ಹುಟ್ಟುಹಬ್ಬಕ್ಕೆ ಹೋಗದೆ ಇದ್ದರೂ ಅಮೂಲ್ಯ ರವರಿಗೆ ದರ್ಶನ್ ರವರು ನೀಡಿದ ಉಡುಗೊರೆ ಏನು ಗೊತ್ತೇ??

3

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಬಾಲನಟಿಯಾಗಿ ಬಂದು ನಂತರ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಕೂಡ ಮಿಂಚಿದವರು ಅಮೂಲ್ಯ ರವರು. ಹೌದು ಸ್ನೇಹಿತರನ್ನು ಅಮೂಲ್ಯ ರವರು ಕನ್ನಡ ಚಿತ್ರರಂಗದಲ್ಲಿ ಬಾಲನಟಿಯಾಗಿ ಹಲವಾರು ಸ್ಟಾರ್ ನಟರ ಜೊತೆಗೆ ನಟಿಸಿ ತಮ್ಮ ಪ್ರತಿಭೆಯನ್ನು ಚಿಕ್ಕವಯಸ್ಸಿನಲ್ಲಿ ಸಾಬೀತುಪಡಿಸಿದ್ದರು. ಇನ್ನು ಅಮೂಲ್ಯ ರವರು ಕನ್ನಡ ಚಿತ್ರರಂಗಕ್ಕೆ 2007 ರಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರು ನಾಯಕ ನಟನಾಗಿ ನಟಿಸಿರುವ ಚೆಲುವಿನ ಚಿತ್ತಾರ ಚಿತ್ರದ ಮೂಲಕ ಪಾದಾರ್ಪಣೆ ಮಾಡುತ್ತಾರೆ.

ಇದಾದ ನಂತರ ಹಲವಾರು ಸ್ಟಾರ್ ನಟರೊಂದಿಗೆ ನಟಿಸಿ ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆ ಹಾಗೂ ಬಹು ಸಂಭಾವನೆ ಪಡೆಯುವ ನಟಿಯಾಗಿ ಕೂಡ ಕಾಣಿಸಿಕೊಳ್ಳುತ್ತಾರೆ. ಇನ್ನು ಕನ್ನಡ ಚಿತ್ರರಂಗದಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಾಯಕ ನಟಿಯಾಗಿ ಅಮೂಲ್ಯ ರವರು ಕಾಣಿಸಿಕೊಂಡಿದ್ದಾರೆ. ಇನ್ನು ಅಮೂಲ್ಯ ರವರು 2012 ರಲ್ಲಿ ಜಗದೀಶ್ ಅವರನ್ನು ಮದುವೆಯಾಗುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ. ಇನ್ನು ನಟಿ ಅಮೂಲ್ಯ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಅಪ್ಪಟ ಅಭಿಮಾನಿ ಎಂಬುದು ನಿಮಗೆಲ್ಲಾ ಗೊತ್ತಿದೆ ಅವರೊಂದಿಗೆ ನಟಿಸುವ ಅವಕಾಶಕ್ಕಾಗಿ ಕಾಯುತ್ತಿದ್ದಾರೆ ಎಂಬುದನ್ನು ಹಲವಾರು ಸಂದರ್ಶನಗಳಲ್ಲಿ ಅವರು ಹೇಳಿದ್ದಾರೆ.

ಇನ್ನು ಇಂದು ಅಮೂಲ್ಯ ಅವರ ಜನ್ಮದಿನದ ಪ್ರಯುಕ್ತ ಹಲವಾರು ಸೆಲೆಬ್ರಿಟಿಗಳು ಹಾಗೂ ಅವರ ಚಿತ್ರರಂಗದ ಸ್ನೇಹಿತರು ಜನ್ಮ ದಿನದ ಶುಭಾಶಯಗಳನ್ನು ಅವರಿಗೆ ಕೋರಿದರು. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ಅಮೂಲ್ಯ ರವರ ಕುಟುಂಬಕ್ಕೆ ತುಂಬಾ ಬೇಕಾದವರು. ಇನ್ನು ಇಂದು ಜನ್ಮ ದಿನದ ಪ್ರಯುಕ್ತ ಸ್ವತಹ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರೇ ಅಮೂಲ್ಯ ರವರಿಗೆ ಕರೆ ಮಾಡಿ ಶುಭಾಶಯಗಳನ್ನು ತಿಳಿಸಿದ್ದಾರೆ. ಮಾತ್ರವಲ್ಲದೆ ಉಡುಗೊರೆಯಾಗಿ ಹೂವಿನ ಬೊಕ್ಕೆ ಬಟ್ಟೆ ಹಾಗೂ ಸಿಹಿ ತಿನಿಸುಗಳನ್ನು ಕೂಡ ಕಳುಹಿಸಿ ಕೊಟ್ಟಿದ್ದಾರೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Get real time updates directly on you device, subscribe now.