Cricket News: ವಿಶ್ವಕಪ್ ನಲ್ಲಿ ಒಂದೇ ಒಂದು ಪಂದ್ಯದಲ್ಲಿಯೂ ಅವಕಾಶ ನೀಡದೆ ಇದ್ದಿದ್ದಕ್ಕೆ ಈಗ ಪ್ರತಿಕ್ರಿಯೆ ಕೊಟ್ಟ ಚಾಹಲ್. ಹೇಳಿದ್ದೇನು ಗೊತ್ತೇ??

AMP Ads

Cricket News: ಐಸಿಸಿ ಟಿ20 ವರ್ಲ್ಡ್ ಕಪ್ (T20 World Cup) ನಲ್ಲಿ ಭಾರತ ತಂಡವು ಸೆಮಿಫೈನಲ್ಸ್ ಹಂತವನ್ನು ತಲುಪಿ, ಇಂಗ್ಲೆಂಡ್ (India vs England) ವಿರುದ್ಧ ಸೋತು ತವರಿಗೆ ಮರಳಿತು. ಈ ಟೂರ್ನಿಯಲ್ಲಿ ಭಾರತ ತಂಡದ ಇಬ್ಬರು ಪ್ರತಿಭಾನ್ವಿತ ಆಟಗಾರರಿಗೆ ಪ್ಲೇಯಿಂಗ್ 11 ನಲ್ಲಿ ಅವಕಾಶವೇ ಸಿಗಲಿಲ್ಲ. ಅವರಲ್ಲಿ ಒಬ್ಬರು ಯುಜವೇಂದ್ರ ಚಾಹಲ್ (Yuzvendra Chahal). 2021ರ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯದ ಚಾಹಲ್ ಅವರು, ಈ ವರ್ಷ ಸ್ಥಾನ ಪಡೆದರು, ಆದರೆ ಒಂದೇ ಒಂದು ಪಂದ್ಯದಲ್ಲಿ ಕೂಡ ಇವರಿಗೆ ಆಡುವ ಅವಕಾಶವೇ ಸಿಗಲಿಲ್ಲ. ಇದರ ಬಗ್ಗೆ ಇದೆ ಮೊದಲ ಬಾರುಹೆ ಚಾಹಲ್ ಅವರು ಮಾತನಾಡಿದ್ದಾರೆ.

ತಮಗೆ ಅವಕಾಶ ಸಿಗದೆ ಇರುವುದಕ್ಕೆ ಬೇಸರ ಇಲ್ಲ ಎಂದುದ್ದಾರೆ ಚಾಹಲ್, “ಇದು ಪರ್ಸನಲ್ ಆಟ ಅಲ್ಲ, ಇಲ್ಲಿ ತಂಡದ ಸಂಯೋಜನೆ ಬಹಳ ಮುಖ್ಯ. ಅಕ್ಷರ್ ಪಟೇಲ್ (Axar Patel) ಮತ್ತ್ ಆರ್.ಅಶ್ವಿನ್ (R Ashwin) ಉತ್ತಮ ಪ್ರದರ್ಶನ ನೀಡುವುದನ್ನು ನೋಡುತ್ತಿದ್ದೆ. ಬದುಕಲ್ಲಿ ಇದೆಲ್ಲ ನಡೆಯುತ್ತದೆ. ನನಗೆ ಅವಕಾಶ ಸಿಕ್ಕಿದರೆ ಉತ್ತಮ ಪ್ರದರ್ಶನ ನೀಡಲೇಬೇಕು ಎಂದುಕೊಂಡಿದ್ದೇ. ಇದರ ಬಗ್ಗೆ ರೋಹಿತ್ (Rohit Sharma) ಭಾಯ್ ನನ್ನ ಜೊತೆ ಮಾತನಾಡಿ ಕ್ಲಾರಿಟಿ ನೀಡಿದರು. 2023ರಲ್ಲಿ ಭಾರತದಲ್ಲೇ ಐಸಿಸಿ ಏಕದಿನ ವಿಶ್ವಕಪ್ (ODI World Cup) ನಡೆಯುತ್ತದೆ. 50 ಓವರ್ ಗಳ ಏಕದಿನ ವಿಶ್ವಕಪ್ ನಲ್ಲಿ ನಾನು 2019ರಲ್ಲಿ ಆಡಿದ್ದೆ.. ಇದನ್ನು ಓದಿ..Cricket News: ಟೀಮ್ ಇಂಡಿಯಾ ಅದೃಷ್ಟ ಬದಲಾಗಬೇಕು ಎಂದರೆ, ಆತನೊಬ್ಬ ಎಂಟ್ರಿ ಕೊಡಲೇಬೇಕೆ?? 130 ಕೋಟಿ ಜನರಲ್ಲಿ ಆತನೊಬ್ಬನೇ ಕಿಂಗ್??

AMP Ad3

ಈ ವಿಷಯಗಳ ಬಗ್ಗೆ ಪೂರ್ತಿ ವಿವರಣೆ ನೀಡೋದಕ್ಕೆ ನನಗೆ ಇಷ್ಟವಿಲ್ಲ. ಟೀಮ್ ಇಂಡಿಯಾ ಪರವಾಗಿ ಆಡುವುದು ಮಾತ್ರವೇ ನನಗೆ ಮುಖ್ಯ. ನನ್ನ ಮೊದಲ ಗುರಿ ಇದೇ ಆಗಿದೆ. ಪ್ಲೇಯಿಂಗ್ 11ಗೆ ನಾನು ಆಯ್ಕೆ ಆಗುತ್ತೇನೋ, ಇಲ್ಲವೋ ಎನ್ನುವುದು ನನ್ನ ಮೊದಲ ಗುರಿ. ಇದೇ ದಾರಿಯಲ್ಲಿ ಆಡುತ್ತೇನೆ ಎಂದು ನನಗೆ ನಂಬಿಕೆ ಇದೆ. 2023ರಲ್ಲಿ ನಡೆಯುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಗೆಲ್ಲುತ್ತದೆ ಎನ್ನುವ ವಿಶ್ವಾಸ ಮತ್ತು ನಂಬಿಕೆ ಕೂಡ ಇದೆ ..”ಎಂದು ಕೂಡ ಹೇಳಿದ್ದಾರೆ ಯುಜವೇಂದ್ರ ಚಾಹಲ್. ಇದನ್ನು ಓದಿ.. Cricket News: ಹೀನಾಯವಾಗಿ ಸರಣಿ ಸೋತರೂ ಕೂಡ ಮತ್ತೊಂದು ದಾಖಲೆ ಬರೆದ ರೋಹಿತ್ ಶರ್ಮ: ವೈಯಕ್ತಿಕವಾಗಿ ಮಾಡಿದ ಸಾಧನೆ ಏನು ಗೊತ್ತೇ?

Comments (0)
Add Comment