ಸಲ್ಮಾನ್, ಹೃತಿಕ್ ಬಂದರೂ ಕೂಡ ಶಾರುಖ್ ಖಾನ್ ಗೆ ಶಾಕ್ ನೀಡಿದ ದೇಶ ಭಕ್ತರು ! ಇದಕ್ಕೆ ನಿಮ್ಮ ಬೆಂಬಲವಿದೆಯೇ?

AMP Ads

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಒಂದು ಕಾಲದಲ್ಲಿ ಯಾವ ರೀತಿಯ ಸಿನಿಮಾ ಮಾಡಿದರೂ ಬಾಕ್ಸಾಫೀಸಲ್ಲಿ ಭಾರಿ ಸದ್ದು ಮಾಡುತ್ತಿದ್ದವು ಎಂಬುದು ನಿಮಗೆಲ್ಲರಿಗೂ ತಿಳಿದಿದೆ. ಬರೋಬ್ಬರಿ 27 ವರ್ಷಗಳಿಂದ ಸಿನಿಮಾರಂಗದಲ್ಲಿ ಬಾರಿ ಅಭಿಮಾನಿ ಬಳಗವನ್ನು ಹೊಂದಿದ್ದ ಶಾರುಖ್ ಖಾನ್ ರವರು ಒಮ್ಮೆಲೆ ಒಂದೇ ಒಂದು ಹೇಳಿಕೆಯಿಂದ ದೇಶಭಕ್ತರ ಕೆಂಗಣ್ಣಿಗೆ ಗುರಿಯಾದರು. ತದನಂತರ ನಡೆದದ್ದೆಲ್ಲವೂ ಶಾರುಖ್ ಖಾನ್ ರವರಿಗೆ ಬುದ್ದಿ ಕಲಿಸುವ ನಡೆ ಗಳಾಗಿವೆ. ಹೌದು ದೇಶದ ಕುರಿತು ನೀಡಿದ ಕೆಲವೊಂದು ಹೇಳಿಕೆಗಳಿಂದಾಗಿ ನೆಟ್ಟಿಗರು ಶಾರುಖ್ ಖಾನ್ ಸಿನಿಮಾಗಳನ್ನು ನೋಡದಂತೆ ಅಭಿಯಾನಗಳನ್ನು ಆರಂಭಿಸಿ ಹಲವಾರು ಸಿನಿಮಾಗಳನ್ನು ಸೋಲಿಸಿದ್ದಾರೆ.

AMP Ad3

ಬಾಲಿವುಡ್ ನಲ್ಲಿ ತಾನೇ ರಾಜ ಎಂದು ಮೆರೆಯುತ್ತಿದ್ದ ಶಾರುಖ್ ಖಾನ್ 2015ರಲ್ಲಿ ತಮ್ಮದೇ ಆದ ಅವನತಿಯನ್ನು ತಾವೇ ಬರೆದುಕೊಂಡರು, ಎಲ್ಲವೂ ಸರಿ ಇದೆ ಎನ್ನುವಷ್ಟರಲ್ಲಿ ಇಂಡಿಯಾ ಟುಡೇ ಚಾನಲ್ ಗೆ ನೀಡಿದ ಸಂದರ್ಶನದಲ್ಲಿ ಶಾರುಖ್ ಖಾನ್ ಅವರು ಹೇಳಿದ ಒಂದು ಮಾತು ಅವರ ಜೀವನವನ್ನು ಅಲ್ಲೋಲ ಕಲ್ಲೋಲ ಮಾಡಿತು, ಯಾಕೆಂದರೆ ಆ ಸಂದರ್ಶನದಲ್ಲಿ ಶಾರುಖ್ ಖಾನ್ ರವರು ದೇಶದ ವಿ’ರುದ್ಧ ಒಂದು ಹೇಳಿಕೆ ನೀಡಿದ್ದರು. ದೇಶದಲ್ಲಿ ಅ’ಸ’ಹಿಷ್ಣುತೆ ಇದೆಯೇ ಎಂದು ಪ್ರಶ್ನಿಸಿದಾಗ ಹೌದು ದೇಶದಲ್ಲಿ ಅ’ಸ’ಹಿಷ್ಣುತೆ ಹೆಚ್ಚಾಗಿದೆ ಜನರು ದಿನೇದಿನೇ ಅ’ಸ’ಹಿಷ್ಣುತೆ ಕಡೆಗೆ ವಾಲುತ್ತಿದ್ದಾರೆ. ನಾವು ಆಧುನಿಕ ಭಾರತದ ಬಗ್ಗೆ ಮಾತನಾಡುತ್ತಿದ್ದೇವೆ ಆದರೆ ದೇಶದಲ್ಲಿ ಹಲವಾರು ಜನರು ಇನ್ನೂ ಜಾ’ತ್ಯತೀತ ದೇಶವಲ್ಲ ಎಂದು ನಂಬುತ್ತಿದ್ದಾರೆ. 

ಯುವಕರು ಧಾರ್ಮಿಕ ಅ’ಸ’ಹಿಷ್ಣುತೆ ಇಂದ ದೂರವಿರಬೇಕು ಎಂದು ಹೇಳಿದರು. ಅತ್ಯಂತ ಸ’ಹಿಷ್ಣು ಮತ್ತು ಶಾಂತಿಪ್ರಿಯ ಭಾರತದಲ್ಲಿ ಈ ರೀತಿಯ ಹೇಳಿಕೆಗಳನ್ನು ನೀಡುವ ಮೂಲಕ ಎಲ್ಲರ ಕೆಂಗಣ್ಣಿಗೆ ಶಾರುಖ್ ಖಾನ್ ಗುರಿಯಾಗಿದ್ದರು. ಇವರು ಹೇಳಿಕೆ ನೀಡಿದ ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆ’ಕ್ರೋಶ ಕೇಳಿ ಬಂದಿತ್ತು, ಎಲ್ಲಾ ದೇಶಭಕ್ತರು ಒಮ್ಮೆಲೆ ಶಾರುಖ್ ಖಾನ್ ರವರ ವಿ’ರುದ್ಧ ಮು’ಗಿಬಿ’ದ್ದಿದ್ದರು ಅವರ ಸಿನಿಮಾಗಳನ್ನು ಬಹಿಷ್ಕರಿಸುವಂತೆ ಅಭಿಯಾನಗಳನ್ನು ಆರಂಭಿಸಿದರು, ಅಷ್ಟು ದಿವಸ ಬಾಲಿವುಡ್ ಹೀರೋ ಆಗಿ ಮೆರೆದಿದ್ದ ಶಾರುಖ್ ಖಾನ್ ರವರು ತದನಂತರ ಎಲ್ಲರ ಕಣ್ಣಲ್ಲಿ ವಿಲನ್ ಆದರು.

ಈ ಅಭಿಯಾನಗಳ ಫಲದಿಂದಾಗಿ ಶಾರುಖ್ ಖಾನ್ ರವರ ಸಿನಿಮಾಗಳು ಕ್ರಮೇಣ ಸೋಲಲು ಆರಂಭಿಸಿದವು, ಯಾರು ಯಾವ ಸಿನಿಮಾ ನಿರ್ಮಾಣ ಮಾಡಿದ್ದಾರೆ ಎಂಬುದನ್ನು ನೋಡದ ನೆಟ್ಟಿಗರು ಶಾರುಖ್ ಖಾನ್ ಸಿನಿಮಾ ಎಂದ ತಕ್ಷಣ ಸಿನಿಮಾ ನೋಡದೇ ತಿ’ರುಗೇ’ಟು ನೀಡಿದರು, ಇದರಿಂದ ಕ್ರಮೇಣ ಶಾರುಖ್ ಖಾನ್ ರವರ ಮಾರ್ಕೆಟ್ ಕಡಿಮೆಯಾಗುತ್ತಾ ಬಂತು.

AMP Ads4

ಹಲವಾರು ಸಿನಿಮಾಗಳು ಬಾಕ್ಸಾಫೀಸ್ ನಲ್ಲಿ ಸದ್ದು ಮಾಡಲು ಸಂಪೂರ್ಣವಾಗಿ ವಿಫಲವಾದವು, ಅದರಲ್ಲಿಯೂ 2018ರಲ್ಲಿ ಬಿಡುಗಡೆಯಾಗಿದ್ದ ಜೀರೋ ಸಿನಿಮಾ ಭಾರಿ ನಿರೀಕ್ಷೆ ಮೂಡಿಸಿದ್ದರೂ ಕೂಡ ನೆಟ್ಟಿಗರ ಅಭಿಯಾನದ ಮುಂದೆ ತಲೆಬಾಗಿತ್ತು. ಇದು ಒಮ್ಮೆಲೆ ಶಾರುಖ್ ಖಾನ್ ರವರ ಜೀವನವನ್ನು ಯು ಟರ್ನು ತೆಗೆದುಕೊಳ್ಳುವಂತೆ ಮಾಡಿದ್ದು, ಬೇರೆ ವಿಧಿ ಇಲ್ಲದೆ ಶಾರುಖ್ ಖಾನ್ ರವರು ಮುಂದೆ ಯಾವುದೇ ಸಿನಿಮಾಗಳಿಗೂ ಸಹಿ ಹಾಕಿರಲಿಲ್ಲ. ಆದರೆ ಇದೀಗ ಜನರು ಮರೆತಿರಬಹುದು ಎಂದುಕೊಂಡು ಬಹುಶಃ ಶಾರುಖ್ ಖಾನ್ ರವರು ಮತ್ತೊಮ್ಮೆ ಸಿನಿಮಾ ಮಾಡಲು ಸಹಿ ಹಾಕಿದ್ದಾರೆ.

ಸಿನಿಮಾವನ್ನು ಹೇಗಾದರೂ ಮಾಡಿ ಗೆಲ್ಲಿಸಬೇಕು ಎಂಬುವ ಕಾರಣಕ್ಕೆ ಕೇವಲ ಶಾರುಖ್ ಖಾನ್ ಮಾತ್ರವಲ್ಲದೆ ಸಲ್ಮಾನ್ ಖಾನ್ ಮತ್ತು ಹೃತಿಕ್ ರೋಷನ್ ಕೂಡ ಪಾತ್ರಗಳಿಗೆ ಬಣ್ಣ ಹಚ್ಚಲಿದ್ದಾರೆ ಎಂಬುದು ತಿಳಿದುಬಂದಿದೆ, ಈ ಸುದ್ದಿ ಕೇಳಿದ ತಕ್ಷಣ ನೆಟ್ಟಿಗರು ಮತ್ತಷ್ಟು ಗರಂ ಆಗಿದ್ದು ಇಷ್ಟು ದಿವಸ ನಿಮ್ಮ ಸಿನಿಮಾ ಗೆಲ್ಲಲು ಬಿಡಲಿಲ್ಲ ಇನ್ನೂ ಸ್ವಜನಪಕ್ಷಪಾತದ ಮತ್ತೊಂದು ಮುಖವಾಗಿರುವ ಸಲ್ಮಾನ್ ಖಾನ್ ರವರು ಬಂದರೆ ಥಿಯೇಟರ್ ಗಳಿಗೆ ಬರುತ್ತಿರುವ ಜನ ಮತ್ತಷ್ಟು ಕಡಿಮೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ನಾವು ನಿಮ್ಮ ಮಾತನ್ನು ಮರೆತಿದ್ದೇವೆ ಎಂದುಕೊಳ್ಳಬೇಡಿ ಐದು ವರ್ಷದ ಹಿಂದೆ ನೀಡಿದ ಹೇಳಿಕೆ ನೆನಪಿನಲ್ಲಿದೆ ಖಂಡಿತ ಪಠಾಣ್ ಚಿತ್ರವನ್ನು ಸೋಲಿಸಬೇಕು ಸುಮ್ಮನಿರುವುದಿಲ್ಲ ಎಂದಿದ್ದಾರೆ. ಇನ್ನು ಇವರ ಜೊತೆಗೆ ಸುಶಾಂತ್ ಸಿಂಗ್ ಅಭಿಮಾನಿಗಳು ಕೂಡ ಕೈಜೋಡಿಸಿದ್ದು ಶಾರುಖ್ ಖಾನ್ ರವರಿಗೆ ಮತ್ತೊಂದು ಶಾಕ್ ಎದುರಾಗಿದೆ

Comments (0)
Add Comment