ಕೇವಲ ನಾಗ ಚೈತನ್ಯ, ಸಮಂತಾ ಅಲ್ಲ, ಇಡೀ ಅಕ್ಕಿನೇನಿ ಕುಟುಂಬದ ಸದಸ್ಯರು ಮದುಮೆ ವಿಷಯದಲ್ಲಿ ಎಡವುತ್ತಿರುವುದೇಕೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ತೆಲಗು ಚಿತ್ರರಂಗದಲ್ಲಿ ಅಕ್ಕಿನೇನಿ ಕುಟುಂಬ ಎಂದರೆ ತುಂಬನೇ ದೊಡ್ಡ ಹೆಸರಿದೆ. ಈ ಕುಟುಂಬದ ಎಲ್ಲಾ ಗಂಡು ಮಕ್ಕಳೂ ಸಿನಿಮಾ ಇಂಡಸ್ಟ್ರೀಯಲ್ಲಿ ತಮ್ಮದೇ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ, ಯಶಸ್ವಿಯಾಗುತ್ತಿದ್ದಾರೆ ಎನ್ನಬಹುದು. ಅಕ್ಕಿನೇನಿ ಕುಟುಂಬದ ಹಿರಿಯ ತಲೆ, ತೆಲಗು ಚಿತ್ರರಗದ ಮೇರು ನಟ, ನಿರ್ಮಾಪಕ ಅಕ್ಕಿನೇನಿ ನಾಗೇಶ್ವರ ರಾವ್. ಇವರೊಬ್ಬರನ್ನು ಹೊರತು ಪಡಿಸಿದರೆ ಇವರ ಕುಟುಂಬದಲ್ಲಿ ಉಳಿದ ಮಕ್ಕಳು ಮದುವೆ ವಿಷಯದಲ್ಲಿ ಎಡವುತ್ತಿರುವುದು ಮಾತ್ರ ಬೇಸರದ ಸಂಗತಿಯೇ ಸರಿ.
ತೆಲಗು ಚಿತ್ರರಂಗದಲ್ಲಿ ಹಿಟ್ ಸಿನಿಮಾಗಳನ್ನು ಕೊಟ್ಟ ನಟ ಅಕ್ಕಿನೇನಿ ನಾಗಾರ್ಜುನ. ಈಗಲೂ ಕುಡ ಬಹು ಬೇಡಿಕೆಯ ನಟ ಇವರು. ನಾಗಾರ್ಜಿನ ಹಾಗೂ ಲಕ್ಷ್ಮಿ ದಗ್ಗುಬಾಟಿ 1984 ರಲ್ಲಿ ಮದುವೆಯಾಗುತ್ತಾರೆ. ಇವರ ಜೋಡಿ ನೋಡಿ ತೆಲಗು ಚಿತ್ರರಂಗವೇ ಖುಷಿ ಪಡುತ್ತೆ. ಇವರ ಮಗನೇ ಇಂದಿನ ತೆಲುಗು ಸೂಪರ್ ಸ್ಟಾರ್ ಅಕ್ಕಿನೇನಿ ನಾಗ ಚೈತನ್ಯ. ಎಲ್ಲವೂ ಸರಿಯಾಗಿದೆ ಎಂದುಕೊಳ್ಳುವಷ್ಟರಲ್ಲಿ, ನಾಗಾರ್ಜುನ ಹಾಗೂ ಲಕ್ಷ್ಮಿ ನಡುವೆ ವೈಮನಸ್ಸು ಏರ್ಪಡುತ್ತೆ. ಆಗ ನಾಗಾರ್ಜುನ ಅಮಲಾ ಅವರನ್ನು ವಿವಾಹವಾಗಿದ್ದು ಟಾಲಿವುಡ್ ಗಾಸಿಪ್ ಮಾಡುವಂತೆ ಮಾಡುತ್ತೆ.
ಇನ್ನು ನಾಗ ಚೈತನ್ಯ ಹಾಗೂ ಸಮಂತಾ ಪ್ರೀತಿಯ ವಿಷಯ ತೆಲಗು ಚಿತ್ರರಂಗದ ಆಚೆಗೂ ಹರಿದಾಡುತ್ತೆ. ಆದರೆ ಸಮಂತಾ ಹಾಗೂ ನಟ ಸಿದ್ಧಾರ್ಥ ಮದುವೆಯಾಗಿದ್ದಾರೆ ಎನ್ನುವ ಸುದ್ಧಿ ಜೋರಾಗಿ ಸದ್ದು ಮಾಡುತ್ತೆ. ಈ ನಡುವೆ ನಟ ಸಿದ್ಧಾರ್ಥ್ ಮದುವೆಯಾಗಿ ಮುಂಬೈನಲ್ಲಿ ಇವ್ವರು ಮಕ್ಕಳು ಇರುವುದಾಗಿ ತಿಳಿದುಬರುತ್ತೆ. ಬಳಿಕ ಸಿದ್ಧಾರ್ಥ್ ಸಾಹೊ ಅಲಿಖಾನ್ ಜೊತೆ ಸುತ್ತಾಡುತ್ತಿರುವುದು ಇನ್ನಷ್ಟು ವೇಗವಾಗಿ ಗಾಳಿಯಲ್ಲಿ ಹಬ್ಬುತ್ತೆ.
ಹೀಗೆ ಅಫೆರ್ ಇರುವ ಹುಡುಗಿ ನಾಗ ಚೈತನ್ಯ ನಿಗೆ ಬೇಕಿತ್ತ ಎನ್ನುವಷ್ತರಲ್ಲಿ ಸಮಂತಾ ಹಾಗೂ ನಾಗ ಚೈತನ್ಯ ಮದುವೆಯಾಗಿ ಈಗ ವಿಚ್ಛೇಧನದ ವರೆಗೂ ತಲುಪಿದೆ. ಇನ್ನು ಅಕ್ಕಿನೇನಿ ಕುಟುಂಬರ ಕಿರಿಯ ಕುಡಿ ಅಖಿಲ್ ಕೂಡ ಒಳ್ಳೆಯ ಹೀರೋ. ಇನ್ನು ಶ್ರೇಯಾ ಭೂಪಾಲ್ ಜೊತೆ ಪ್ರೇಮ ಗಿಮ ಅಂತ ತಿರುಗಿ ಕೊನೆಗೆ ಮದುವೆ ಹಂತಕ್ಕೆ ಬಂದು ವಿಮಾನ ನಿಲ್ದಾಣದಲ್ಲಿ ನಡೆದ ಒಂದು ಸಣ್ಣ ಜಗಳದಿಂದ ಇಬ್ಬರೂ ಬೇರೆಯಾಗಿದ್ದಾರೆ. ಹೀಗೆ ಎಲ್ಲಾ ಸಂಬಂಧಗಳಿಗಿಂತ ಉತ್ತಮವಾಗಿ ಇರಬೇಕಾದ ಮದುವೆ ಸಂಬಂಧವೇ ಅಕ್ಕಿನೇನಿ ಕುಟುಂಬದಲ್ಲಿ ಹೀಗೆ ಕಾಲುಮುರಿದುಕೊಂಡಿರುವುದು ಇಡೀ ಟಾಲಿವುಡ್ ಚಿತ್ರರಂಗಕ್ಕೇ ನೋವಿನ ಸಂಗತಿ!