ಸ್ವರ್ಗ ದಿಂದ ವಿಷ್ಣು ಸರ್ ನೋಡಿಯೇ ಖುಷಿ ಪಟ್ಟಿರುತ್ತಾರೆ, ಅನಿರುದ್ ರವರು ಜನರಿಗೆ ಅಷ್ಟು ಇಷ್ಟವಾಗಲು ಇದಕ್ಕಿಂತ ಕಾರಣ ಬೇಕೇ??

12

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲ ತಿಳಿದಿರುವಂತೆ ನಟ ಅನಿರುದ್ಧ ಅವರು ಕನ್ನಡ ಚಿತ್ರರಂಗದಲ್ಲಿ ಮೊದಲು ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು ಆದರೆ ಬಹುಕಾಲದ ವಿರಾಮದ ನಂತರ ಮತ್ತೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲ್ಲಿ ದಾರವಾಹಿ ಮೂಲಕ ವಾಪಸಾಗಿ ಬಾರಿ ಜನಪ್ರಿಯತೆ ಪಡೆದಿದ್ದಾರೆ. ನಟ ಅನಿರುದ್ಧ ರವರು ಕನ್ನಡ ಚಿತ್ರರಂಗದ ಮೇರು ನಟರಾಗಿರುವ ಸಾಹಸಸಿಂಹ ಹಾಗೂ ಅಭಿನಯ ಭಾರ್ಗವ ಬಿರುದಾಂಕಿತ ವಿಷ್ಣುವರ್ಧನ್ ರವರ ಮಗಳಾಗಿರುವ ಕೀರ್ತಿ ಅವರ ಪತಿ ಆಗಿದ್ದಾರೆ.

ಇನ್ನು ಹಲವಾರು ಚಿತ್ರಗಳಲ್ಲಿ ವಿಷ್ಣುವರ್ಧನ್ ರವರೊಂದಿಗೆ ನಟಿಸಿರುವ ಅನುಭವ ಕೂಡ ನಟ ಅನಿರುದ್ಧ ಅವರಿಗಿದೆ. ನಟ ಅನಿರುದ್ಧ್ ಅವರು ಹಲವಾರು ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡರು ಕೂಡ ಸಿನಿಮಾಗಳಿಂದ ಅವರಿಗೆ ಹೇಳಿಕೊಳ್ಳುವ ಮಟ್ಟಕ್ಕೆ ಯಶಸ್ಸು ಎನ್ನುವುದು ಸಿಕ್ಕಿರಲಿಲ್ಲ. ಆದರೆ ಅವರಿಗೆ ಅತ್ಯಂತ ದೊಡ್ಡ ಯಶಸ್ಸು ಸಿಕ್ಕಿದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೂಪರ್ಹಿಟ್ ಧಾರಾವಾಹಿ ಜೊತೆಜೊತೆಯಲಿ ಮೂಲಕ. ಜೊತೆ ಜೊತೆಯಲ್ಲಿ ದಾರವಾಹಿಯಲ್ಲಿ ಅನಿರುದ್ಧ್ ಅವರು ನಿರ್ವಹಿಸಿರುವ ಆರ್ಯವರ್ಧನ ಪಾತ್ರ ಎಲ್ಲರ ಅಚ್ಚುಮೆಚ್ಚಿನ ನಾಯಕನಟನ ಪಾತ್ರವಾಗಿದೆ ಎಂದರೆ ತಪ್ಪಾಗಲಾರದು.

ಎಲ್ಲದಕ್ಕಿಂತ ಹೆಚ್ಚಾಗಿ ದಾರವಾಹಿ ಮೂಲಕವೂ ಕೂಡ ಇಷ್ಟೊಂದು ಅಭಿಮಾನಿಗಳನ್ನು ಸಂಪಾದಿಸಬಹುದು ಎಂಬುದನ್ನು ನಟ ಅನಿರುದ್ಧ ಅವರು ತೋರಿಸಿಕೊಟ್ಟಿದ್ದಾರೆ. ಆದರೆ ಈಗ ನಟ ಅನಿರುದ್ಧ ಅವರು ಬೇರೆ ಒಂದು ಕಾರಣಕ್ಕಾಗಿ ಎಲ್ಲರ ಮನಗೆಲ್ಲಲು ಪ್ರಾರಂಭಿಸಿದ್ದಾರೆ. ಅದೇನೆಂದರೆ ಬೆಂಗಳೂರು ಸುತ್ತಮುತ್ತಲಿರುವ ಹಾಗೂ ಕೆಲವು ಊರುಗಳಲ್ಲಿ ಇರುವ ಕಸದಿಂದ ಕಲುಷಿತ ಗೊಂಡಿರುವ ಪ್ರದೇಶಗಳನ್ನು ಫೋಟೋ ಹಾಗೂ ವಿಡಿಯೋ ಮಾಡುವ ಮೂಲಕ ಅಲ್ಲಿನ ಜನಪ್ರತಿನಿಧಿಗಳಿಗೆ ಅದನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಮಾಡುವಲ್ಲಿ ಪ್ರೇರೇಪಿಸಿದ್ದಾರೆ ನಮ್ಮ ನಟ ಅನಿರುದ್ಧ. ಒಟ್ಟಾರೆಯಾಗಿ ಎಲ್ಲಾ ಕಡೆ ಸ್ವಚ್ಛತೆ ತುಂಬಿ ತುಳುಕಬೇಕು ಎಂಬುವುದೇ ನಟ ಅನಿರುದ್ಧ್ ಅವರ ಮುಖ್ಯ ಧ್ಯೇಯವಾಗಿದೆ. ಇದಕ್ಕಾಗಿ ಅವರು ಕೊಡುತ್ತಿರುವ ಪರಿಶ್ರಮ ಖಂಡಿತವಾಗಿಯೂ ಗಮನಾರ್ಹವಾಗಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮೊಂದಿಗೆ ಹಂಚಿಕೊಳ್ಳಿ.

Get real time updates directly on you device, subscribe now.