ಬಿಗ್ ನ್ಯೂಸ್: ಬಲಿಷ್ಠವಾಗಿರುವ ಆರ್ಸಿಬಿ ಗೆ ಮುಂದಿದೆ ಮತ್ತಷ್ಟು ಬಲ, ಈ ಬಲ ಬಂದಾಗ ಆರ್ಸಿಬಿ ಕಟ್ಟಿಹಾಲು ಸಾಧ್ಯವೇ ಇಲ್ಲ. ಏನು ಗೊತ್ತೇ??

AMP Ads

ನಮಸ್ಕಾರ ಸ್ನೇಹಿತರೇ ಈ ಬಾರಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರದರ್ಶನ ಎನ್ನುವುದು ಸಾಕಷ್ಟು ಏರಿಳಿತಗಳಿಂದ ಕೂಡಿದೆ ಎಂದರೆ ತಪ್ಪಾಗಲಾರದು. ತೆಲುಗು ಮೇ ಆರ್ಸಿಬಿ ಅಭಿಮಾನಿಗಳು ಗೆದ್ದ ಖುಷಿಯನ್ನು ಅನುಭವಿಸುತ್ತಿದ್ದರೆ ಇನ್ನು ಕೆಲವೊಮ್ಮೆ ಸೋತ ದುಃಖವನ್ನು ಕೂಡ ಅನುಭವಿಸುತ್ತಿದ್ದಾರೆ. ಆದರೆ ಇವೆಲ್ಲಕ್ಕಿಂತ ಹೆಚ್ಚಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ಈಗ ಬೇಸರದ ವಿಷಯವಾಗಿರುವುದು ವಿರಾಟ್ ಕೊಹ್ಲಿ ರವರ ಕಳಪೆ ಫಾರ್ಮ್ ಎಂದರೆ ತಪ್ಪಾಗಲಾರದು. ಹೌದು ಗೆಳೆಯರೇ ಈ ಟೂರ್ನಿಯ ಆರಂಭದಿಂದಲೂ ಕೂಡ ವಿರಾಟ್ ಕೊಹ್ಲಿ ರವರು ಸಾಕಷ್ಟು ಬ್ಯಾಟಿಂಗ್ ವೈಫಲ್ಯವನ್ನು ಎದುರಿಸಿದ್ದಾರೆ.

ಕಳೆದ ಬಾರಿ ತಂಡದ ಕಪ್ತಾನ ಆಗಿದ್ದ ಕಾರಣದಿಂದಾಗಿ ಆ ಜವಾಬ್ದಾರಿಯಿಂದ ಅವರಿಗೆ ಫ್ಲೆಕ್ಸಿಬಲ್ ಆಗಿ ಬ್ಯಾಟಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ ಎಂಬುದಾಗಿ ಎಲ್ಲರೂ ಅಂದುಕೊಂಡಿದ್ದರು. ಹೀಗಾಗಿ ಈ ಬಾರಿ ತಂಡದ ಕಪ್ತಾನ ಸ್ಥಾನದಿಂದ ಕೆಳಗಿಳಿದು ಕೇವಲ ಬ್ಯಾಟ್ಸ್ ಮನ್ ಆಗಿ ಕಾಣಿಸಿಕೊಂಡರು ಕೂಡ ಅವರು ಕಳಪೆ ಫಾರ್ಮ್ ನಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಇದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಕೊರತೆಗಳಲ್ಲಿ ಒಂದಾಗಿ ಕಾಣಿಸಿಕೊಂಡಿದೆ. ಇನ್ನು ಇದರ ಕುರಿತಂತೆ ಆರ್ಸಿಬಿ ಕಾರ್ಯಕ್ರಮದಲ್ಲಿ ಕೂಡ ವಿರಾಟ್ ಕೊಹ್ಲಿ ಅವರು ಮಾತನಾಡಿದ್ದಾರೆ. ಆದರೆ ಈ ಸಂದರ್ಭದಲ್ಲಿ ಅವರೇ ಒಂದು ಗುಡ್ ನ್ಯೂಸ್ ಒಂದನ್ನು ಹೇಳಿದ್ದಾರೆ.

AMP Ad3

ಹೌದು ಗೆಳೆಯರೇ ಇದಕ್ಕೂ ಮುನ್ನ ಪ್ರತಿ ಸೀಸನ್ ನಲ್ಲಿ ಕೂಡ ಆರ್ಸಿಬಿ ತಂಡದ ಆಪದ್ಬಾಂಧವ ನಾಗಿಯೇ ಎಬಿ ಡಿವಿಲಿಯರ್ಸ್ ರವರು ಕಾಣಿಸಿಕೊಂಡಿದ್ದಾರೆ. ಆದರೆ ಈ ಸೀಸನ್ ನಲ್ಲಿ ಅವರು ವೈಯಕ್ತಿಕ ಕಾರಣಗಳಿಂದಾಗಿ ಭಾಗವಹಿಸಿರಲಿಲ್ಲ. ಆದರೆ ವಿರಾಟ್ ಕೊಹ್ಲಿ ಅವರು ಹೇಳುವ ಪ್ರಕಾರ ಮುಂದಿನ ಸೀಸನ್ನಲ್ಲಿ ಅವರು ಆರ್ಸಿಬಿ ಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಹೊಸ ಸ್ಥಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದಾಗಿ ವಿರಾಟ್ ಕೊಹ್ಲಿ ಅವರು ಪರೋಕ್ಷವಾಗಿ ಹೇಳಿದ್ದಾರೆ. ಆರ್ಸಿಬಿ ಎಲ್ಲಿ ಆಟಗಾರನಾಗಿ ಕಾಣಿಸಿಕೊಳ್ಳುವುದು ಅನುಮಾನ ಎಂದು ಹೇಳಬಹುದಾಗಿದೆ ಆದರೂ ಕೂಡ ಅವರು ಆರ್ಸಿಬಿ ಭಾಗವಾಗಿ ಮುಂದಿನ ಸೀಸನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಅಭಿಮಾನಿಗಳಿಗೆ ಸಂತೋಷವನ್ನು ನೀಡಬಹುದಾಗಿದೆ.

Comments (0)
Add Comment