ತಾನು ಓದಿಲ್ಲ ಎಂದು ತನ್ನ ಹೆಂಡತಿಯನ್ನು ಕಷ್ಟ ಪಟ್ಟು ಓದಿಸಿ ಕೆಎಎಸ್ ಅಧಿಕಾರಿಯನ್ನಾಗಿ ಮಾಡಿಸಿದ, ಆದರೆ ಆಮೇಲೆ ಏನಾದ ಗೊತ್ತಾ?? ಪಾಪ ಕಣ್ರೀ.
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸರಿಹೊಂದುವ ಜೋಡಿಯನ್ನು ಹುಡುಕಿ ಮದುವೆ ಮಾಡುವುದು ತುಂಬಾನೇ ಕಷ್ಟ. ಒಂದು ವೇಳೆ ಗಂಡ ಸರಿಯಾಗಿದ್ದರೆ ಹೆಂಡತಿ ಸರಿಯಾಗಿರುವುದಿಲ್ಲ ಅಥವಾ ಹೆಂಡತಿ ಸರಿಯಾಗಿದ್ದರೆ ಗಂಡ ಸರಿಯಾಗಿರುವುದಿಲ್ಲ. ಒಂದು ವೇಳೆ ಇಬ್ಬರೂ ಕೂಡ ಚೆನ್ನಾಗಿ ಅನ್ಯೋನ್ಯವಾಗಿದ್ದಾರೆ ಆ ದೇವರು ಅಥವಾ ವಿಧಿ ಅವರಿಬ್ಬರನ್ನು ಚೆನ್ನಾಗಿ ಬದುಕಲು ಬಿಡುವುದಿಲ್ಲ.
ನಾವು ಇಂದು ಹೇಳು ಹೊರಟಿರುವ ನೈಜ ಘಟನೆಯಲ್ಲಿ ಕೂಡ ನಡೆದಿರುವುದು ಅದೇ ವಿಚಾರ. ಆ ಗಂಡ ಹೆಂಡತಿಯ ಹೆಸರು ಸೀನ ಹಾಗೂ ಅಶ್ವಿನಿ ಎಂಬುದಾಗಿ. ಗಂಡನಿಗೆ ತಾನು ಚೆನ್ನಾಗಿ ಓದಿಲ್ಲ ಎಂಬ ಕಾರಣಕ್ಕಾಗಿ ತನ್ನ ಹೆಂಡತಿಯಾದರೂ ಚೆನ್ನಾಗಿ ಓದಬೇಕೆಂಬ ಆಸೆ ಇತ್ತು. ಇತ್ತ ಅಶ್ವಿನಿ ಓದಿನಲ್ಲಿ ಜಾಣೆಯಾಗಿದ್ದಳು. ಗಂಡ ಕೂಡ ತನ್ನ ಹೆಂಡತಿ ಓದಿ ದೊಡ್ಡ ಅಧಿಕಾರಿ ಆಗಬೇಕೆಂಬ ಆಸೆಯಿಂದ ಅವಳನ್ನು ಚೆನ್ನಾಗಿ ಓದಿಸುತ್ತಾನೆ. ಇಂದಿನ ದುನಿಯಾದಲ್ಲಿ ಇಂತಹ ಒಳ್ಳೆಯ ದಂಪತಿಗಳು ಸಿಗುವುದು ತುಂಬಾ ಅಪರೂಪ. ಓದಿ ದೊಡ್ಡ ಅಧಿಕಾರಿ ಆಗಬೇಕೆಂಬ ಹೆಂಡತಿ ಅಶ್ವಿನಿಯ ಆಸೆಗೆ ಗಂಡ ಸೀನ ಗೌರವ ನೀಡಿ ಕಷ್ಟಪಟ್ಟು ಆಕೆಗೆ ಬೆಂಬಲವಾಗಿ ನಿಂತಿದ್ದ.
ಇನ್ನು ಕೆಲ ಸಮಯಗಳ ಹಿಂದಷ್ಟೇ ಅಶ್ವಿನಿ ಕೆಎಎಸ್ ಪರೀಕ್ಷೆಯಲ್ಲಿ ಪಾಸಾಗಿ ಬೆಂಗಳೂರಿನಲ್ಲಿ ತಹಶೀಲ್ದಾರರಾಗಿ ಅಧಿಕಾರವನ್ನು ಸ್ವೀಕರಿಸಿದರು. ಆದರೆ ಆ ವಿಧಿಗೆ ಈ ಇಬ್ಬರು ಗಂಡ-ಹೆಂಡತಿಯರು ಅನ್ಯೋನ್ಯವಾಗಿ ಬಾಳುವುದು ಇಷ್ಟವಿರಲಿಲ್ಲ ಎಂದು ಕಾಣುತ್ತದೆ. ಹೌದು ಗೆಳೆಯರೇ ಕೆಲ ಸಮಯಗಳ ಹಿಂದಷ್ಟೇ ಈ ಮಹಾಮಾರಿಗೆ ಸೀನ ಕೊನೆಯುಸಿರನ್ನು ಎಳೆದಿದ್ದಾರೆ. ಗಂಡನನ್ನು ಉಳಿಸಿಕೊಳ್ಳಬೇಕೆಂಬ ಅಶ್ವಿನಿ ಅವರ ಶತಾಯಗತಾಯ ಪ್ರಯತ್ನ ಕೂಡ ವಿಫಲವಾಗಿದೆ. ಹೆಂಡತಿ ಓದಿ ದೊಡ್ಡ ಅಧಿಕಾರಿ ಆಗಬೇಕೆಂದು ಕನಸು ಕಂಡಿದ್ದ ಸೀನಾ ಹೆಂಡತಿ ಅಧಿಕಾರಿ ಆದಮೇಲೆ ಅವಳನ್ನು ಕಣ್ತುಂಬಿಸಿಕೊಳ್ಳಲು ಸಾಧ್ಯವಾಗದೆ ಇಹಲೋಕವನ್ನು ತ್ಯಜಿಸಿದ್ದಾರೆ. ಅಶ್ವಿನಿ ಅವರ ಆಕ್ರಂದನ ಎನ್ನುವುದು ಮುಗಿಲನ್ನು ಮುಟ್ಟಿದೆ.