ದಿವ್ಯ ಉರುಡುಗರವರನ್ನು ಮೆಚ್ಚಿಸಲು ಪರದಾಡುತ್ತಿರುವ ಅರವಿಂದ್ ಗೆ ಬಿಗ್ ಶಾಕ್ ನೀಡಿದ ಪ್ರೇಕ್ಷಕರು. ಮಾಡಿದ್ದೇನು ಗೊತ್ತೇ??

9

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇದೇ ಮೊಟ್ಟಮೊದಲ ಬಾರಿಗೆ ಕ್ಯಾಪ್ಟನ್ ಆಗಿರುವ ದಿವ್ಯ ಉರುಡುಗ ರವರು ಕ್ಯಾಪ್ಟನ್ ಪಟ್ಟವನ್ನು ನಿಭಾಯಿಸುವುದರಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂಬ ಮಾತುಗಳು ಮನೆಯ ಮಂದಿಯಿಂದ ಕೇಳಿ ಬರುತ್ತಿದೆ. ಅದರಲ್ಲಿಯೂ ಪ್ರಶಾಂತ್ ರವರು ಕೈಗೆತ್ತಿಕೊಂಡ ಏಪ್ರಾನ್ ಅನು ಮಂಜುರವರು ಕುತ್ತಿಗೆ ಧರಿಸಿದ್ದ ಮಾತುಕತೆಯಲ್ಲಿ ದಿವ್ಯ ಉರುಡುಗ ರವರು ಅಂದುಕೊಂಡಂತೆ ತಮ್ಮ ನಾಯಕತ್ವವನ್ನು ಮರೆತು ಮಂಜು ರವರ ಪರವಾಗಿ ಮಾತನಾಡಿದ್ದು ಪ್ರಶಾಂತ್ ರವರಿಗೆ ಸರಿಯೆನಿಸಲಿಲ್ಲ. ಇದೇ ಸಮಯದಲ್ಲಿ ಪ್ರಶಾಂತ್ ರವರು ದಿವ್ಯ ಉರುಡುಗ ರವರು ಮೋಸದ ಆಟ ಆಡುತ್ತಿದ್ದಾರೆ ಎಂದಿದ್ದಾರೆ.

ಆ ಕ್ಷಣದಿಂದ ಇಲ್ಲಿಯವರೆಗೂ ಕೂಡ ದಿವ್ಯ ದಿವ್ಯ ಉರುಡುಗ ರವರು ಒಂದಲ್ಲಾ ಒಂದು ರೀತಿಯಲ್ಲಿ ಮೋಸ ಮಾಡುತ್ತಿದ್ದೀರಿ ಎನ್ನುತ್ತಿರುವ ಪ್ರಶಾಂತ್ ರವರು ದಿವ್ಯ ಉರುಡುಗ ಅವರ ನಾಯಕತ್ವ ಮುಗಿದಾಗ ಕೂಡ ಇದೇ ಮಾತನ್ನು ಹೇಳುತ್ತಾರೆ, ಇದಕ್ಕೆ ದಿವ್ಯ ಉರುಡುಗ ರವರು ಯಾವುದೇ ಪ್ರತಿಕ್ರಿಯೆ ನೀಡದೆ ಇದ್ದರೂ ಕೂಡ ಪ್ರಶಾಂತ್ ರವರಿಗೆ ಅರವಿಂದ ಅವರು ಉತ್ತರ ನೀಡಲು ಮುಂದಾಗುತ್ತಾರೆ ಆಗ ಅವರಿಬ್ಬರ ನಡುವೆ ವಾಕ್ಸಮರ ತಾರಕಕ್ಕೇರುತ್ತದೆ.

ಇದರ ಕುರಿತು ಪ್ರೇಕ್ಷಕರು ಬಹಳ ಅಸಮಾಧಾನ ವ್ಯಕ್ತಪಡಿಸಿದ್ದು ಇಷ್ಟು ದಿವಸ ತನ್ನ ಅತ್ಯುತ್ತಮ ಆಟದ ಮೂಲಕ ಪ್ರೇಕ್ಷಕರ ಮನಗೆದ್ದಿದ್ದ ಅರವಿಂದ್ ಅವರು ಕಳೆದ ವಾರ ನಿಧಿ ಸುಬ್ಬಯ್ಯ ರವರ ವಿಚಾರದಲ್ಲಿ ಹಾಗೂ ಇವರ ಈ ವಿಚಾರದಲ್ಲಿ ಮಾತನಾಡುವ ಮೂಲಕ ತಪ್ಪು ಮಾಡಿದ್ದಾರೆ ಎಂಬುದು ಪ್ರೇಕ್ಷಕರ ಲೆಕ್ಕಾಚಾರವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕುರಿತು ಹೆಚ್ಚಿನ ಚರ್ಚೆ ನಡೆಯುತ್ತಿದ್ದವು, ಬಹುತೇಕರು ಅರವಿಂದ್ ರವರ ನಿರ್ಧಾರವನ್ನು ತಪ್ಪು ಎಂದು ಜರಿದಿದ್ದಾರೆ. ಕೆಲವೊಂದು ಪ್ರೇಕ್ಷಕರ ಅಭಿಪ್ರಾಯ ಗಳನ್ನು ನಾವು ಮೇಲಿನ ಫೋಟೋದಲ್ಲಿ ಹಾಕಿದ್ದು ನೀವು ನೋಡಿ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಬಾಕ್ಸಲ್ಲಿ ತಿಳಿಸಿ.

Get real time updates directly on you device, subscribe now.