Cricket News: ಭಾರಿ ಆಲೋಚನೆ ಮಾಡಿ, ದಿನೇಶ್ ಕಾರ್ತಿಕ್ ಬೇಡ, ಭಾರತಕ್ಕೆ ಈತನೇ ಬೆಸ್ಟ್ ಫಿನಿಶರ್ ಎಂದ ರಾಬಿನ್, ಆಯ್ಕೆ ಮಾಡಿದ್ದು ಯಾವ ಕಿಲಾಡಿಯನ್ನು ಗೊತ್ತೆ?

AMP Ads

Cricket News: ಟೀಮ್ ಇಂಡಿಯಾದಲ್ಲಿ ಈಗ ಏನೆಲ್ಲಾ ತೊಂದರೆಗಳಿವೆ, ಸಮಸ್ಯೆಗಳಿವೆ ಎಂದು ಗೊತ್ತಾಗಿದ್ದು, ಕ್ರಿಕೆಟ್ ಪಂಡಿತರು, ನೆಟ್ಟಿಗರು, ಹಿರಿಯ ಆಟಗಾರರು ಎಲ್ಲರೂ ಕೂಡ ಬಿಸಿಸಿಐ ಗೆ ಸಲಹೆ ನೀಡುತ್ತಿದ್ದಾರೆ. ಈ ನಟ್ಟಿನಲ್ಲಿ ಹಿರಿಯ ಪ್ಲೇಯರ್ ಆಗಿರುವ ರಾಬಿನ್ ಉತ್ತಪ್ಪ ಅವರು ಒಂದು ಸಲಹೆ ನೀಡಿದ್ದು, ಫಿನಿಷರ್ ಪಾತ್ರಕ್ಕೆ ಇಬ್ಬರು ಆಟಗಾರರನ್ನು ಕೂಡ ಆಯ್ಕೆ ಮಾಡಿ, ಅವರಿಬ್ಬರನ್ನು ತಂಡಕ್ಕೆ ಆರಿದ್ದಾರೆ. ಅಷ್ಟಕ್ಕೂ ರಾಬಿನ್ ಉತ್ತಪ್ಪ ಅವರು ಹೆಸರಿಸಿರುವ ಆ ಆಟಗಾರರು ಯಾರ್ಯಾರು ಎಂದು ತಿಳಿಸುತ್ತೇವೆ ನೋಡಿ.

ಟಿ20 ವಿಶ್ವಕಪ್ ಗೆ ಈ ವರ್ಷ ಫಿನಿಷರ್ ಆಗಿ ಆಯ್ಕೆ ಆದವರು ದಿನೇಶ್ ಕಾರ್ತಿಕ್. ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ಮವಡಿದ್ದ ದಿನೇಶ್ ಕಾರ್ತಿಕ್ ಅವರು ಭಾರತ ತಂಡಕ್ಕೆ ಆಯ್ಕೆಯಾದರು. ಆದರೆ ತಮಗೆ ನೀಡಿದ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸುವಲ್ಲಿ ದಿನೇಶ್ ಕಾರ್ತಿಕ್ ಅವರು ವಿಫಲರಾದರು. ಹಾಗಾಗಿ ಅವರನ್ನು ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೆ ಆಯ್ಕೆ ಮಾಡಿಲ್ಲ. ಜೊತೆಗೆ ಕಾರ್ತಿಕ್ ಅವರಿಗೆ 37 ವರ್ಷ ಆಗಿರುವುದರಿಂದ ಮುಂದಿನ ವಿಶ್ವಕಪ್ ಸಮಯಕ್ಕೆ ಅವರು ಆಯ್ಕೆ ಆಗುವುದು ಕೂಡ ಕಷ್ಟವಾಗಿದೆ. ಹಾಗಾಗಿ ಅವರ ಬದಲಿಗೆ ರಾಬಿನ್ ಉತ್ತಪ್ಪ ಅವರು ಸಂಜು ಸ್ಯಾಮ್ಸನ್ ಅಥವಾ ದೀಪಕ್ ಹೂಡಾ ಅವರು ಆಯ್ಕೆಯಾದರೆ ಒಳ್ಳೆಯದು ಎಂದಿದ್ದಾರೆ. ಇದನ್ನು ಓದಿ..Cricket News: ಕಿಂಗ್ ಕೊಹ್ಲಿ vs ಸೂರ್ಯ ಕುಮಾರ್ ಯಾದವ್: ಇವರಿಬ್ಬರಲ್ಲಿ ಬೆಸ್ಟ್ ಟಿ 20 ಆಟಗಾರ ಯಾರು?? ಮಾಜಿ ಕ್ರಿಕೆಟಿಗರು ನೀಡಿದ ಉತ್ತರವೇನು ಗೊತ್ತೇ??

AMP Ad3

“ಹಾರ್ದಿಕ್ ಪಾಂಡ್ಯ ಅವರು ತಮಗೇ ಕೊಟ್ಟಿರುವ ಜವಾಬ್ದಾರಿಯನ್ನು ಚೆನ್ನಾಗಿ ನಿಭಾಯಿಸುತ್ತಿದ್ದಾರೆ. ಅವರ ಜೊತೆಗೆ ಸಂಜು ಸ್ಯಾಮ್ಸನ್ ಅಥವಾ ದೀಪಕ್ ಹೂಡಾ ಇದ್ದರೆ ಫಿನಿಷರ್ ಪಾತ್ರವನ್ನು ಚೆನ್ನಾಗಿ ನಿಭಾಯಿಸುತ್ತಾರೆ. ಮುಂದಿನ ವಿಶ್ವಕಪ್ ಸಮಯಕ್ಕೆ ಇವರಿಬ್ಬರನ್ನು ಭಾರತ ತಂಡ ಸಿದ್ಧಗೊಳಿಸಬೇಕಿದೆ. ಹೆಚ್ಚು ಪಂದ್ಯಗಳನ್ನು ಇವರಿಗೆ. ನೀಡಿದರೆ, ಗೆಲ್ಲಲು ಸುಲಭ ಆಗುತ್ತದೆ. 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದು ಬಹಳ ಕಷ್ಟ, ಎಲ್ಲರು ಅದರಲ್ಲಿ ಸಕ್ಸಸ್ ಕಾಣುವುದಿಲ್ಲ, ಅದರಿಂದ ಆಯ್ಕೆ ಸಮಿತಿ ತಾಳ್ಮೆ ವಹಿಸಿ ಆಯ್ಕೆ ಮಾಡಬೇಕು.” ಎಂದು ಹೇಳಿದ್ದಾರೆ ರಾಬಿನ್ ಉತ್ತಪ್ಪ. ಇದನ್ನು ಓದಿ..Biggboss Kannada: ಒಂದಲ್ಲ ಎರಡಲ್ಲ ಬರೋಬ್ಬರಿ 12 ವರ್ಷ ಇಡೀ ಕರ್ನಾಟಕವನ್ನು ಚಕ್ರವರ್ತಿಯಾಗಿ ಆಳಿದ್ದರಂತೆ ಆರ್ಯವರ್ಧನ್. ಹೇಗೆ ಅಂತೇ ಗೊತ್ತೇ?

Comments (0)
Add Comment