Puneeth: ತಂದೆಯ ಸಿನೆಮಾ ನೋಡುವ ವೇಳೆ ಅಪ್ಪು ಹಿರಿಯ ಮಗಳಿಗೆ ಆಗಿದ್ದೇನು ? ಕಣ್ಣೀರಿಟ್ಟ ಧೃತಿ ಅರ್ಧಕ್ಕೆ ಹೋಗಿದ್ದೇಕೆ ?

AMP Ads

Puneeth: ಗಂಧದಗುಡಿ (Gandhadagudi) ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Power Star Puneeth Rajkumar), ಕರ್ನಾಟಕದ ಮನೆಮಗ, ಕರ್ನಾಟಕ ರತ್ನ (Karnataka Rathna) ಅಪ್ಪು ಅವರ ಕೊನೆಯ ಸಿನಿಮಾ. ಈ ಸಿನಿಮಾವನ್ನು ನೋಡಲು ಎಲ್ಲಾ ಕುಟುಂಬಗಳು, ಕರ್ನಾಟಕದ ಪ್ರತಿಯೊಬ್ಬರು ಸಹ ಥಿಯೇಟರ್ ಗೆ ಬರುತ್ತಿದ್ದಾರೆ. ಇದು ಪುನೀತ್ ಅವರ ಪಯಣ, ಒಂದು ಪಾತ್ರವಾಗಿ ಅಲ್ಲದೆ೦, ಪವರ್ ಸ್ಟಾರ್ ಆಗಿ ಅಲ್ಲದೆ, ಪ್ರಕೃತಿಯ ಮೇಲೆ ಪ್ರೀತಿ ಇರುವ ಒಬ್ಬ ಸಾಮಾನ್ಯ ಮನುಷ್ಯನ ಹಾಗೆ ಅಪ್ಪು ನಿಜ ಜೀವನದಲ್ಲಿ ತಾವಿರುವ ಹಾಗೆ ಕಾಣಿಸಿಕೊಂಡಿದ್ದಾರೆ. ಗಂಧದಗುಡಿಯ ಮೂಲಕ ಅಪ್ಪು ಅವರನ್ನು ಕಣ್ತುಂಬಿಕೊಳ್ಳಲು ಎಲ್ಲರೂ ಥಿಯೇಟರ್ ಗೆ ಧಾವಿಸಿ ಬರುತ್ತಿರುವುದು ಖಂಡಿತ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಮಗಳು ಧೃತಿ (Dhruti Puneeth Rajkumar) ಅವರು ಈಗ ವಿದೇಶದಲ್ಲಿ ಓದುತ್ತಿರುವ ಕಾರಣ ಅಲ್ಲಿಯೇ ಹೋಗಿ ಗಂಧದಗುಡಿ ಸಿನಿಮಾ ನೋಡಿ ಭಾವುಕರಾಗಿದ್ದಾರೆ. ಅಪ್ಪನನ್ನು ನೋಡಿ ಕಣ್ಣೀರು ಹಾಕಿರುವ ಧೃತಿ ಅವರು ಸೋಷಿಯಲ್ ಮೀಡಿಯಾದಲ್ಲಿ ಒಂದು ಭಾವನಾತ್ಮಕವಾದ ಪೋಸ್ಟ್ ಮಾಡಿದ್ದಾರೆ. ಅಪ್ಪು ಅವರು ಇಲ್ಲದೆ ಇರುವ ನೋವು ಇಡೀ ರಾಜ್ಯಕ್ಕಿದೆ, ಅಪ್ಪು ಅವರು ಇಲ್ಲದ ನೋವು ತಡೆಯಲಾಗದೆ, ಕೆಲವರು ಪ್ರಾಣ ಕಳೆದುಕೊಂಡಿರುವ ಘಟನೆಗಳು ಸಹ ನಡೆದಿದೆ. ನಮ್ಮ ರಾಜ್ಯದ ಜನರು ಮತ್ತು ಅಭಿಮಾನಿಗಳಿಗೆ ಅಪ್ಪು ಅವರು ಇಲ್ಲದೆ ನೋವಿಗೆ ಈ ರೀತಿ ಮಾಡುತ್ತಿರುವಾಗ, ಇನ್ನು ಮನೆಯವರಿಗೆ ಹೇಗೆ ಅನ್ನಿಸುತ್ತಿರುತ್ತದೆ ಯೋಚನೆ ಮಾಡುವುದು ಕೂಡ ಕಷ್ಟವೇ.. ಇದನ್ನು ಓದಿ.. Kannada Bigg boss: ಅದೊಂದು ಕಾರಣಕ್ಕೆ ಬಿಗ್ ಬಾಸ್ ಮನೆಯಲ್ಲಿ ಭಯ ಪಡ್ತಿದ್ರು ನೇಹಾ ಗೌಡ. ಯಾಕೆ ಅಂತೇ ಗೊತ್ತೇ??

AMP Ad3

ಅಪ್ಪು (Appu) ಅವರು ಇಡೀ ರಾಜ್ಯಕ್ಕೆ ಬೇಕಾದ ವ್ಯಕ್ತಿ ಆಗಿದ್ದರು. ಅಂತಹ ಒಬ್ಬರು ಇಂದು ನಮ್ಮೊಡನೆ ಇಲ್ಲ ಎಂದರೆ, ಅದು ಚಿತ್ರರಂಗಕ್ಕೆ ಮತ್ತು ಜನತೆಗೆ ಎಲ್ಲರಿಗೂ ಬೇಸರದ ವಿಚಾರವೇ. ಅಪ್ಪು ಅವರ ಮಕ್ಕಳಿಗೆ ತಂದೆಯ ಮೇಲೆ ಬಹಳ ಪ್ರೀತಿ ಮತ್ತು ಗೌರವ ಇದೆ, ಅದರಲ್ಲೂ ಧೃತಿ ಅವರು, ತಂದೆಯ ಮೇಲೆ ಬಹಳ ಗೌರವ ಇಟ್ಟುಕೊಂಡವರು, ಚಿಕ್ಕ ವಯಸ್ಸಿನಲ್ಲೇ ಅಪ್ಪನನ್ನು ಅನುಸರಿಸಿ, ನೇತ್ರದಾನ ಅಭಿಯಾನಕ್ಕೆ ಕೈಜೋಡಿಸಿ ಸಹಾಯ ಮಾಡಿದ್ದರು. ಅಪ್ಪನ ಸಹಾಯ ಪಡೆಯದೆ, ಸ್ಕಾಲರ್ಶಿಪ್ ಪಡೆದು, ವಿದೇಶಕ್ಕೆ ಹೋಗಿ ಓದುತ್ತಿದ್ದಾರೆ. ಓದಿನ ಕಾರಣದಿಂದ ತಂದೆಯ ಮೊದಲ ವರ್ಷದ ಪುಣ್ಯ ಕಾರ್ಯಕ್ಕೂ ಬರಲು ಸಾಧ್ಯವಾಗಿರಲಿಲ್ಲ ಧೃತಿ ಅವರು. ಹಾಗಾಗಿ ವಿದೇಶದಲ್ಲೇ ಗಂಧದಗುಡಿ ನೋಡಿ ಅಪ್ಪನ ನೆನೆದು ಭಾವನಾತ್ಮಕ ಪದಗಳನ್ನು ಬರೆದಿದ್ದಾರೆ. ಇದನ್ನು ಓದಿ.. ಆರೋಗ್ಯದ ಸಮಸ್ಯೆ ಎದುರಿಸುತ್ತಿರುವ ಸಮಂತಾ ರವರಿಗೆ ಅದರಿಂದ ಎಷ್ಟು ಕೋಟಿ ನಷ್ಟವಾಗುತ್ತಿದೆ ಎಂದು ತಿಳಿದರೆ ಬೆಚ್ಚಿ ಬೀಳ್ತಿರಾ.

Comments (0)
Add Comment