯಾಗಿದ್ದಾರೆ. ಇನ್ನು ಇತ್ತೀಚಿನ ದಿನಗಳಲ್ಲಿ ಚಂದನ ರವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ತಂದೆ ಹಾಗೂ ತಾಯಿಗಾಗಿ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದೇನೆ ಎಂಬುದಾಗಿ ಹಂಚಿಕೊಂಡಿದ್ದರು.

ಅದೇನೆಂದರೆ ಅವರ ತಂದೆ ಹಾಗೂ ತಾಯಿಯರಿಗೆ ಅವರು ಭರತನಾಟ್ಯದಲ್ಲಿ ಏನನ್ನಾದರೂ ಸಾಧಿಸಬೇಕು ಎನ್ನುವ ಹಂಬಲವಿತ್ತು. ಹೀಗಾಗಿಯೇ ತಂದೆ-ತಾಯಿಯರ ಆಸೆಯಂತೆ ಮತ್ತೊಮ್ಮೆ ಭರತನಾಟ್ಯಕ್ಕೆ ಕಾಲಿಟ್ಟಿದ್ದಾರೆ ನಟಿ ಚಂದನ. ಇನ್ನು ಇತ್ತೀಚಿಗೆ ಭರತನಾಟ್ಯ ಪ್ರಾಕ್ಟೀಸ್ ಮಾಡಿರುವ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು ತಂದೆ ತಾಯಿಯ ಆಸೆಯನ್ನು ಪೂರೈಸುವತ್ತ ಮೊದಲ ಹೆಜ್ಜೆ ಎಂಬುದಾಗಿ ಕೂಡ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಇನ್ನು ನಟಿ ಚಂದನ ರವರು ನಟಿಸುತ್ತಿರುವ ಹೂಮಳೆ ಧಾರವಾಹಿಯ ಲಹರಿ ಪಾತ್ರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.