ಮೊದಲೇ ನೋವಿನಲ್ಲಿ ಇರುವಾಗ ನಾಚಿಕೆಗೇಡು ಕೆಲಸ ಮಾಡಿದ ಚಾನೆಲ್, ಮೇಘನಾ ರವರ ಪರ ನಿಂತ ಪ್ರಥಮ್, ವಿಷಯ ಏನು ಗೊತ್ತೇ??

10

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಮೇಘನರಾಜ ರವರ ಪುತ್ರ ಜೂನಿಯರ್ ಚಿರು ಸರ್ಜಾ ರವರಿಗೆ ರಾಯನ್ ರಾಜ್ ಸರ್ಜಾ ಎಂಬುದಾಗಿ ನಾಮಕರಣ ಮಾಡಿರುವುದು ನೀವೆಲ್ಲ ನೋಡಿರುತ್ತೀರಿ. ಹೌದು ಸ್ನೇಹಿತರೆ ಈ ಕುರಿತಂತೆ ಸಾಕಷ್ಟು ಚರ್ಚೆಗಳು ಕೂಡ ನಡೆದಿದ್ದವು. ಹೌದು ಸ್ನೇಹಿತರೆ ಅದೇನೆಂದರೆ ರಾಯನ್ ಎನ್ನುವುದು ಯಾವ ಧರ್ಮಕ್ಕೆ ಸೇರಿದ ಹೆಸರು ಹಾಗೂ ಎಲ್ಲದಕ್ಕಿಂತ ಹೆಚ್ಚಾಗಿ ಜೂನಿಯರ್ ಚಿರು ಸರ್ಜಾ ರವರಿಗೆ ನಾಮಕರಣ ಮಾಡಬೇಕಾದರೆ ಕ್ರೈಸ್ತ ಧರ್ಮವನ್ನು ಅನುಸರಿಸಿದ್ದು ಏಕೆ ಎಂಬ ವಿಚಾರಗಳು ಕೂಡ ಸಾಕಷ್ಟು ಬಾರಿ ಚರ್ಚೆಯಾಗಿತ್ತು.

ಇದು ಚಿಕ್ಕ ಮಗುವನ್ನು ಮತಾಂತರ ಮಾಡುವ ಪ್ರಯತ್ನ ಎಂಬುದಾಗಿ ಎಲ್ಲಾ ಟೀಕೆಗಳು ಕೇಳಿಬಂದಿದ್ದವು. ಇದಕ್ಕೆ ಮೇಘನಾರಾಜ್ ರವರು ನನ್ನ ಮಗ ಎಲ್ಲಾ ಧರ್ಮಗಳನ್ನು ಕೂಡ ಆನಂದಿಸಬೇಕು ತಾಯಿಯಾಗಿ ತನ್ನ ಮಗುವಿಗೆ ಏನು ಬೇಕು ಅದನ್ನೇ ಮಾಡಿದ್ದೇನೆ ಎಂಬುದಾಗಿ ಟೀಕಾಕಾರರಿಗೆ ಪ್ರತಿಕ್ರಿಯೆ ನೀಡಿದ್ದರು. ಇನ್ನು ಜೂನಿಯರ್ ಚಿರು ಸರ್ಜಾ ಅವರ ಹೆಸರಿಗೆ ಎಲ್ಲ ಧರ್ಮಗಳಲ್ಲಿ ಕೂಡ ಒಂದೊಂದು ಅರ್ಥ ಇದೆ ಎಂಬುದಾಗಿ ಕೂಡ ಹೇಳಿದ್ದರು. ಇನ್ನು ಇದೇ ಸಮಾಚಾರ ವಾಗಿ ಸುಳ್ಳು ಸುದ್ದಿಯನ್ನು ಹಬ್ಬಿಸುವ ಮಾಧ್ಯಮಗಳ ಕುರಿತು ಮೇಘನರಾಜ್ ರವರ ತಾಯಿ ಪ್ರಮೀಳಾ ಜೋಷಾಯ್ ಕಣ್ಣೀರಿಡುತ್ತಾ ಹೇಳಿದ್ದರು.

ಇನ್ನು ಈಗ ಒಳ್ಳೆ ಹುಡುಗ ಪ್ರಥಮ್ ರವರು ಮೇಘನಾ ರಾಜ್ ಅವರ ಪರವಾಗಿ ಇನ್ನೊಂದು ವಿಷಯದ ವಿರುದ್ಧ ಸಿ’ಡಿದೆದ್ದು ನಿಂತಿದ್ದಾರೆ. ಹೌದು ಸ್ನೇಹಿತರೆ ಯುಟ್ಯೂಬ್ ಚಾನಲ್ ಒಂದರಲ್ಲಿ ಮೇಘನರಾಜ ರವರು ನಾನು ಮದುವೆಯಾಗುವ ಎರಡನೆಯ ಹುಡುಗನ ಕುರಿತಂತೆ ಸದ್ಯದಲ್ಲೇ ಹೇಳಲಿದ್ದೇನೆ ಎಂಬ ಮಾತನಾಡಿದ್ದಾರೆ ಎಂಬುದಾಗಿ ಸುಳ್ಳು ಸುದ್ದಿಯನ್ನು ಹೇಳಲಾಗಿತ್ತು. ಇದರ ಕುರಿತಂತೆ ಮಾತನಾಡುತ್ತಾ ಪ್ರಥಮ್ ರವರು ಈ ಚಾನೆಲ್ ಕುರಿತಂತೆ ದೂರನ್ನು ನೀಡಲೇಬೇಕು ಏಕೆಂದರೆ ಇದರಿಂದಾಗಿ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ ಎಂಬುದನ್ನು ಕೂಡ ಹೇಳಿದ್ದಾರೆ. ಈ ಸುಳ್ಳು ಸುದ್ದಿಗಳ ವಿಚಾರದ ವಿರುದ್ಧವಾಗಿ ಒಳ್ಳೆ ಹುಡುಗ ಪ್ರಥಮ್ ರವರು ಮೇಘನರಾಜ ರವರ ಪರವಾಗಿ ನಿಂತಿದ್ದೇನೆ ಎಂಬುದಾಗಿ ಹೇಳಿಕೊಂಡಿದ್ದಾರೆ.

Get real time updates directly on you device, subscribe now.