ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ನಿರೂಪಕರಿಗೆ ತೀರ್ಪುಗಾರರಿಗೆ ಹಾಗೂ ಸ್ಪರ್ಧಿಗಳಿಗೆ ಸಿಗುವ ಸಂಭಾವನೆ ಎಷ್ಟು ಗೊತ್ತಾ??
ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಈಗಾಗಲೇ ಹಲವಾರು ಸಿಂಗಿಂಗ್ ಕಾರ್ಯಕ್ರಮಗಳು ಬಂದು ಹೋಗಿವೆ. ಆದರೆ ಎಸ್ ಪಿ ಬಾಲಸುಬ್ರಹ್ಮಣ್ಯ ಅವರು ಅಂದಿನ ದಿನಗಳಲ್ಲಿ ಈಟಿವಿ ಕನ್ನಡವಾಹಿನಿಯಲ್ಲಿ ನಡೆಸಿಕೊಡುತ್ತಿದ್ದ ಅಂತಹ ಎದೆತುಂಬಿ ಹಾಡುವೆನು ಕಾರ್ಯಕ್ರಮಕ್ಕೆ ಯಾವುದು ಕೂಡ ಸರಿಸಾಟಿ ಇಲ್ಲ. ಹೌದು ಸ್ನೇಹಿತರೆ ಈಗ ಅದೇ ಕಾರಣಕ್ಕಾಗಿ ಈ ಟಿವಿ ಕನ್ನಡ ಕಲರ್ಸ್ ಕನ್ನಡವಾಗಿ ಬದಲಾಗಿರುವುದು ನಿಮಗೆಲ್ಲಾ ಗೊತ್ತೇ ಇದೆ.
ಕಲರ್ಸ್ ಕನ್ನಡ ವಾಹಿನಿ ಈಗ ಮತ್ತೊಮ್ಮೆ ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಮೂಲಕ ವಾಪಸಾಗಿದೆ. ಹೌದು ಸ್ನೇಹಿತರೆ ಈ ಕಾರ್ಯಕ್ರಮವನ್ನು ಸಂಗೀತ ದಿಗ್ಗಜರಾದಂತಹ ರಾಜೇಶ್ ಕೃಷ್ಣನ್ ವಿ ಹರಿಕೃಷ್ಣ ರಘು ದೀಕ್ಷಿತ್ ರವರ ತೀರ್ಪುಗಾರರಾಗಿ ನಡೆಸಿಕೊಡುತ್ತಿದ್ದಾರೆ. ಹಾಗೂ ನಮ್ಮನೆ ಯುವರಾಣಿ ಖ್ಯಾತಿಯ ಅಂಕಿತಾ ಅಮರ ರವರು ನಿರೂಪಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಈ ಕಾರ್ಯಕ್ರಮಕ್ಕೆ 18 ಅಭ್ಯರ್ಥಿಗಳು ಆಯ್ಕೆಯಾಗಿದ್ದು ಇದು 32 ವಾರಗಳ ಕಾಲ ನಡೆಯಲಿದೆ. ಇನ್ನು ಈ ಬಾರಿಯ ಎದೆತುಂಬಿ ಹಾಡುವೆನು ಕಾರ್ಯಕ್ರಮದ ವಿಜೇತರಿಗೆ ಬರೋಬ್ಬರಿ 10 ಲಕ್ಷ ರೂಪಾಯಿ ಬಹುಮಾನ ಕಾದಿದೆ.
ಇನ್ನು ಕಾರ್ಯಕ್ರಮದ ತೀರ್ಪುಗಾರರಿಗೆ ಹಾಗೂ ನಿರೂಪಕರಿಗೆ ಹಾಗೂ ಸ್ಪರ್ಧಿಗಳಿಗೆ ಎಷ್ಟು ಸಂಭಾವನೆ ಸಿಗುತ್ತದೆ ಎಂಬುದನ್ನು ನಾವು ನಿಮಗೆ ವಿವರವಾಗಿ ಹೇಳುತ್ತೇವೆ. ರಾಜೇಶ್ ಕೃಷ್ಣನ್ ರವರಿಗೆ ಒಂದು ಎಪಿಸೋಡ್ ಗೆ 1.50 ಲಕ್ಷ ರೂಪಾಯಿ ವಿ ಹರಿಕೃಷ್ಣ ರವರಿಗೆ 1 ಲಕ್ಷ ರೂಪಾಯಿ ಇನ್ನೂ ರಘು ದೀಕ್ಷಿತ್ ರವರಿಗೆ 75 ಸಾವಿರ ರೂಪಾಯಿ ಸಿಗುತ್ತದೆ. ಇನ್ನು ನಿರೂಪಕಿ ಅಂಕಿತ ಅಮರ್ ರವರಿಗೆ 50 ಸಾವಿರ ರೂಪಾಯಿ ಸಂಭಾವನೆ ಸಿಗುತ್ತದೆ. ಇನ್ನು ಸ್ಪರ್ಧಿಗಳಿಗೆ ಪ್ರತಿವಾರ ತಲಾ ಹತ್ತು ಸಾವಿರ ರೂಪಾಯಿ ಸಿಗುತ್ತದೆ.