ತಾನೇ ಎಲ್ಲಾ ತನ್ನಿಂದ ಎಲ್ಲಾ ಅಂದುಕೊಂಡಿರುವ ರಾಹುಲ್ ತೇವಟಿಯ ಸರಿಯಾಗಿ ಮೈಚಳಿ ಬಿಡಿಸಿದ ದಕ್ಷಿಣ ಆಫ್ರಿಕಾ ಮಾಜಿ ನಾಯಕ ಗ್ರೇಮ್ ಸ್ಮಿತ್. ಯಾಕೆ ಗೊತ್ತೇ??

4

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ಸೌತ್ ಆಫ್ರಿಕಾ ವಿರುದ್ಧದ ಟಿ-ಟ್ವೆಂಟಿ ಸರಣಿ ಮುಗಿದಿದ್ದು ಭಾರತೀಯ ಕ್ರಿಕೆಟ್ ತಂಡ ಈಗ ಐರ್ಲೆಂಡ್ ವಿರುದ್ಧದ ಎರಡು ಟಿ20 ಪಂದ್ಯಗಳ ಸರಣಿಯನ್ನು ಆಡಬೇಕಾಗಿದೆ. ಇದಕ್ಕಾಗಿ ತಂಡವನ್ನು ಕೂಡ ಘೋಷಿಸಿದ್ದು ಹಾರ್ದಿಕ್ ಪಾಂಡ್ಯ ರವರು ನಾಯಕತ್ವವನ್ನು ವಹಿಸಿದ್ದರೆ ಭುವನೇಶ್ವರ್ ಕುಮಾರ್ ಅವರು ಉಪನಾಯಕನಾಗಿ ಕಾಣಿಸಿಕೊಂಡಿದ್ದಾರೆ. ತಂಡದಲ್ಲಿ ರಾಹುಲ್ ತ್ರಿಪಾಠಿ ಹಾಗೂ ಸಂಜು ಸ್ಯಾಮ್ಸನ್ ರವರ ಮರುಪ್ರವೇಶ ಕೂಡ ಆಗಿದೆ.

ಇನ್ನು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗಾಗಿ ರಿಷಬ್ ಪಂತ್ ರವರು ತಂಡದಿಂದ ಹೊರಗುಳಿದಿದ್ದ ರಾಹುಲ್ ದ್ರಾವಿಡ್ ಅವರು ಕೂಡಲೇ ಇರುವ ಕಾರಣದಿಂದಾಗಿ ವಿವಿಎಸ್ ಲಕ್ಷ್ಮಣ್ ಅವರು ಕಾರ್ಯನಿರ್ವಹಿಸಲಿದ್ದಾರೆ. ಇನ್ನೂ ಐಪಿಎಲ್ ನಲ್ಲಿ ಗುಜರಾತ್ ಟೈಟನ್ಸ್ ತಂಡದ ಪರವಾಗಿ ಅತ್ಯುತ್ತಮ ಪ್ರದರ್ಶನವನ್ನು ನೀಡಿದ ನಂತರವೂ ಕೂಡ ನನ್ನನ್ನು ತಂಡದಲ್ಲಿ ಆಯ್ಕೆ ಮಾಡಿಲ್ಲ ಎಂಬುದಾಗಿ ಪರೋಕ್ಷವಾಗಿ ರಾಹುಲ್ ತೆವಾಟಿಯ ರವರು ಟ್ವಿಟರ್ನಲ್ಲಿ ನಿರೀಕ್ಷೆಗಳು ಸಾಕಷ್ಟು ಬೇಸರವನ್ನುಂಟು ಮಾಡುತ್ತವೆ ಎಂಬುದಾಗಿ ಟ್ವೀಟ್ ಮಾಡಿದ್ದರು. ಇದಕ್ಕೆ ಪರೋಕ್ಷವಾಗಿಯೇ ಪ್ರತ್ಯುತ್ತರವನ್ನು ನೀಡಿರುವ ಸೌತ್ ಆಫ್ರಿಕದ ಮಾಜಿ ನಾಯಕ ಗ್ರೇಮ್ ಸ್ಮಿತ್ ಸಂದರ್ಶನವೊಂದರಲ್ಲಿ ಈ ಕುರಿತಂತೆ ಮಾತನಾಡಿದ್ದಾರೆ.

ಭಾರತದಲ್ಲಿ ಪ್ರತಿಭಾವಂತ ಆಟಗಾರರಿಗೆ ಏನು ಕಡಿಮೆ ಇಲ್ಲ ಈಗಾಗಲೇ ವಿಶ್ವಕಪ್ ಇರುವ ಕಾರಣದಿಂದಾಗಿ ಅದಕ್ಕೆ ತಕ್ಕಂತೆ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಆಟಗಾರರನ್ನು ಆಯ್ಕೆ ಮಾಡುತ್ತಿದ್ದಾರೆ. ಆಯ್ಕೆಯಾಗಿಲ್ಲ ಎಂದು ಟ್ವಿಟರ್ನಲ್ಲಿ ಅಳುವ ಬದಲು ನಿಮ್ಮ ಆಟದ ಬಗ್ಗೆ ಗಮನ ನೀಡಿ ನೀವು ನಿಮ್ಮನ್ನು ಆಯ್ಕೆ ಮಾಡದೇ ಇರಲು ಕಾರಣವನ್ನು ನೀಡಬೇಡಿ ಅಷ್ಟರ ಮಟ್ಟಿಗೆ ತಯಾರಿಯನ್ನು ನಡೆಸಿ ಆಗ ಹೇಗೆ ನಿಮ್ಮನ್ನು ಆಯ್ಕೆ ಮಾಡದೆ ಇರುತ್ತಾರೆ ಎಂಬುದಾಗಿ ನೋಡೋಣ ಎಂಬುದಾಗಿ ಹೇಳಿದ್ದಾರೆ. ಖಂಡಿತವಾಗಿ ಇದೊಂದು ಖಡಕ್ ಉತ್ತರ ಎಂದರೆ ತಪ್ಪಾಗಲಾರದು. ಗ್ರೇಮ್ ಸ್ಮಿತ್ ರವರ ಹೇಳಿಕೆ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ.

Get real time updates directly on you device, subscribe now.