ಈತನೊಬ್ಬ ಸರಿಯಾಗಿ ಆಡಿದರೆ ಸಾಕು ದಿನೇಶ್, ಹಾರ್ಧಿಕ್ ಉಳಿದದ್ದು ನೋಡಿಕೊಳ್ಳುತ್ತಾರೆ, ಅದೇಗೆ ಅಂತೇ ಗೊತ್ತೇ?? ಸಂಜಯ್ ಹೇಳಿದೆನು ಗೊತ್ತೇ?

AMP Ads

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸೌತ್ ಆಫ್ರಿಕಾ ವಿರುದ್ಧದ ಟಿ-ಟ್ವೆಂಟಿ ಸರಣಿಯನ್ನು ಮುಗಿಸಿರುವ ಭಾರತೀಯ ಕ್ರಿಕೆಟ್ ತಂಡ ನಾಳೆಯಿಂದ ಪ್ರಾರಂಭವಾಗಲಿರುವ ಐರ್ಲೆಂಡ್ ವಿರುದ್ಧದ ಸರಣಿಯನ್ನು ಎದುರಿಸಲು ಸಿದ್ಧವಾಗಿ ನಿಂತಿದೆ. ಐರ್ಲೆಂಡ್ ಭಾರತೀಯ ಕ್ರಿಕೆಟ್ ತಂಡ ದಷ್ಟು ಬಲಿಷ್ಠವಾಗಿಲ್ಲದೆ ಇರಬಹುದು ಆದರೆ ಕಾಂಪಿಟೇಶನ್ ವಿಚಾರದಲ್ಲಿ ಎಂದು ಕೂಡ ಹಿಂದೆ ಬಿದ್ದಿಲ್ಲ. ಹೌದು ಗೆಳೆಯರೇ ಭಾರತೀಯ ಕ್ರಿಕೆಟ್ ತಂಡ ನಾಳೆಯಿಂದ ಪ್ರಾರಂಭವಾಗಲಿರುವ ಐರ್ಲೆಂಡ್ ವಿರುದ್ಧ ಟಿ-ಟ್ವೆಂಟಿ ಸರಣಿಯನ್ನು ಹಾರ್ದಿಕ್ ಪಾಂಡ್ಯ ರವರ ನಾಯಕತ್ವದಲ್ಲಿ ಎದುರಿಸಲಿದೆ.

ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯವನ್ನು ಆಗಬೇಕಾಗಿರುವ ಕಾರಣದಿಂದಾಗಿ ಅನುಭವಿ ಆಟಗಾರರು ಇಂಗ್ಲೆಂಡ್ನಲ್ಲಿ ಬೀಡುಬಿಟ್ಟಿದ್ದಾರೆ ಹಾಗೂ ಇವರ ಜೊತೆಗೆ ಮುಖ್ಯ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರು ಕೂಡ ಅಲ್ಲೇ ಇದ್ದಾರೆ. ಹೀಗಾಗಿ ಐರ್ಲೆಂಡ್ ವಿರುದ್ಧ ಭಾರತೀಯ ಕ್ರಿಕೆಟ್ ತಂಡವನ್ನು ಮಾಜಿ ಕ್ರಿಕೆಟರ್ ಆಗಿರುವ ವಿವಿಎಸ್ ಲಕ್ಷ್ಮಣ್ ರವರು ಕೋಚಿಂಗ್ ಮಾಡುತ್ತಿದ್ದಾರೆ. ಈ ತಂಡದ ಕುರಿತಂತೆ ಮಾತನಾಡಿರುವ ಮಾಜಿ ಕ್ರಿಕೆಟ್ ಹಾಗೂ ಕಾಮೆಂಟೇಟರ್ ಆಗಿರುವ ಸಂಜಯ್ ಮಾಂಜ್ರೇಕರ್ ರವರು ಕೆಲವೊಂದು ವಿಚಾರಗಳನ್ನು ಅಭಿ ವ್ಯಕ್ತಪಡಿಸಿದ್ದಾರೆ. ಹೌದು ಗೆಳೆಯರೇ ಅದೊಬ್ಬ ಆಟಗಾರರನ್ನು ತಂಡದಲ್ಲಿ ಹಾಕಿಕೊಂಡರೆ ಖಂಡಿತವಾಗಿ ಅತ್ಯುತ್ತಮವಾಗಿ ಆಟವಾಡಲಿದ್ದಾರೆ ಇದರಿಂದಾಗಿ ಹಾರ್ದಿಕ್ ಪಾಂಡ್ಯ ಹಾಗೂ ದಿನೇಶ್ ಕಾರ್ತಿಕ್ ರವರ ಕೆಲಸ ಸುಲಭವಾಗಿರಲಿದೆ ಎಂಬುದಾಗಿ ಹೇಳಿದ್ದಾರೆ.

AMP Ad3

ಹೌದು ಗೆಳೆಯರೇ ಆಲ್-ರೌಂಡರ್ ಆಟಗಾರ ಆಗಿರುವ ದೀಪಕ್ ಹೂಡ ರವರನ್ನು ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಹಾಕಿಕೊಂಡರೆ ಬೌಲಿಂಗ್ ಭಾಗದ ಜೊತೆಗೆ ಮಧ್ಯಮ ಕ್ರಮಾಂಕ ಅಥವಾ ಫಿನಿಶಿಂಗ್ ವಿಭಾಗದಲ್ಲಿಯೂ ಕೂಡ ದಿನೇಶ್ ಕಾರ್ತಿಕ್ ಹಾಗೂ ಹಾರ್ದಿಕ್ ಪಾಂಡ್ಯ ರವರಿಗೆ ಅವರು ಸಾಥ್ ನೀಡಲಿದ್ದಾರೆ ಎಂಬುದಾಗಿ ಸಂಜಯ್ ಮಂಜ್ರೇಕರ್ ಅವರು ಅಭಿಪ್ರಾಯಪಟ್ಟಿದ್ದಾರೆ. ಐಪಿಎಲ್ ನಲ್ಲಿ ಆಡಿರುವ ಅದ್ಭುತ ಪ್ರದರ್ಶನವನ್ನು ಇಲ್ಲಿ ಕೂಡ ತೋರ್ಪಡಿಸಿದರೆ ಟೀಮ್ ಇಂಡಿಯಾಗೆ ಅದು ತುಂಬಾನೇ ಲಾಭವನ್ನು ನೀಡಲಿದೆ ಎಂಬುದಾಗಿ ಹೇಳಿದ್ದಾರೆ.

Comments (0)
Add Comment