ಸಮನ್ವಿ ರವರ ಸುದ್ದಿ ತಿಳಿದ ತಕ್ಷಣ ಕಣ್ಣೀರು ಹಾಕಿದ ತಾರಮ್ಮ. ಬಾರಿ ದುಕ್ಕದಲ್ಲಿ ಮುಳುಗಿನ ನನ್ನಮ್ಮ ಸೂಪರ್ ಸ್ಟಾರ್ ಕುಟುಂಬ. ತಾರಮ್ಮ ಮಾತನಾಡಿ ಹೇಳಿದ್ದೇನು ಗೊತ್ತಾ?

25

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಕೆಲವೊಂದು ಘಟನೆಗಳನ್ನು ನೋಡಿದಾಗ ದೇವರು ಇದ್ದಾನೆ ಎಂದು ನಂಬುವುದೇ ಕಷ್ಟವಾಗಿಬಿಟ್ಟಿದೆ ಎಂದರೆ ಖಂಡಿತವಾಗಿಯೂ ತಪ್ಪಾಗಲಾರದು. ಇನ್ನೂ ಬದುಕಿ ಬಾಳಬೇಕಾಗಿದೆ ನಮ್ಮಮ್ಮ ಸೂಪರ್ಸ್ಟಾರ್ ಕಾರ್ಯಕ್ರಮದ ಖ್ಯಾತಿಯ ಸಮನ್ವಿ ನಿನ್ನೆಯಷ್ಟೇ ಟಿಪ್ಪರ್ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಮರಣವನ್ನು ಹೊಂದಿದ್ದಾಳೆ. ಅಷ್ಟೊಂದು ಚಿಕ್ಕ ವಯಸ್ಸಿನಲ್ಲಿ ಯಾರೂ ಕೂಡ ಊಹಿಸಲಾಗದಂತಹ ಘಟನೆ ನಡೆಯುತ್ತದೆ ಎಂಬುದಾಗಿ ಯಾರು ಕೂಡ ಕನಸಿನಲ್ಲಿಯೂ ಅಂದುಕೊಂಡಿರಲು ಕೂಡ ಸಾಧ್ಯವಿಲ್ಲ.

ತಮ್ಮ ತಾಯಿ ಅಮೃತ ನಾಯ್ಡುರವರ ಜೊತೆಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸದಾ ಲವಲವಿಕೆಯಿಂದ ಎಲ್ಲರ ಮುಖದಲ್ಲಿ ನಗು ಮೂಡುವಂತೆ ಮಾಡುತ್ತಿದ್ದ ಪುಟಾಣಿ ಪ್ರತಿಭೆ ಅದು. ಕೇವಲ ಆರು ವರ್ಷ ವಯಸ್ಸಿನಲ್ಲಿಯೇ ಯಾರೂ ಬಾರದ ಲೋಕದತ್ತ ಪಯಣ ಬೆಳೆಸುತ್ತಾಳೆ ಎಂಬ ವಿಚಾರವನ್ನು ಅರಗಿಸಿಕೊಳ್ಳಲು ಕೂಡ ಸಾಧ್ಯವಿಲ್ಲ. ಈ ವಿಚಾರದ ಕುರಿತಂತೆ ನಮ್ಮಮ್ಮ ಸೂಪರ್ಸ್ಟಾರ್ ಕಾರ್ಯಕ್ರಮದ ತೀರ್ಪುಗಾರರು ಹಾಗೂ ಕನ್ನಡ ಚಿತ್ರರಂಗದ ಖ್ಯಾತ ನಟಿ ಆಗಿರುವ ತಾರಾ ಅವರು ಕೂಡ ಪ್ರತಿಕ್ರಿಯಿಸಿದ್ದಾರೆ.

ಸಮನ್ವಿ ತುಂಬಾನೇ ಪ್ರತಿಭಾವಂತೆ ಮಾಡೆಲ್ ತರ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿದ್ದಳು. ಅವಳಿಲ್ಲ ಎಂಬ ವಿಚಾರ ತುಂಬಾನೇ ದುಃಖವನ್ನು ನೀಡುತ್ತಿದೆ. ನಾನು ಬೆಂಗಳೂರಿನಲ್ಲಿ ಇರಲಿಲ್ಲ ಪದೇ ಪದೇ ನನ್ನ ಫೋನ್ ಗೆ ಕರೆ ಬರುತ್ತಿತ್ತು. ಕರೆಸಿ ಸ್ವೀಕರಿಸಿದಾಗ ಇಂತಹ ದುಃಖಕರ ವಿಚಾರ ನನಗೆ ಈಗ ತಿಳಿದುಬಂದಿದೆ. ಅವಳ ತಾಯಿ ಅಮೃತ ನಾಯ್ಡು ಗರ್ಭಿಣಿ ಎಂಬ ಕಾರಣಕ್ಕಾಗಿ ಅವಳಿಗೆ ಡ್ಯಾನ್ಸ್ ನಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ ಎಂಬ ವಿಚಾರದ ಹಿನ್ನೆಲೆಯಲ್ಲಿ ಕಾರ್ಯಕ್ರಮದಿಂದ ಎಲಿಮಿನೇಟ್ ಮಾಡಿದ್ದೆವು ಆದರೂ ಕೂಡ ಅವಳೊಂದಿಗೆ ಸಾಕಷ್ಟು ಒಳ್ಳೆಯ ಸ್ನೇಹ ಸಂಬಂಧವನ್ನು ಹೊಂದಿದೆ ಎಂಬುದಾಗಿ ನೆನಪಿಸಿಕೊಳ್ಳುತ್ತಾರೆ. ಕಾರ್ಯಕ್ರಮದ ನಂತರವೂ ಕೂಡ ಅಮೃತ ಹಾಗೂ ಸಮನ್ವಿ ಯನ್ನು ಭೇಟಿಯಾಗಲು ಕಾಯುತ್ತಿದ್ದೆ ಆದರೆ ಅದು ಸಾಧ್ಯ ಆಗುವ ಮುನ್ನವೇ ಹೀಗೆಲ್ಲ ನಡೆದುಹೋಯಿತು ಎಂಬುದಾಗಿ ಕಂಬನಿ ಮಿಡಿದಿದ್ದಾರೆ.

Get real time updates directly on you device, subscribe now.