ಹಿರಿಯ ನಟ ಅವಿನಾಶ್ ರವರಿಗೆ ಕರೆ ಮಾಡಿ ಫುಲ್ ಗರಂ ಆಗಿ ಕೋಪದಿಂದ ಮಾತಾಡಿದ್ದ ಡಿ ಬಾಸ್, ತೆರೆಮರೆಯ ವಿಷಯ ಕೊನೆಗೂ ಬಯಲು.
ನಮಸ್ಕಾರ ಸ್ನೇಹಿತರೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಎಂತಹ ಚಿನ್ನದ ವ್ಯಕ್ತಿತ್ವವನ್ನು ಉಳ್ಳವರು ಎಂಬುದು ನಿಮಗೆಲ್ಲಾ ಗೊತ್ತಿರುವ ವಿಷಯವಾಗಿದೆ. ಕೇವಲ ಪರದೆಯ ಮೇಲೆ ಮಾತ್ರವಲ್ಲದೆ ನಿಜಜೀವನದಲ್ಲೂ ಕೂಡ ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಸಹೃದಯಿ ದರ್ಶನ್ ರವರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತನ್ನ ಸಿನಿಮಾ ಜರ್ನಿ ಗೂ ಕೂಡ ತಮ್ಮ ತಂದೆಯ ಹೆಸರನ್ನು ಬಳಸಿಕೊಳ್ಳದೆ ಸ್ವಂತ ಪರಿಶ್ರಮ ಹಾಗೂ ಪ್ರತಿಭೆಯ ಮೂಲಕ ಬಂದವರು.

ಇನ್ನು ಇದಕ್ಕಾಗಿ ಅಭಿಮಾನಿಗಳು ಅವರನ್ನು ಡಿ ಬಾಸ್ ಎಂಬುದಾಗಿ ಕರೆಯುತ್ತಾರೆ. ಇನ್ನು ಬಾಕ್ಸ್ ಆಫೀಸ್ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಸಿನಿಮಾಗಳು ಪ್ರತಿ ಬಾರಿಯೂ ಕೂಡ ದಾಖಲೆಯನ್ನು ನಿರ್ಮಿಸುವುದರಲ್ಲಿ ತಪ್ಪುವುದಿಲ್ಲ. ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಕೇವಲ ಸಿನಿಮಾದಲ್ಲಿ ನಾಯಕರಾಗಿ ಮಾತ್ರವಲ್ಲದೆ ನಿಜಜೀವನದಲ್ಲಿ ಕೂಡ ಅವರ ಮನೆಗೆ ಕಷ್ಟ ಎಂದು ಬಂದವರಿಗೆ ಬರಿಗೈಯಲ್ಲಿ ಕಳಿಸದೆ ಏನನ್ನಾದರೂ ಕೂಡ ಸಹಾಯ ಮಾಡಿಯೇ ಮಾಡುತ್ತಾರೆ. ಇನ್ನು ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟರಾಗಿರುವ ಅವಿನಾಶ್ ರವರು ಕೂಡ ಇತ್ತೀಚಿಗೆ ಚಿತ್ರವೊಂದರ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಾರೆ.
ಹೌದು ಸ್ನೇಹಿತರೆ ಒಮ್ಮೆ ದರ್ಶನ್ ರವರು ಅವಿನಾಶ್ ರವರಿಗೆ ಕರೆಮಾಡಿ ಬಂದಿದ್ದರಂತೆ ಅದರ ಕುರಿತಂತೆ ನಾವು ನಿಮಗೆ ವಿವರವಾಗಿ ಹೇಳುತ್ತೇವೆ ಬನ್ನಿ. ಹೌದು ಅವಿನಾಶ್ ರವರು ಒಂದು ಚಿಕ್ಕ ಚಿತ್ರದ ಟ್ರೈಲರ್ ಬಿಡುಗಡೆಗಾಗಿ ದರ್ಶನ್ ಅವರನ್ನು ಕರೆಸಬೇಕು ಎಂಬುದಾಗಿ ಅಂದುಕೊಂಡಿದ್ದರಂತೆ. ಆದರೆ ಅಷ್ಟು ದೊಡ್ಡ ನಟನನ್ನು ಹೇಗೆ ಕಳಿಸುವುದು ಎಂಬುದಾಗಿ ಗೊಂದಲದಲ್ಲಿದ್ದಾಗ ದೇವರಾಜ್ ರವರಿಗೆ ಕರೆಮಾಡಿ ಈ ಕುರಿತಂತೆ ತಿಳಿಸಿದ್ದಾರೆ. ಮಾರನೆ ದಿನ ಬೆಳಿಗ್ಗೆ ದರ್ಶನ್ ರವರು ಅವಿನಾಶ್ ರವರಿಗೆ ಕರೆ ಮಾಡಿ ನೀವು ಹಿರಿಯ ಕಲಾವಿದರು ನಮ್ಮನ್ನು ಯಾವಾಗ ಬರಬೇಕು ಎಂದು ಕೇಳಿ ನಾವು ಆ ಸಮಯದಲ್ಲಿ ಬಂದು ನಿಮಗೆ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇವೆ. ಅದಕ್ಕಾಗಿ ನೀವು ಹಿಂಜರಿಕೆ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ. ಇದು ದರ್ಶನ್ ರವರ ದೊಡ್ಡಸ್ತಿಕೆ ಎಂದು ಹೇಳಬಹುದು. ಇದಕ್ಕಾಗಿ ತಾನೆ ಎಲ್ಲರೂ ಅವರನ್ನು ಇಷ್ಟಪಡುವುದು.