ತೃತೀಯ ಲಿಂಗಿಗಳು ಹೇಗೆ ಜನಿಸುತ್ತಾರೆ ಗೊತ್ತಾ?? ಈ ತಪ್ಪು ಅವರದಲ್ಲ, ಅಪ್ಪ ಅಮ್ಮ ಮಾಡುವ ಈ ಕೆಲಸವೇ ಕಾರಣ.

AMP Ads

ನಮಸ್ಕಾರ ಸ್ನೇಹಿತರೇ ನಮ್ಮ ಸಮಾಜದಲ್ಲಿ ಹಲವಾರು ರೀತಿಯ ಭೇದಭಾವಗಳು ಮೊದಲಿನಿಂದಲೂ ಕೂಡ ನಡೆದುಕೊಂಡು ಬಂದಿವೆ. ಅದರಲ್ಲಿ ಮೊದಲನೇದಾಗಿ ನಾವು ಹೇಳಲು ಹೊರಟಿರುವುದು ತೃತೀಯಲಿಂಗಿ ಯರನ್ನು ನಮ್ಮ ಸಮಾಜ ನಾಗರಿಕ ಸಮಾಜದಿಂದ ಸಾಕಷ್ಟು ದೂರದಲ್ಲಿ ಇಟ್ಟಿದೆ ಎನ್ನುವುದು.

ಹೌದು ಗೆಳೆಯರೇ ಗಂಡು-ಹೆಣ್ಣು ಅದರನಂತರ ಬರುವುದೇ ತೃತಿಯ ಲಿಂಗಿಗಳು. ಅವರನ್ನು ಇಂಗ್ಲಿಷ್ನಲ್ಲಿ ಟ್ರಾನ್ಸ್ಜೆಂಡರ್ ಎಂದು ಕರೆಯುತ್ತಾರೆ. ಟ್ರಾನ್ಸ್ ಎಂದರೆ ಲಿಂಗದ ವಿರುದ್ಧ ಎಂದರ್ಥ. ಜೆಂಡರ್ ಎಂದರೆ ಲಿಂಗ. ಅಂದರೆ ಕೆಲವರು ಹುಟ್ಟುತ್ತಲೇ ಅವರ ಲಿಂಗದ ವಿರುದ್ಧ ಮನೋಭಾವದಲ್ಲಿ ಅಥವಾ ಅಂಗಾಂಗದ ದೃಷ್ಟಿಯಲ್ಲಿ ಕೂಡ ಬೆಳೆದುಕೊಂಡು ಬಂದಿರಬಹುದು. ಇನ್ನು ಕೆಲವರು ಬೆಳೆದ ಮೇಲೆ ತಮ್ಮ ಲಿಂಗದ ವಿರುದ್ಧ ಲಿಂಗ ಕ್ಕೆ ಆಕರ್ಷಿತರಾಗಿ ಹಾರ್ಮೋನುಗಳಲ್ಲಿ ಸಾಕಷ್ಟು ಬದಲಾವಣೆಗಳು ಹಾಗೂ ಸಮಸ್ಯೆಗಳು ಉಂಟಾಗಿ ತಮ್ಮ ವಿರುದ್ಧ ಲಿಂಗವನ್ನು ನಮ್ಮ ಲಿಂಗವೆಂದು ಭಾವಿಸಿ ಕೊಳ್ಳುವುದು.

AMP Ad3

ಈ ತರಹ ನಡೆದಾಗ ಹಲವಾರು ಜನರು ಅವರನ್ನು ವಿಚಿತ್ರವೆಂದು ಭಾವಿಸಿ ಅವರಿಂದ ದೂರವಾಗಿ ಇಟ್ಟುಕೊಳ್ಳುತ್ತಾರೆ. ಮಾನವ ಸಮಾಜದಲ್ಲಿ ತೃತೀಯಲಿಂಗಿ ರನ್ನು ಸಾಕಷ್ಟು ದೂರವೇ ಮಾಡಿ ಇಟ್ಟುಕೊಂಡಿರುತ್ತಾರೆ. ಇನ್ನು ಕೆಲವೊಮ್ಮೆ ತಾಯಿಯ ಗರ್ಭದಲ್ಲಿ ಇದ್ದಾಗಲೂ ಕೂಡ ಮಗು ಸಾಮಾನ್ಯವಾಗಿರುತ್ತದೆ ಆದರೆ ಹೊರಬಂದ ಮೇಲೆ ಅಲ್ಲಿ ಪ್ರತಿರೂಪವನ್ನು ಪಡೆದುಕೊಂಡಿರುತ್ತದೆ ಹೀಗಾಗಿ ಮಕ್ಕಳನ್ನು ಕೂಡ ಬೇರೆ ಕಡೆಗೆ ಬಿಟ್ಟು ಬಂದು ಬಿಡುತ್ತಾರೆ. ಕೆಲವರು ಹುಡುಗಿಯಾಗಿ ಜನಸಿ ಹುಡುಗನ ಹಾಗೆ ಆಡುತ್ತಾರೆ ಇನ್ನು ಕೆಲವರು ಹುಡುಗನಾಗಿ ಜನಿಸಿ ಹೆಣ್ಣಾಗಿ ನಟಿಸಲು ಆರಂಭಿಸುತ್ತಾರೆ.

ಇದು ನಟನೆ ಆಗಿರುವುದಿಲ್ಲ ಬದಲಾಗಿ ಹಾರ್ಮೋನುಗಳ ಬದಲಾವಣೆ ಎಂದು ಹೇಳಬಹುದಾಗಿದೆ ಇದು ಅವರನ್ನು ಹಾಗೆ ಆಡಿಸುತ್ತದೆ. ಇನ್ನೂ ವೈಜ್ಞಾನಿಕವಾಗಿ ಹೇಳುವುದಾದರೆ ಇವರ ಜನನಾಂಗಗಳು ಬೆಳವಣಿಗೆಯನ್ನು ಕಾಣುವುದು ಇಲ್ಲವಂತೆ. ಇವರಲ್ಲಿ ಹೆಣ್ಣು ಹಾಗೂ ಗಂಡಿನ ಗುಣಗಳೆರಡೂ ಮಿಶ್ರಣವಾಗಿರುತ್ತದೆ. ಇನ್ನು ಇವರ ನಡವಳಿಕೆಗಳು ಕೂಡ ಎರಡು ಲಿಂಗದ ಮಿಶ್ರಣವಾಗಿರುತ್ತದೆ. ಇಷ್ಟೆಲ್ಲ ಇರುವ ಪ್ರತಿಯ ಲಿಂಗಿಯ ಜನ್ಮ ಹೇಗೆ ಆಗುತ್ತದೆ ಎಂಬುದರ ಕುರಿತಂತೆ ನಾವು ನಿಮಗೆ ಹೇಳುತ್ತೇವೆ ಬನ್ನಿ.

AMP Ads4

ಇದರ ಕುರಿತಂತೆ ಸರಿಯಾದ ದಾವೆಗಳು ಇಲ್ಲವಾದರೂ ಕೂಡ ಜ್ಯೋತಿಷ್ಯ ಶಾಸ್ತ್ರಗಳ ಪ್ರಕಾರ ಮಗುವಿನ ಕುಂಡಲಿಯಲ್ಲಿ 8ನೇ ಮನೆಯಲ್ಲಿ ಶುಕ್ರ ಹಾಗೂ ಶನಿ ವಿರಾಜಮಾನರಾಗಿರುವಾಗ ಚಂದ್ರ ಹಾಗೂ ಗುರು ನೋಡದೆ ಇದ್ದರೆ ಇಂತಹ ಮಕ್ಕಳು ಹುಟ್ಟುತ್ತಾರೆ ಎಂಬ ಮಾತುಗಳು ಇವೆ. ಒಂದು ವೇಳೆ ಈ ಸಂದರ್ಭದಲ್ಲಿ ಒಳ್ಳೆಯ ಗ್ರಹದ ದೃಷ್ಟಿ ನಿಮ್ಮ ಮೇಲೆ ಬಿದ್ದರೆ ನಪುಂಸಕ ಮಗು ಹುಟ್ಟುವುದಿಲ್ಲ. ಇನ್ನು ಲೈಂಗಿಕ ಕ್ರಿಯೆ ಸಂದರ್ಭದಲ್ಲಿ ವೀರ್ಯಾಣುಗಳ ವ್ಯತ್ಯಯ ದಲ್ಲಿ ಕೂಡ ವ್ಯತ್ಯಾಸವಾಗಿ ನಪುಂಸಕ ಮಗು ಹುಟ್ಟುವ ಅವಕಾಶಗಳು ಕೂಡ ಇರುತ್ತದೆ.

ಇದರಿಂದಾಗಿ ಒಂದು ರೀತಿಯಲ್ಲಿ ಅಪ್ಪ-ಅಮ್ಮ ಕೂಡ ಮಗುವಿನ ಈ ಸ್ಥಿತಿಗೆ ಕಾರಣ ಎಂದು ಹೇಳಬಹುದಾಗಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಗ್ರಂಥ ಹಾಗೂ ಶಾಸ್ತ್ರಗಳ ಪ್ರಕಾರ ಪೂರ್ವಜನ್ಮದ ಪಾಪದ ಫಲವನ್ನು ತೀರಿಸಲು ಈ ಜನುಮದಲ್ಲಿ ತೃತಿಯ ಲಿಂಗದಲ್ಲಿ ಜನಿಸುತ್ತಾರೆ ಎಂಬ ಮಾತುಗಳು ಕೂಡ ಪ್ರಚಲಿತದಲ್ಲಿದೆ. ಇದಕ್ಕೆ ನಿದರ್ಶನವೆಂಬಂತೆ ಅರ್ಜುನ ಮಹಾಭಾರತದ ಸಂದರ್ಭದಲ್ಲಿ ಬೃಹನ್ನಳೆಯನ್ನು ಕೆಲವು ಸಮಯಗಳ ಕಾಲ ಇದ್ದು ತನ್ನ ಪಾಪವನ್ನು ಪರಿಹರಿಸಿ ಕೊಂಡಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗು ಅಭಿಪ್ರಾಯಗಳನ್ನು ತಪ್ಪದೆ ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Comments (0)
Add Comment