ಕಾಜಲ್, ನಯನತಾರ ನಂತರ ಉಪೇಂದ್ರ ರವರ ಹೊಸ ಚಿತ್ರಕ್ಕೆ ಮತ್ತೊಬ್ಬರು ನಟಿಯನ್ನು ಆಯ್ಕೆ ಮಾಡಲು ಮುಂದಾದ ತಂಡ, ಯಾರು ಗೊತ್ತೇ??

13

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಈಗಾಗಲೇ ಪ್ಯಾನ್ ಇಂಡಿಯಾ ಸದ್ದು ಮಾಡಿದೇ ಆ ಚಿತ್ರದ ಪೋಸ್ಟರ್! ಇನ್ನು ಮೊದಲ ಬಾರಿಗೆ ಪ್ರೇಕ್ಷಕರನ್ನು ರಂಜಿಸಲು ತೆರೆಯ ಮೇಲೆ ಕಾಣಿಸಿಕೊಳ್ಳಲಿದೆ ಈ ಜೋಡಿ. ಇನ್ನು ಈ ಪ್ರಾಜೆಕ್ಟ್ ಕೈಗೆತ್ತಿಕೊಂಡವರು ಮತ್ಯಾರು ಅಲ್ಲ, ನಿರ್ದೇಶಕ ಚಂದ್ರು. ಚೆನ್ನಾಗಿರೋ ಕಥೆಯೊಂದಿದ್ದರೆ ಮತ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಸೂಪರ್ ಆಗಿ ಚಿತ್ರ ನಿರ್ಮಾಣ ಮಾಡೋದೇ ಚಂದ್ರು ಅವರ ಸ್ಟೈಲ್! ಯಾವ ಚಿತ್ರದ ಬಗ್ಗೆ ಹೇಳುತ್ತಾ ಇದ್ದೇವೆ ಅನ್ನೋ ಸಣ್ಣ ಅನುಮಾನ ನಿಮಗಿಗಾಲೇ ಬಂದಿರಬಹುದು ಅಲ್ವಾ!?

ಹೌದು ನಾವಿಲ್ಲಿ ಮಾತಾಡ್ತಇರೋದು ಇತ್ತೀಚಿಗೆ ಹಾಲಿವುಡ್ ಮಾದರಿಯ ಪೋಸ್ಟರ್ ಬಿಡುಗಡೆಯಾದ ‘ಕಬ್ಜ’ ಚಿತ್ರದ ಬಗ್ಗೆ. ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಕಾಂಬಿನೇಷನ್ ನಲ್ಲಿ ಮೂಡಿಬರಲಿರುವ ಈ ಚಿತ್ರ ಈಗಾಗಲೇ ಸಕ್ಕತ್ ಸುದ್ದಿ ಮಾಡಿದೆ. ಅಧಿಕ ಬಜೆಟ್ ಜೊತೆಗೆ ಉತ್ತಮ ತಾರಾಗಣವನ್ನೂ ಹೊಂದಿರುವ ಕಬ್ಜ ದಕ್ಷಿಣ ಭಾರತದಲ್ಲಿಯೇ ಫೇಮಸ್ ಅಗೋದ್ರಲ್ಲಿ ಸಂಶಯವಿಲ್ಲ. ಇನ್ನು ಕನ್ನಡ ಹಾಗೂ ಇತರ ಭಾಷೆಗಳಲ್ಲಿ ತೆರೆ ಕಾಣಲಿರುವ ಕೆಜಿಎಫ್2, ವಿಕ್ರಾಂತ ರೋಣ, ಹಾಗೆಯೇ ಟಾಲಿವುಡ್ ನ ಅಲ್ಲು ಅರ್ಜುನ್ ನಟನೆಯ ಪುಷ್ಪ ಈ ಚಿತ್ರಗಳ ಸಾಲಿನಲ್ಲಿ ಕಬ್ಜ ಕೂಡ ಸೇರಿಕೊಂಡು ಬಹು ನಿರೀಕ್ಷಿತ ಚಿತ್ರ ಎನಿಸಿದೆ.

ಇನ್ನು ಸಾಕಷ್ಟು ಕುತೂಹಲ ಮೂಡಿಸಿರುವ ಈ ಚಿತ್ರವನ್ನು ಖರೀದಿಸಲು ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಮುಂದೆ ಬಂದಿವೆಯಂತೆ. ಹಾಗೆಯೇ ಬೆಂಗಳೂರು, ಹೈದರಾಬಾದ್ ಮೊದಲಾದ ಕಡೆ ಅದ್ದೂರಿ ಸೆಟ್‌ಗಳಲ್ಲಿ ಈ ಚಿತ್ರದ ಚಿತ್ರೀಕರಣ ನಡೆದಿದೆ. ಶ್ರೀ ಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ಚಿತ್ರ ನಿರ್ಮಾಣವಾಗಲಿದೆ.

ಇನ್ನು ಈ ಚಿತ್ರಕ್ಕೆ ನಾಯಕ ನಟಿಯಾಗಿ ಬರುವವರೂ ಕೂಡ ಸ್ಟಾರ್ ನಟಿಯೇ ಆಗಿರಬೇಕು. ಅಂತ ನಿರ್ದೇಶಕ ಚಂದ್ರು ಫೇಮಸ್ ನಟಿಯನ್ನೇ ಆಯ್ಕೆ ಮಾಡಿದ್ದರಂತೆ. ಈ ಮೊದಲು ನಟಿ ಕಾಜಲ್ ಅಗರ್ವಾಲ್ ಬರ್ತಾರೆ ಅಂತ ಸುದ್ದಿ ಆಗಿದ್ದು. ಆದ್ರೆ ಗಾಂಧಿನಗರಕ್ಕೆ ಕಾಜಲ್ ಬರೋದಕ್ಕೆ ಇನ್ನೂ ಕಾಲ ಕೂಡಿ ಬಂದಿಲ್ಲ ಅನ್ಸತ್ತೆ. ಆನಂತರದಲ್ಲಿ ನಯನತಾರ ಕಬ್ಜ ಹೀರೋಯಿನ್ ಆಗಿ ಬರ್ತಾರೆ ಅನ್ನೋ ಸುದ್ದಿ ಕೂಡ ಸುಳ್ಳಾಯ್ತು. ಆದ್ರೆ ನಟಿ ಆಯ್ಕೆ ವಿಷಯದಲ್ಲಿ ಯಾವುದೇ ಕಾಂಪ್ರಮೇಸ್ ಮಾಡಿಕೊಳ್ಳದ ನಿರ್ದೇಶಕ ಚಂದ್ರು ಅವರು ಇದೀಗ ತ್ರಿಶಾ ಕೃಷ್ಣನ್ ಅವರನ್ನ ಬಣ್ಣ ಹಚ್ಚಿಸುತ್ತಾರಂತೆ ಈ ಚಿತ್ರಕ್ಕೆ. ಇನ್ನು ಹೆಚ್ಚಿನ ವಿವರಗಳನ್ನು ಬಿಟ್ಟುಕೊಡದ ಚಿತ್ರತಂಡ ಮುಂದಿನ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ.

Get real time updates directly on you device, subscribe now.