Kannada News: ಇಡೀ ವಿಶ್ವವೇ ಕಾಂತಾರ ಮೆಚ್ಚಿರುವಾಗ ಆ ಒಬ್ಬ ಬಾಲಿವುಡ್ ನವನಿಗೆ ಶುರುವಾಗಿದೆ ಉರಿ: ಯಾಕೆ ಗೊತ್ತೇ? ಏನು ಹೇಳಿದ್ದಾರೆ ಗೊತ್ತೇ??

AMP Ads

Kannada News: ಕನ್ನಡ ಇಂಡಸ್ಟ್ರಿಯಲ್ಲಿ ತಯಾರಾದ ಕಾಂತಾರ ಸಿನಿಮಾ ತಯಾರಾಗಿದ್ದು 16 ಕೋಟಿ ಬಜೆಟ್‌ ನಲ್ಲಿ, ಆದರೆ 400 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಕನ್ನಡಕ್ಕೆ ಮಾತ್ರ ಎಂದು ಪ್ಲಾನ್ ಮಾಡಿದ್ದ ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿ, ದೇಶಾದ್ಯಂತ ಸಂಚಲನ ಸೃಷ್ಟಿಸಿತು. ಕಾಂತಾರ ಸಿನಿಮಾದಲ್ಲಿ ಕೊನೆಯ ಅರ್ಧ ಗಂಟೆ ಪ್ರೇಕ್ಷಕರಿಗೆ ಅತಿಹೆಚ್ಚು ಖುಷಿ ಮತ್ತು ಗೂಸ್ ಬಂಪ್ಸ್ ಕೊಟ್ಟಿದೆ. ಕಾಂತಾರ ಸಿನಿಮಾ ನೋಡಿ ಎಲ್ಲರೂ ವಾವ್ ಎಂದಿದ್ದಾರೆ. ಆದರೆ ಕಾಂತಾರ ಸಿನಿಮಾದಲ್ಲಿ ಏನಿದೆ ಅಂತ ಜನ ಇಷ್ಟರ ಮಟ್ಟಿಗೆ ನೋಡುತ್ತಿದ್ದಾರೆ ಎಂದು ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಹೇಳಿದ್ದಾರೆ.

ಕಾಂತಾರ ಸಿನಿಮಾ ಅವರಿಗೆ ಇಷ್ಟವಾಗಿಲ್ಲ. ಈ ಸಿನಿಮಾದ ಸಂದೇಶವೇನು? ಎಂದು ಪ್ರಶ್ನೆ ಮಾಡಿರುವ ಅನುರಾಗ್ ಕಶ್ಯಪ್ ಅವರು, ಇಂಥ ಸಿನಿಮಾಗಳು ಇಂಡಸ್ಟ್ರಿಯನ್ನು ಹಾಳು ಮಾಡುತ್ತವೆ ಎಂದು ಹೇಳಿದ್ದಾರೆ. ಅನುರಾಗ್ ಕಶ್ಯಪ್ ಅವರು ಮರಾಠಿ ಸಿನಿಮಾ ಸೈರಾಟ್ ಬಗ್ಗೆ ಕೂಡ ಇದೇ ರೀತಿಯ ಕಮೆಂಟ್ ಮಾಡಿದ್ದರು. ಆದರೆ ಆ ಸಿನಿಮಾ ಕೂಡ ಸೆನ್ಸೇಷನಲ್ ಹಿಟ್ ಆಗಿತ್ತು. ಈಗ ಕಾಂತಾರ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಬಾಲಿವುಡ್ ನಿರ್ದೇಶಕರು ಸೌತ್ ಸಿನಿಮಾಗಳ ಹಿರಿಮೆಯನ್ನು ಒಪ್ಪಿಕೊಂಡು ಹೊಗಳಲು ಸಾಧ್ಯವಾಗದೆ ಇಂತಹ ಕಮೆಂಟ್ ಗಳನ್ನು ಮಾಡುತ್ತಿದ್ದಾರೆ ಎನ್ನುತ್ತಿದ್ದಾರೆ ನೆಟ್ಟಿಗರು. ಕಾಂತಾರ ಸಿನಿಮಾದಲ್ಲಿ ಆ ಒಂದು ಮ್ಯಾಜಿಕ್ ಇಲ್ಲದಿದ್ದರೆ ಅಷ್ಟೊಂದು ಸಿನಿಪ್ರಿಯರು ಯಾಕೆ ಬಂದು ಸಿನಿಮಾ ನೋಡುತ್ತಾರೆ.. ಇದನ್ನು ಓದಿ.. Kannada News: ನಿಶ್ಚಿತಾರ್ಥ ಮುಗಿದ 2 ದಿನಕ್ಕೆ ಮುಂದಿನ ಸೊಸೆ ಬಗ್ಗೆ ಅಚ್ಚರಿಯ ಹೇಳಿಕೆ ಕೊಟ್ಟ ಸುಮಲತಾ, ಕೇಳಿ ಎಲ್ಲರೂ ಶಾಕ್.

AMP Ad3

ಕಾಂತಾರ ಸಿನಿಮಾ, ಕರ್ನಾಟಕದಲ್ಲಿ ನಡೆಯುವ ಸ್ಥಳೀಯ ಕಥೆಯ ಮೇಲೆ ಮಾಡಿರುವ ಸಿನಿಮಾ. ಸಿನಿಮಾದಲ್ಲಿ ಆಚಾರ, ವಿಚಾರ ಸಂಪ್ರದಾಯದ ಬೇರು ಇರುವುದರಿಂದ, ದೇವರ ಮೇಲೆ ನಂಬಿಕೆ ಇರುವುದರಿಂದ ಕಾಂತಾರ ಸಿನಿಮಾ ಸೂಪರ್ ಹಿಟ್ ಆಗಿವೆ. ಅದೇನೇ ಇರಲಿ ಚಿತ್ರ ಹಿಟ್ ಆದ ಖುಷಿಯಲ್ಲಿ ದಕ್ಷಿಣ ಭಾರತ ಚಿತ್ರಪ್ರೇಮಿಗಳಿಗೆ ದಕ್ಷಿಣ ಭಾರತದ ಸಿನಿಮಾಗಳ ಮೇಲೆ ಗೌರವ ಹೆಚ್ಚಾಗಿದೆ. ಸಿನಿಮಾದಲ್ಲಿ ಏನಿದೆ ಅಂತ ನೋಡ್ತಾ ಇದ್ದೀವಿ? ಇಷ್ಟು ದೊಡ್ಡ ಸಿನಿಮಾದಲ್ಲಿ ನಿಜವಾದ ಕಂಟೆಂಟ್ ಇಲ್ಲ, ಈ ರೀತಿ ಆದರೆಇಂಡಸ್ಟ್ರಿ ಸೋಲುತ್ತದೆ ಎಂದ ಅನುರಾಗ್ ಮೇಲೆ ಸೌತ್ ಪ್ರೇಕ್ಷಕರು ಕಿಡಿಕಾರಿದ್ದಾರೆ. ಇದನ್ನು ಓದಿ.. Jio Plans Kannada: ಕಡಿಮೆ ಬೆಳೆಗೆ ಮತ್ತೊಂದು ಆಫರ್ ಕೊಟ್ಟ ಜಿಯೋ: ಕೇವಲ 100 ರುಪಾಯಿಗೆ ನೀಡುತ್ತಿರುವ ಯೋಜನೆ ಯಾವುದು ಗೊತ್ತೇ??

Comments (0)
Add Comment