ಬಾಲಿವುಡ್ ಗೆ ಹಾರಿದ ತಕ್ಷಣ ವರಸೆ ಬದಲಾಯಿಸಿದ ರಶ್ಮಿಕಾ, ವಿಜಯ್ ನನ್ನ ಇಷ್ಟದ ನಟ ಅಲ್ಲಾ ಎಂದಿದ್ದು ಯಾಕೆ ಗೊತ್ತೇ?
ನಮಸ್ಕಾರ ಸ್ನೇಹಿತರೇ ರಕ್ಷಿತ್ ಶೆಟ್ಟಿ ರವರ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ನಟಿಸಿದ ನಂತರ ರಶ್ಮಿಕ ಮಂದಣ್ಣ ನವರು ಇದುವರೆಗೆ ಹಿಂದಿರುಗಿ ನೋಡಿದ್ದೇ ಇಲ್ಲ. ಅವರು ನಟಿಸಿರುವ ಎಲ್ಲಾ ಸಿನಿಮಾಗಳು ಕೂಡ ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡಮಟ್ಟದ ಸೌಂಡ್ ಮಾಡಿದೆ. ದೇಶದಾದ್ಯಂತ ಇವರನ್ನು ಪಂಚಭಾಷೆ ತಾರೆ ನ್ಯಾಷನಲ್ ಕೃಷ್ ಸ್ಟಾರ್ ಹೀರೋಯಿನ್ ಲೇಡಿ ಸೂಪರ್ ಸ್ಟಾರ್ ಎಂಬುದಾಗಿ ಕರೆಯುತ್ತಾರೆ. ಆದರೆ ಕರ್ನಾಟಕ ದಲ್ಲಿ ಮಾತ್ರ ಯಾಕೋ ಇವರನ್ನು ಇಷ್ಟಪಡುವರು ಸಂಖ್ಯೆ ಕಡಿಮೆ.
ಇಷ್ಟ ಪಡುವುದಕ್ಕಿಂತ ಇವರನ್ನು ಸೋಶಿಯಲ್ ಮೀಡಿಯಾದಲ್ಲಿ ಟೀಕೆ ಮಾಡುವವರು ಜಾಸ್ತಿ ಎಂದು ಹೇಳಬಹುದಾಗಿದೆ. ಇದಕ್ಕೆ ಇವರು ಕನ್ನಡವನ್ನು ಹಾಗೂ ಕರ್ನಾಟಕವನ್ನು ತಿರಸ್ಕಾರ ಭಾವದಿಂದ ಕಾಣುವುದು ಕೂಡ ಪ್ರಮುಖ ಕಾರಣವಾಗಿದೆ. ಇನ್ನು ನಿಮಗೆಲ್ಲ ಗೊತ್ತಿರುವಂತೆ ರಕ್ಷಿತ್ ಶೆಟ್ಟಿ ರವರ ನಂತರ ರಶ್ಮಿಕ ಮಂದಣ್ಣ ನವರು ವಿಜಯ್ ದೇವರಕೊಂಡ ರವರನ್ನು ಮದುವೆಯಾಗುತ್ತಾರೆ ಎಂಬುದಾಗಿ ಗಾಳಿಸುದ್ದಿ ಹರಡುತ್ತಿತ್ತು. ಈ ಕುರಿತಂತೆ ಪ್ರತಿಕ್ರಿಯಿಸಿದ ವಿಜಯ್ ದೇವರಕೊಂಡ ರವರು ಕೂಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಸುದ್ದಿ ನಾನ್ಸೆನ್ಸ್ ನಾನು ಕೂಡ ಇಂತಹ ಗಾಳಿಸುದ್ದಿಗಳನ್ನು ಎಂಜಾಯ್ ಮಾಡುತ್ತಿದ್ದೇನೆ ಎಂಬುದಾಗಿ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದರು.

ಇನ್ನು ಇತ್ತೀಚಿಗಷ್ಟೇ ಕಾರ್ಯಕ್ರಮವೊಂದರಲ್ಲಿ ತಮ್ಮ ನೆಚ್ಚಿನ ನಟ ಯಾರು ಎನ್ನುವುದನ್ನು ರಶ್ಮಿಕ ಮಂದಣ್ಣ ಹೇಳಿಕೊಂಡಿದ್ದಾರೆ. ಎಲ್ಲರೂ ಈ ಸಾಲಿನಲ್ಲಿ ವಿಜಯ್ ದೇವರಕೊಂಡ ಕಾಣಿಸುತ್ತಾರೆ ಎಂಬುದಾಗಿ ಎಂದುಕೊಂಡಿದ್ದರು ಆದರೆ ಅವರಿಗೆ ಅಲ್ಲಿ ಆಶ್ಚರ್ಯ ಕಾದಿತ್ತು. ಇದೇ ಮಾರ್ಚ್ 4ರಂದು ಬಿಡುಗಡೆಯಾಗಲಿರುವ ಅಡವಾಳ್ಳು ಮೀಕು ಜೋಹಾರ್ಲು ಸಿನಿಮಾದ ಕಾರ್ಯಕ್ರಮದಲ್ಲಿ ಚಿತ್ರದ ನಾಯಕನಾಗಿರುವ ಶರ್ವಾನಂದ ನನ್ನ ನೆಚ್ಚಿನ ಕೋ ಸ್ಟಾರ್, ಅವರಿಗೆ ನಾನು ಸಾಕಷ್ಟು ಕಿರಿಕಿರಿ ಮಾಡಿದ್ದೇನೆ ಆದರೂ ಕೂಡ ಅವರು ಎಲ್ಲವನ್ನೂ ಸಹಿಸಿಕೊಂಡಿದ್ದಾರೆ ಅವರು ಸ್ವೀಟೆಸ್ಟ್ ಎಂಬುದಾಗಿ ರಶ್ಮಿಕ ಮಂದಣ್ಣ ನವರು ಅವರನ್ನು ಹೊಗಳಿದ್ದಾರೆ. ಈ ಹೇಳಿಕೆ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.