ಮಂಡ್ಯಗೆ ಮಗುವಿನ ನಾಮಕರಣ ಮುಗಿದ ಕೂಡಲೇ ಕಾಲಿಡಲು ಸಿದ್ಧವಾದ ನಿಖಿಲ್. ಮಾಡಲು ಹೊರಟಿರುವುದು ಏನು ಗೊತ್ತೆ??

AMP Ads

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈಗಾಗಲೇ ನಿಖಿಲ್ ಕುಮಾರ್ ಹಾಗೂ ರೇವತಿ ದಂಪತಿಗಳ ಏಕೈಕ ಪುತ್ರನ ನಾಮಕರಣ ಸಮಾರಂಭ ಈಗಾಗಲೇ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆದಿದೆ. ಹೌದು ಗೆಳೆಯರೇ ಬೆಂಗಳೂರಿನ ಜೆಪಿ ನಗರದಲ್ಲಿ ನಡೆದಿರುವ ಅದ್ಧೂರಿ ಕಾರ್ಯಕ್ರಮದಲ್ಲಿ ನಿಖಿಲ್ ಕುಮಾರ್ ಹಾಗೂ ರೇವತಿ ದಂಪತಿಗಳ ಮಗನಿಗೆ ಅವ್ಯಾನ್ ದೇವ್ ಎನ್ನುವ ಹೆಸರನ್ನು ಇಡಲಾಗಿದೆ.

ಈ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿತ್ತು. ಇನ್ನು ಈ ಕಾರ್ಯಕ್ರಮದಲ್ಲಿ ದೇವೇಗೌಡ ದಂಪತಿ ಗಳಿಗೆ ಕನಕಾಭಿಷೇಕ ವನ್ನು ಕೂಡ ಮಾಡಲಾಗಿತ್ತು. ಇನ್ನು ಈ ಸಂದರ್ಭದಲ್ಲಿ ಹಲವಾರು ಜನರಿಗೆ ಅದ್ದೂರಿಯಾಗಿ ಊಟೋಪಚಾರವನ್ನು ಕೂಡ ಮಾಡಲಾಗಿತ್ತು. ಆದರೆ ಈಗ ಕೇಳಿ ಬಂದಿರುವ ಸುದ್ದಿ ಪ್ರಕಾರ ಈ ಕಾರ್ಯಕ್ರಮಕ್ಕೆ ಕೇವಲ ಕುಟುಂಬಸ್ಥರು ಹಾಗೂ ಅತ್ಯಾಪ್ತ ಹಿತೈಷಿಗಳು ಮಾತ್ರ ಆಹ್ವಾನಿತರಾಗಿದ್ದರು ಎಂಬುದಾಗಿ ತಿಳಿದುಬಂದಿದೆ. ಇತ್ತೀಚಿಗಷ್ಟೇ ಕೇಳಿಬಂದಿರುವ ಸುದ್ದಿಯ ಪ್ರಕಾರ ನಿಖಿಲ್ ಕುಮಾರ್ ಅವರು ತಮ್ಮ ಕ್ಷೇತ್ರವಾಗಿರುವ ಮಂಡ್ಯಗೆ ತಮ್ಮ ಪತ್ನಿ ರೇವತಿ ಹಾಗೂ ಮಗನ ಜೊತೆಗೆ ಆಗಮಿಸಲಿದ್ದಾರೆ ಎಂಬುದಾಗಿ ಕೇಳಿಬಂದಿದೆ. ಯಾವ ಕಾರಣಕ್ಕಾಗಿ ಎಂಬುದಾಗಿ ನೀವು ಯೋಚಿಸುತ್ತಿರಬಹುದು ಬನ್ನಿ ಅದಕ್ಕೂ ಕೂಡ ನಮ್ಮ ಬಳಿ ಉತ್ತರವಿದೆ.

AMP Ad3

ಹೌದು ಗೆಳೆಯರೇ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಯಾರಿಗೂ ಕೂಡ ಆಹ್ವಾನ ನೀಡಿರಲಿಲ್ಲ. ಇದೇ ಕಾರಣಕ್ಕಾಗಿ ಮಂಡ್ಯದ ಜನತೆಗೆ ಮಗನ ನಾಮಕರಣದ ಸಲುವಾಗಿ ದೊಡ್ಡಮಟ್ಟದ ಅವತಾರ ಕೂಟವನ್ನು ಏರ್ಪಡಿಸುವ ಹಿನ್ನೆಲೆಯಲ್ಲಿ ಮಂಡ್ಯಗೆ ನಿಖಿಲ್ ಕುಮಾರ್ ದಂಪತಿಗಳು ಆಗಮಿಸಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಮಂಡ್ಯಗೆ ಆಗಮಿಸಿ ಮಗನ ನಾಮಕರಣ ಹಿನ್ನೆಲೆಯಲ್ಲಿ ಜನರಿಗೆ ಔತಣಕೂಟವನ್ನು ಏರ್ಪಡಿಸುವ ಕಾರ್ಯಕ್ರಮವನ್ನು ನಿಖಿಲ್ ಕುಮಾರ್ ದಂಪತಿಗಳು ಆಯೋಜಿಸಿದ್ದಾರೆ ಎಂಬುದಾಗಿ ಮಾಹಿತಿಗಳು ಸಿಕ್ಕಿವೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments (0)
Add Comment