ಡಾಕ್ಟರ್ ರಮಣ್ ಗೆ ಮತ್ತಷ್ಟು ಸಂಕಷ್ಟ, ಪುನೀತ್ ಎದೆನೋವು ಎಂದು ಹೋದಾಗ ಡಾಕ್ಟರ್ ಮಾಡಿದ್ದೇನು ಗೊತ್ತೇ?? ಮತ್ತಷ್ಟು ಅನುಮಾನ.

0

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಕಾಲಿಕ ನಿಧನಕ್ಕೆ ಈಗಾಗಲೇ ಹಲವಾರು ಕಡೆಗಳಿಂದ ಸಂತಾಪದ ಸುರಿಮಳೆ ಹರಿದುಬಂದಿತ್ತು. ಭಾರತೀಯ ಚಿತ್ರರಂಗದ ಹಲವಾರು ಗಣ್ಯರು ಗಣ್ಯರು ಪುನೀತ್ ರಾಜಕುಮಾರ್ ಅವರ ಸಮಾಧಿಗೆ ಬಂದು ಈಗಾಗಲೇ ನಮನಗಳನ್ನು ಸಲ್ಲಿಸಿ ಹೋಗಿದ್ದಾರೆ. ಇದೆಲ್ಲದರ ನಡುವೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ಪುನೀತ್ ರಾಜಕುಮಾರ್ ಅವರ ಫ್ಯಾಮಿಲಿ ಡಾಕ್ಟರ್ ಆಗಿರುವ ರಮಣ್ ರಾವ್ ರವರ ವಿರುದ್ಧ ತನಿಖೆ ನಡೆಯಬೇಕೆಂಬ ಪಟ್ಟನ್ನು ಹಿಡಿದಿದ್ದಾರೆ.

ಹೌದು ಗೆಳೆಯರೇ ಅಷ್ಟೊಂದು ಆರೋಗ್ಯವಂತರಾಗಿದ್ದ ಅಂತಹ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಿಧನರಾಗಲು ಹೇಗೆ ಸಾಧ್ಯ ಎಂಬುದು ಅವರ ಅನುಮಾನವಾಗಿದೆ. ಅಪ್ಪು ಮನೆಯಿಂದ ಹೊರಡಬೇಕಾದರೆ ಕೂಡ ಚೆನ್ನಾಗಿಯೇ ಇದ್ದರು, ರಮಣ್ ರಾವ್ ರವರ ಕ್ಲಿನಿಕ್ ಗೆ ಹೋದಾಗಲೂ ಕೂಡ ಚೆನ್ನಾಗಿದ್ದರೂ, ಆದರೆ ಅಲ್ಲಿಂದ ವಿಕ್ರಮ್ ಆಸ್ಪತ್ರೆಗೆ ಹೋಗುವ ದಾರಿಯ ಮಧ್ಯದಲ್ಲಿ ಏಳು ನಿಮಿಷಗಳ ಅಂತರದಲ್ಲಿ ಪ್ರಾಣಪಕ್ಷಿ ಹಾರಿಹೋಗುತ್ತದೆ ಎಂದರೆ ಅದಕ್ಕೆ ಕಾರಣ ಏನು ಎಂಬುದನ್ನು ಅಭಿಮಾನಿಗಳು ಸಿಬಿಐ ತನಿಖೆಗೆ ಆಗ್ರಹ ಮಾಡಿದ್ದಾರೆ. ಅಪ್ಪು ಅವರಿಗೆ ರಮಣ್ ರಾವ್ ರವರು ಮಾಡಿರುವ ಚಿಕಿತ್ಸೆಯೇನು, ಅಲ್ಲಿನ ಸಿಸಿಟಿವಿ ಫೂಟೇಜ್ ತೋರಿಸಿ ಹೀಗೆ ಹಲವಾರು ಪ್ರಶ್ನೆಗಳನ್ನು ಎಸೆದಿದ್ದಾರೆ.

ಈಗಾಗಲೇ ಬೆಂಗಳೂರಿನಲ್ಲಿ ಪ್ರತಿಭಟನೆ ಕೂಡ ಮಾಡಲಾಗಿದೆ. ಹತ್ತಿರದಲ್ಲಿ ರಾಮಯ್ಯ ಆಸ್ಪತ್ರೆ ಇದ್ದರೂ ಕೂಡ ವಿಕ್ರಮ್ ಆಸ್ಪತ್ರೆಗೆ ತನ್ನ ಮಗ ಕೆಲಸ ಮಾಡುತ್ತಿದ್ದಾರೆ ಎಂಬ ಕಾರಣಕ್ಕಾಗಿ ಬಿಜಿನೆಸ್ ಅಲ್ಲಿಗೆ ಕಳುಹಿಸಿದರು ಎಂಬುದಾಗಿ ಕೂಡ ಅಭಿಮಾನಿಗಳು ದೂರನ್ನು ನೀಡುತ್ತಿದ್ದಾರೆ. ಈ ಕುರಿತಂತೆ ಈಗಾಗಲೇ ನಿನ್ನೆಯಷ್ಟೇ ಅಪ್ಪು ಮನೆಗೆ ಭೇಟಿ ನೀಡಿರುವ ಸಿಎಂ ಬೊಮ್ಮಾಯಿ ಅಶ್ವಿನಿ ಅವರೊಂದಿಗೆ ಸಾಕಷ್ಟು ಚರ್ಚೆ ನಡೆಸಿದ್ದಾರೆ. ಇನ್ನು ಅವರೇ ಹೇಳಿರುವಂತೆ ಈ ಕುರಿತಂತೆ ಕುಟುಂಬದ ಸದಸ್ಯರು ತಲೆಕೆಡಿಸಿಕೊಂಡಿಲ್ಲ. ನವೆಂಬರ್ 16ರ ಕಾರ್ಯಕ್ರಮದ ನಂತರ ಈ ಕುರಿತಂತೆ ಸಮಗ್ರವಾಗಿ ಚರ್ಚೆ ನಡೆಸಿ ನಿರ್ಧಾರಕ್ಕೆ ಬರಲಿದ್ದೇವೆ ಎಂಬುದಾಗಿ ಹೇಳಿದ್ದಾರೆ. ಇದರಲ್ಲಿ ವೈದ್ಯರ ತಪ್ಪು ಇತ್ತ ಇಲ್ಲವಾ ನಿಮ್ಮ ಅನಿಸಿಕೆಗಳೇನು ಎಂಬುದನ್ನ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Get real time updates directly on you device, subscribe now.