Kannada News: ದರ್ಶನ್ ಚಪ್ಪಲಿ ಎಸೆತ ಬಗ್ಗೆ ಶಿವಣ್ಣ ಒತ್ತಾಯದ ಪ್ರತಿಕ್ರಿಯೆಗೆ ದರ್ಶನ್ ಶಾಕಿಂಗ್ ಹೇಳಿಕೆ, ಚಿತ್ರರಂಗ ಮತ್ತೊಂದು ಶಾಕ್ ನಲ್ಲಿ.

AMP Ads

Kannada News: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕ್ರಾಂತಿ ಸಿನಿಮಾದ ಎರಡನೇ ಹಾಡು ಬಿಡುಗಡೆಗೆ ಹೊಸಪೇಟೆಗೆ ಬಂದಿದ್ದರು. ಅವರು ಬರುವ ಮೊದಲೇ, ದರ್ಶನ್ ಅವರ ಅಭಿಮಾನಿಗಳು ಮತ್ತು ಅಪ್ಪು ಅವರ ಅಭಿಮಾನಿಗಳ ನಡುವೆ ಫ್ಯಾನ್ ವಾರ್ ಶುರುವಾಗಿತ್ತು. ದರ್ಶನ್ ಅವರು ಅಪ್ಪು ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಆ ಸಮಯದಲ್ಲಿ ದರ್ಶನ್ ಅವರ ಮೇಲೆ ಕಕಿಡಿಗೇಡಿಯೊಬ್ಬರು ಚಪ್ಪಲಿ ಎಸೆದಿದ್ದರು. ಇದಾದ ಬಳಿಕ ದರ್ಶನ್ ಅವರ ಅಭಿಮಾನಿಗಳು ಅಪ್ಪು ಅವರ ಅಭಿಮಾನಿಗಳ ಮೇಲೆ ಕೋಪ ಕಾರುತ್ತಿದ್ದರು. ಈ ಘಟನೆ ಬಗ್ಗೆ ಚಂದನವನದ ಹಲವು ಕಲಾವಿದರು ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಇನ್ನು ದರ್ಶನ್ ಅವರ ಅಭಿಮಾನಿಗಳು ಜಗಳ ನಡೆದಿದ್ದ ಕಾರಣ, ಇದನ್ನು ಪುನೀತ್ ಅವರ ಅಭಿಮಾನಿಗಳೇ ಮಾಡಿದ್ದಾರೆ, ಅವರು ಕ್ಷಮೆ ಕೇಳಲೇಬೇಕು ಎನ್ನುತ್ತಿದ್ದಾರೆ. ಇತ್ತ ದೊಡ್ಮನೆ ಕುಟುಂಬದ ಅಭಿಮಾನಿಗಳು, ಅಪ್ಪು ಅವರ ಅಭಿಮಾನಿಗಳು ಆ ರೀತಿ ಮಾಡುವುದಿಲ್ಲ ಎಂದು ಹೇಳಿ, ಶಿವಣ್ಣ, ರಾಘಣ್ಣ ಅವರು ಇದಕ್ಕೆ ಪ್ರತಿಕ್ರಿಯೆ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಹಾಗಾಗಿ ಶಿವಣ್ಣ ಅವರು ಒಂದು ವಿಡಿಯೋ ಮೂಲಕ ಈ ಘಟನೆಗೆ ಪ್ರತಿಕ್ರಿಯೆ ನೀಡಿದ್ದಾರೆ. ಶಿವಣ್ಣ ಅವರು ದರ್ಶನ್ ಅವರಿಗೆ ಈ ರೀತಿ ಮಾಡಿದ ಅಗೌರವದಿಂದ ನನ್ನ ಮನಸ್ಸಿಗೆ ಬಹಳ ನೋವಾಗಿದೆ ಎಂದು ಹೇಳಿದ್ದಾರೆ. ಇದನ್ನು ಓದಿ..Kannada News: ಡಿ ಬಾಸ್ ಗೆ ಚಪ್ಪಲಿ ಎಸೆತ ಪ್ರಕರಣಕ್ಕೆ ಟ್ವಿಸ್ಟ್ , ಇರುವುದು ಕೇವಲ ಒಂದು ವಾರ ಸಮಯ ಅಷ್ಟೇ. ಏನಾಗಿದೆ ಗೊತ್ತೇ?

AMP Ad3

ಕಲಾವಿದರೆಲ್ಲ ಒಂದೇ ಮನೆಯವರ ಹಾಗೆ ಅಂತ ಈಗಲ್ಲ, ಆಗಿನಿಂದಲೂ ಅಪ್ಪಾಜಿ ಅವರು ಹೇಳುತ್ತಿದ್ದರು. ನಾವು ಅದೇ ರೀತಿ ಬದುಕಬೇಕು. ಎಲ್ಲರನ್ನು ಪ್ರೀತಿಯಿಂದ ಕಾಣುತ್ತ ಗೌರವಿಸಬೇಕು, ಈ ರೀತಿ ಮಾಡಬಾರದು. ಇದು ತಪ್ಪು. ಎಲ್ಲ ಮೇಲೆ ಪ್ರೀತಿ ತೋರಿ, ದ್ವೇಷ ಮತ್ತು ಅಗೌರವವನ್ನಲ್ಲ ಎಂದು ಹೇಳಿದ್ದಾರೆ ಶಿವಣ್ಣ. ಇದೀಗ ಶಿವಣ್ಣ ಅವರು ಮಾತನಾಡಿರುವ ಈ ವಿಡಿಯೋ ಭಾರಿ ವೈರಲ್ ಆಗುತ್ತಿದೆ. ಶಿವಣ್ಣ ಅವರು ಮಾತ್ರವಲ್ಲದೆ, ಸುದೀಪ್ ಅವರು, ಜಗ್ಗೇಶ್ ಅವರು ಸೇರಿದಂತೆ ಚಂದನವನದ ಹಲವು ಕಲಾವಿದರು ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನು ಓದಿ.. Kannada News: ಸೋದರಳಿಯ ಎಂದು ಮನೆಗೆ ಬಿಟ್ಟುಕೊಂಡರೆ, ಸ್ವಂತ ಅತ್ತೆಗೆ 17 ವರ್ಷದ ಹುಡುಗ ಮಾಡಿದ್ದೇನು ಗೊತ್ತೆ??

Comments (0)
Add Comment