ವಿವಾದಗಳಿಂದಲೇ ಸದ್ದು ಮಾಡುತ್ತಿರುವ ರಶ್ಮಿಕಾ ಕಂಡು ದೂರವಿಟ್ಟ ಮಹೇಶ್?? ಸೇಫ್ ಆಗಿ ಹೆಜ್ಜೆ ಇಟ್ಟ ಮಹೇಶ್ ಮಾಡಿದ್ದೇನು ಗೊತ್ತೇ??

18

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ರಶ್ಮಿಕ ಮಂದಣ್ಣ ನವರ ಮೂಲತಹ ಕರ್ನಾಟಕದ ಕೊಡಗಿನ ಅವರಾಗಿದ್ದರು ಕೂಡ ತೆಲುಗು ಚಿತ್ರರಂಗದ ಮನೆಮಗಳು ಎಂಬಂತೆ ತೆಲುಗಿನವರಿಂದ ಅಷ್ಟೊಂದು ದೊಡ್ಡ ಮಟ್ಟದಲ್ಲಿ ಪ್ರೀತಿಯನ್ನು ಪಡೆದಿದ್ದಾರೆ. ಅದಕ್ಕಾಗಿ ರಶ್ಮಿಕ ಮಂದಣ್ಣ ಅವರು ಬಹುತೇಕ ತೆಲುಗು ಚಿತ್ರಗಳಲ್ಲಿ ನಟಿಸುವುದು. ತೆಲುಗು ಚಿತ್ರರಂಗದಲ್ಲಿ ಈಗಾಗಲೇ ನಾಯಕಿಯ ಪಟ್ಟವನ್ನು ಪಡೆದುಕೊಂಡಿದ್ದಾರೆ ನಮ್ಮ ರಶ್ಮಿಕ ಮಂದಣ್ಣ ನವರು.

ಅದಕ್ಕೆ ಮತ್ತೊಂದು ಪೂರಕವೆಂಬಂತೆ ಇತ್ತೀಚೆಗಷ್ಟೇ ಅವರು ನಟಿಸಿರುವ ಪುಷ್ಪ ಚಿತ್ರ ಬಾಕ್ಸಾಫೀಸಿನಲ್ಲಿ ಲೂಟಿ ಮಾಡಿದೆ. ಪ್ರೇಕ್ಷಕರ ಮನಸೂರೆಗೊಂಡ ಬಾಕ್ಸಾಫೀಸ್ ನಲ್ಲಿ ಬರೋಬ್ಬರಿ 300 ಕೋಟಿ ರೂಪಾಯಿಗೂ ಅಧಿಕ ಬಾಕ್ಸಾಫೀಸ್ ಕಲೆಕ್ಷನ್ ಮಾಡಿದೆ. ಇನ್ನು ಪುಷ್ಪ ಚಿತ್ರದ ಯಶಸ್ಸಿನ ಹಿನ್ನೆಲೆಯಲ್ಲಿ ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಆಗಿರುವ ಮಹೇಶ್ ಬಾಬುರವರ ಪುಷ್ಪ ಚಿತ್ರತಂಡವನ್ನು ಹೊಗಳಿದ್ದಾರೆ. ಈ ರೀತಿಯಲ್ಲಿ ಹೊಗಳುವ ಸಂದರ್ಭದಲ್ಲಿ ಸೂಪರ್ ಸ್ಟಾರ್ ಮಹೇಶ್ ಬಾಬು ರವರು ರಶ್ಮಿಕಾ ಮಂದಣ್ಣ ನವರನ್ನು ಕಡೆಗಣಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಟ್ವಿಟರ್ನಲ್ಲಿ ಟ್ವೀಟ್ ಮಾಡುತ್ತಾ ಸೂಪರ್ ಸ್ಟಾರ್ ಮಹೇಶ್ ಬಾಬು ರವರು ಪುಷ್ಪ ಚಿತ್ರದ ಯಶಸ್ಸಿನ ಹಿಂದಿನ ಕಾರಣೀಭೂತರಾಗಿರುವ ನಾಯಕನಟ ಅಲ್ಲು ಅರ್ಜುನ್ ಹಾಗೂ ನಿರ್ದೇಶಕರು ಸುಕುಮಾರ್ ಅವರಿಗೆ ಅಭಿನಂದನೆಗಳು ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಎಲ್ಲೂ ಕೂಡ ರಶ್ಮಿಕ ಮಂದಣ್ಣ ಅವರ ಹೆಸರನ್ನು ಉಲ್ಲೇಖಿಸಿಲ್ಲ. ಅವರ ಅಭಿಮಾನಿಗಳು ಮತ್ತು ಕೆಲವು ನೆಟ್ಟಿಗರು ಓವರ್ ರೇಟೆಡ್ ಆಗಿರುವ ರಶ್ಮಿಕ ಮಂದಣ್ಣ ನವರನ್ನು ಉಲ್ಲೇಖಿಸದಿರುವುದಕ್ಕೆ ಧನ್ಯವಾದಗಳು ಎಂಬುದಾಗಿ ಹೇಳಿದ್ದಾರೆ. ಈ ಹಿಂದೆ ಸರಿಲೇರು ನೀಕೆವ್ವರು ಚಿತ್ರದಲ್ಲಿ ರಶ್ಮಿಕ ಮಂದಣ್ಣ ಹಾಗೂ ಸೂಪರ್ ಸ್ಟಾರ್ ಮಹೇಶ್ ಬಾಬು ರವರು ಒಟ್ಟಿಗೆ ನಟಿಸಿದ್ದರು ಎಂಬುದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

Get real time updates directly on you device, subscribe now.